ಪುತ್ತೂರು (www.vknews.com) : ನಿಝಾಂ ಕೊಳಂಬೆ ಸಾಹಿತ್ಯಕ್ಕೆ ಅಶ್ರಫ್ ಸವಣೂರು ಹಾಡಿದ ಹಾಡಿಗೆ ವ್ಯಾಪಕ ಪ್ರಶಂಸೆ ರಾಜ್ಯದಾದ್ಯಂತ ಗ್ರಾಮ ಪಂಚಾಯತ್ ಚುನಾವಣೆಯ ಕಾವೇರುತ್ತಿದ್ದಂತೆ ಸಾಮಾಜಿಕ ಜಾಲತಾಣದಾದ್ಯಂತ “ಓಟಿಗೆ ಸ್ವಿಚ್ಚು ಒತ್ತುವ ಹೊತ್ತು ಯೋಚಿಸು ಪ್ರೀತಿಯ ಮತದಾರ…” ಎನ್ನುವ ಚುನಾವಣಾ ಜಾಗೃತಿ ಗೀತೆಯೊಂದು ವೈರಲಾಗಿದ್ದು ಅಭ್ಯರ್ಥಿಗಳ ಬಹುಬೇಡಿಕೆಯ ಹಾಡಾಗಿ ಪರಿಣಮಿಸಿದೆ.
ಹಲವಾರು ವರ್ಷಗಳಿಂದ ಸಾಹಿತ್ಯ ರಂಗದಲ್ಲಿ ಸಕ್ರಿಯವಾಗಿರುವ, ಯುವ ಗೀತೆ ರಚನೆಕಾರ ನಿಝಾಂ ಕೊಳಂಬೆ ಸಾಹಿತ್ಯದಲ್ಲಿ ಹೊರಹೊಮ್ಮಿದ ಈ ಹಾಡಿಗೆ ಖ್ಯಾತ ಗಾಯಕ ಅಶ್ರಫ್ ಸವಣೂರು ಧ್ವನಿ ನೀಡಿದ್ದಾರೆ. ಕಳೆದ ವರ್ಷ NRC ವಿರುದ್ಧ ಹೋರಾಟದ ಸಂಧರ್ಭದಲ್ಲಿ ಕೂಡ ನಿಝಾಂ ಕೊಳಂಬೆ ರಚಿಸಿ, ಅಶ್ರಫ್ ಸವಣೂರು ಹಾಡಿರುವ “ಪೌರತ್ವ ದಂಗೆ” ಎಂಬ ಕ್ರಾಂತಿಗೀತೆಯೊಂದು ವ್ಯಾಪಕವಾಗಿ ಪ್ರಶಂಸೆಗೆ ಪಾತ್ರವಾಗಿದ್ದಲ್ಲದೆ, ದೆಹಲಿಯ ಶಾಹಿನ್ಬಾಗ್ ನಲ್ಲೂ ಸದ್ದು ಮಾಡಿತ್ತು. ಇದೇ ಮಾದರಿಯಲ್ಲಿ ಇದೀಗ ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷ, ಪಂಗಡಕ್ಕೆ ಒತ್ತು ಕೊಡದೇ, ಅಭಿವೃದ್ಧಿಗಾಗಿ ಮತ ಚಲಾಯಿಸಿರಿ ಎಂಬ ಸಂದೇಶ ಹೊಂದಿದ ಈ ಹಾಡು ಕೂಡ ಬಹಳಷ್ಟು ಸುದ್ದಿಯಾಗಿದೆ.
ಈ ಒಂದು ಪರಿಣಾಮಕಾರಿ ಗೀತೆಯನ್ನು ಕೆಲವು ಅಭ್ಯರ್ಥಿಗಳು ತಮ್ಮ ಪ್ರಚಾರಕ್ಕಾಗಿ ಬಳಸಿಕೊಂಡಿದ್ದಾರೆ. ವಿಶೇಷವಾಗಿ ಈಗಾಗಲೇ ನಡೆದ ಕೇರಳ ಸ್ಥಳೀಯ ಚುನಾವಣೆಯ ಗಡಿನಾಡಿದ ಅಭ್ಯರ್ಥಿಗಳು ಕೂಡ ಈ ಒಂದು ಹಾಡನ್ನು ತಮ್ಮ ಪ್ರಚಾರಾರ್ಥ ಬಳಸಿಕೊಂಡಿದ್ದು ಗಮನಾರ್ಹವಾಗಿದೆ.
ಈ ಹಾಡಿನ ಪೂರ್ತಿ ವಿಡಿಯೋ ಇಲ್ಲಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.