ಮುಲ್ಕಿ(ವಿಶ್ವಕನ್ನಡಿಗ ನ್ಯೂಸ್): ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮುಲ್ಕಿ ವಲಯ ಇವರ ಅಧೀನದಲ್ಲಿ ಇಂದು ಮುಲ್ಕಿ ಯಲ್ಲಿ ದಿನಾಂಕ 15-11-2020 ರ ಆದಿತ್ಯವಾರ ಬೆಳಿಗ್ಗೆ ನಾಲೂರು, ಕಾಂಪ್ಲೆಕ್ಸ್, ಕಾರ್ನಾಡು, ಮುಲ್ಕಿ ಯಲ್ಲಿ ಉಚಿತ ಮಾಹಿತಿ ಮತ್ತು ಸೇವಾ ಕೇಂದ್ರವು ಉದ್ಘಾಟನೆಗೊಂಡಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಪಿ.ಐ ಮುಲ್ಕಿ ಮೂಡುಬಿದಿರೆ ಕ್ಷೇತ್ರ ಅಧ್ಯಕ್ಷರಾದ ಆಸೀಫ್ ಕೋಟೆಬಾಗಿಲು ವಹಿಸಿದ್ದರು. ದುಆ ಆಶೀರ್ವಚನವನ್ನು ಮುಲ್ಕಿ ಶಾಫಿ ಜುಮಾ ಮಸೀದಿಯ ಖತೀಬರಾದ ಎಸ್.ಬಿ ಧಾರಿಮಿ ನೆರವೇರಿಸಿದರು.
ಉದ್ಘಾಟನೆಯನ್ನು ಬೆಥನಿ ಪಿ.ಯು ಕಾಲೇಜು ಕಿಲ್ಪಾಡಿ ಇಲ್ಲಿಯ ಪ್ರಾಂಶುಪಾಲರಾದ ವಂ|ಭಗಿನಿ ಎಸ್.ಆರ್ ಮಾರಿಲೋ ಜಿಎಸ್ ರವರು ನಡೆಸಿದರು.
ಮುಖ್ಯ ಅತಿಥಿಗಳಾಗಿ ಅಶೋಕ್ ಕುಮಾರ್ ಶೆಟ್ಟಿ(ಅಧ್ಯಕ್ಷರು, ರೋಟರಿ ಇಂಟರ್ ರ್ನ್ಯಾಷನಲ್, ಮುಲ್ಕಿ)ಲಿಯಾಕತ್ ಆಲಿ (ಅಧ್ಯಕ್ಷರು ಶಾಫೀ ಜುಮ್ಮಾ ಮಸೀದಿ)ವಂ|ಭಗಿನಿ ನಂದಿತ ಬಿ.ಎಸ್(ಸುಪೀರಿಯರ್, ಮೆಡಲಿನ್ ಕಾಂನ್ವೆಂಟ್, ಮುಲ್ಕಿ)ಶರೀಫ್ ಕೊಲ್ನಾಡು( ಅಧ್ಯಕ್ಷರು ಎಸ್.ಡಿ.ಪಿ.ಐ ಮುಲ್ಕಿ ಬ್ಲಾಕ್) ಇವರು ಭಾಗವಹಿಸಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.