ಸುಳ್ಯ (ವಿಶ್ವ ಕನ್ನಡಿಗ ನ್ಯೂಸ್) : ಮಾಂಬ್ಳಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ 2020 ಡಿಸೆಂಬರ್ 27ರಂದು ಆಹ್ವಾನಿತ ತಂಡಗಳ ಬ್ಯಾಡ್ಮಿಟನ್ ಪಂದ್ಯಾಟ ನಡೆಸಲಾಯಿತು.
ಡಿಸೆಂಬರ್ 27 ರಂದು ಆದಿತ್ಯವಾರ ಬೆಳಿಗ್ಗೆ ಪ್ರಾರಂಭಗೊಂಡು, ರಾತ್ರಿ 1 ಗಂಟೆ ತನಕ ಮುಂದುವರೆಯಿತು, ಬೆಳಗ್ಗೆ 7 ಗಂಟೆಗೆ ಸರಿಯಾಗಿ ಪಂದ್ಯಾಟದ ಉದ್ಘಾಟನಾ ಸಮಾರಂಭ ನಡೆಯಿತ್ತು, ಸಭೆಯ ಅಧ್ಯಕ್ಷೆತೆಯನ್ನು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ಜನಾಬ್ : ಉಮ್ಮರ್ ಬುಶ್ರಾ ವಹಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸುಳ್ಯ ಮೊಬೈಲ್ ರೀಟೈಲ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಹಾಗು ಡಾಕ್ಟರ್ ರಿಝ್ವಾನ್ ಸುಳ್ಯ ಇವರು ಶಟಲ್ ಆಡುವ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿದರು. ಸಾಮಾಜಿಕ ಕಾರ್ಯಕರ್ತ ಜನಾಬ್ : ತಾವೀದ್ ಹಾಗು ಮೆಟ್ರೋ ಫರ್ನಿಚರ್ ಸುಳ್ಯ ಇದರ ಮಾಲಕರಾದ ಹನೀಫ್ ಮೆಟ್ರೋ ವೇದಿಕೆಯಲ್ಲಿ ಉಪಸಿತರಿದ್ದರು .
ಬಳಿಕ ಆಹ್ವಾನಿತ 12 ತಂಡಗಳ ಮದ್ಯೆ ಲೀಗ್ ಮಾದರಿಯ ಬ್ಯಾಡ್ಮಿಟನ್ ಪಂದ್ಯಾಟಗಳು ನಡೆದು ರಾತ್ರಿ 1 ಗಂಟೆಗೆ ಆವೇಶಕರವಾದ ಫೈನಲ್ ಪಂದ್ಯ ನಡೆಯಿತು.
ಹಾಶಿಮ್ ಹಾಗು ಲತೀಫ್ ಜಿಗ್ಗ ಇವರು ವಿಜಯಿಯಾಗಿ ಹೊರಹೊಮ್ಮಿದರು. ನಾಸಿರ್ ಪಾಲಡ್ಕ ಹಾಗು ಕಲಂದರ್ ಮಾಂಬ್ಳಿ ಇವರು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು, ಸಫ್ವಾನ್ ಮಾಂಬ್ಳಿ ಹಾಗು ಶುಕೂರ್ KH ಇವರ ತಂಡ ತೃತೀಯ ಸ್ಥಾನ ಪಡೆದುಗೊಂಡರು.
ಕೊನೆಗೆ ನಡೆದ ಸಮಾರೋಪ ಹಾಗು ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಪೋರ್ಟ್ಸ್ ಕ್ಲಬ್ ನ ಫೈನಾನ್ಸ್ ಸೆಕ್ರೆಟರಿ ಜನಾಬ್ ಮುಹಮ್ಮದ್ ದುಗ್ಗಲಡ್ಕ ವಹಿಸಿದರು. ಮುಖ್ಯ ಅತಿಥಿಗಳಾಗಿ ಉಪಸಿತರಿದ್ದ ಎನ್ನಾರೈ ಸದಸ್ಯರಾದ ಕಬೀರ್ ಪನ್ನೇ, ಸ್ಪೋರ್ಟ್ಸ್ ಕ್ಲಬ್ ಸಲಹೆಗಾರರಾದ ಜನಾಬ್ ಬಷೀರ್ ಪೈಚಾರ್ ಹಾಗು ಕಬೀರ್ ಮಾಂಬ್ಳಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ಸ್ಪೋರ್ಟ್ಸ್ ಕ್ಲಬ್ ಸೆಕ್ರೆಟರಿ ಕಮಾಲ್ ಏ ಬಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಪಂದ್ಯಕೂಟಕ್ಕೆ ಪ್ರಾಯೋಜಕರಾಗಿ ಜಲೀಲ್ ಬಹರೇನ್, ಸಾಬಿತ್ ಓಮನ್, ಶುಕೂರ್ ನಾವೂರ್, ವಾಸಿಂ ಸುಳ್ಯ, ಸಫ್ವಾನ್ ಮಾಂಬ್ಳಿ, ಬಷೀರ್ ಪೈಚಾರ್, ಕಬೀರ್ ಮಾಂಬ್ಳಿ, ಹೋಟೆಲ್ ಚಾಯ್ಸ್, ರಶೀದ್ ಮಾಂಬ್ಳಿ, ಹನೀಫ್ ಮೆಟ್ರೋ, ಅಬ್ದುಲ್ ರಹಿಮಾನ್ ಸುಳ್ಯ, ಕಬೀರ್ ಪನ್ನೇ ಮೊದಲಾದವರು ಸಹಕರಿಸಿದರು.
ಕಲಂದರ್ ಮಾಂಬ್ಳಿ ಇವರ ನೇತೃತ್ವದಲ್ಲಿ ಅಚ್ಚುಕಟ್ಟಾಗಿ ಲೈಟ್ ವೆವಸ್ಥೆ ಮಾಡಲಾಯಿತು, ಅಬ್ಬಾಸ್ ಮಾಂಬ್ಳಿ ಇವರ ನೇತೃತ್ವದಲ್ಲಿ ರಾತ್ರಿ ಊಟದ ವೆವಸ್ಥೆ ಮಾಡಲಾಯಿತು, ಕೊನೆಯಲ್ಲಿ ಸಹಕರಿಸಿದ ಎಲ್ಲರಿಗು ಧನ್ಯವಾದ ಸಲ್ಲಿಸಿ ಪಂದ್ಯಕೂಟವನ್ನು ಮುಕ್ತಾಯಗೊಳಿಸಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.