ಪುತ್ತಿಗೆ (www.vknews.com) : ಮುಹಿಮ್ಮಾತ್ ಸಾರಥಿಗಳು ಹಲವಾರು ಜನ ಪರ ಯೋಜನೆಗಳನ್ನೊಳಗೊಂಡ ಅಭಿವೃದ್ಧಿ ಸೂಚಿಯನ್ನು ನೂತನವಾಗಿ ಚನಾಯಿತರಾದ ಜನ ಪ್ರತತಿನಿಧಿಗಳ ಮುಂದಿರಿಸಿದರು. ಮುಹಿಮ್ಮಾತ್ ಕ್ಯಾಪಸಿನಲ್ಲಿ ಪುತ್ತಿಗೆ ಗ್ರಾಮ ಪಂಚಾಯತಿನ ಪ್ರತಿನಿಧಿಗಳಿಗೆ ಏರ್ಪಡಿಸಿದ ಅಭಿನಂದನಾ ಸಭೆಯಲ್ಲಾಗಿದೆ ಅಭಿವೃದ್ಧಿ ಸೂಚಿಯ ಹಸ್ತಾಂತರ. ಶಿಕ್ಷಣ, ಉದ್ಯೋಗ, ಕೃಷಿ, ಸಾಂಸ್ಕೃತಿಕ ಮತ್ತು ಸಾಮಾಜಿಕ ಸುರಕ್ಷತೆ ಮುಂತಾದ ಕ್ಷೇತ್ರಗಳಲ್ಲಿ ಕ್ರಿಯಾತ್ಮಕ ನಿರ್ದೇಶನಗಳನ್ನೊಳಗೊಂಡದ್ದಾಗಿದೆೆ ಮುಹಿಮ್ಮಾತ್ ಅಭಿವೃದ್ಧಿ ಸೂಚಿ. ರಸ್ತೆ, ಕುಡಿಯುವ ನೀರು, ಮೂಲಭೂತ ಸೌರ್ಯ ಮುಂತಾದವುಗಳಲ್ಲಿ ಪುತ್ತಿಗೆ ಗ್ರಾಮ ಪಂಚಾಯತಿನ ವಿವಿಧ ವಾರ್ಡುಗಳು ಎದುರಿಸುತ್ತಿರುವ ಸಮಸ್ಯಗಳನ್ನು ಇದು ಎತ್ತಿ ತೋರಿಸಿದೆ.
ಅಭಿನಂದನಾ ಸಭೆಯನ್ನು ಮುಹಿಮ್ಮಾತ್ ಪ್ರಧಾನ ಕಾರ್ಯದರ್ಶಿ ಬಿ ಎಸ್ ಅಬ್ದುಲ್ಲಾ ಕುಂಞÂ ಫೈಝಿಯವರು ಉದ್ಘಾಟಿಸಿದರು. ಮುಹಿಮ್ಮಾತ್ ಪಿ ಆರ್ ಓ ಸಯ್ಯಿದ್ ಹಾಮಿದ್ ಅನ್ವರ್ ಅಲ್ ಅಹ್ದಲ್ ಅಧ್ಯಕ್ಷತೆ ವಹಿಸಿದರು. ಜನರಲ್ ಮ್ಯಾನೇಜರ್ ಉಮರ್ ಸಖಾಫಿ ಅಭಿವೃದ್ಧಿ ಸೂಚಿಯನ್ನು ಪಂಚಾಯತ್ ಅಧ್ಯಕ್ಷರಾದ ಸುಬ್ಬಣ್ಣರವರಿಗೆ ಹಸ್ತಾಂತರಿಸಿದರು. ಜನತೆ ಮತ್ತು ಜನಪ್ರತಿನಿಧಿಗಳು ಜೊತೆಯಾಗಿರುವ ಅಭಿವೃದ್ದಿಯಾಗಿದೆ ಪುತ್ತಿಗೆ ಪಂಚಾಯತ್ ಉದ್ದೇಶಿಸುವುದು ಎಂದು ಅಧ್ಯಕ್ಷರಾದ ಸುಬ್ಬಣ್ಣ ಆಳ್ವರವರು ಹೇಳಿದರು. ಮುಹಿಮ್ಮಾತ್ ಕಾರ್ಯದರ್ಶಿ ಸುಲೈಮಾನ್ ಕರಿವೆಲ್ಲೂರು ವಿಷಯ ಮಂಡನೆ ನಡೆಸಿದರು.
ಪುತ್ತಿಗೆ ಗ್ರಾಮ ಪಂಚಾಯತ್ ಸದಸ್ಯರಾದ ಗಂಗಾದರ (ಚೆನ್ನಿಕ್ಕೊಡಿ), ಶಾಂತಿ ವೈ (ಧರ್ಮತ್ತಡ್ಕ), ಆಸಿಫ್ ಅಲಿ ಸಿ ಎಂ (ದೇರಡ್ಕ), ಅನಿತಾ ಎಂ (ಬಾಡೂರು), ಅಬ್ದುಲ್ ಮಜೀದ್ ಎಂ (ಮುಗು), ಜಯಂತಿ (ಉರುಮಿ) ಪಾಲಕ್ಷ ರೈ (ಊಜಪದವು), ಕಾವ್ಯಶ್ರೀ ಪಿ ಕೆ (ಸೀತಾಂಗೋಳಿ) ಜನಾರ್ಧ ಪೂಜಾರಿ (ಕಣ್ಣೂರು), ಅನಿತಾ ಶ್ರೀ (ಎಡನಾಡ್) ಜಯಂತಿ (ಮುಕಾರಿಕಂಡ), ಕೇಶವ ಎಸ್ ಆರ್ (ಪುತ್ತಿಗೆ) ಹಾಗೂ ಪ್ರೇಮ ಪಿ ವಿ (ಅಂಗಡಿಮುಗರ್) ಚರ್ಚೆಯಲ್ಲಿ ಭಾಗವಹಿಸಿದರು. ಮುಹಿಮ್ಮಾತ್ ಉಪಾಧ್ಯಕ್ಷರುಗಳಾದ ಸಯ್ಯಿದ್ ಹಬೀಬ್ ಅಹ್ದಲ್ ತಂಙಳ್, ಸಿ ಎನ್ ಅಬ್ದುಲ್ ಖಾದಿರ್ ಮಾಸ್ಟರ್, ಕೇರಳ ಮುಸ್ಲಿಂ ಜಮಾಅತ್ ಜಿಲ್ಲಾ ಉಪಾಧ್ಯಕ್ಷರಾದ ಕಂದಲ್ ಸೂಫಿ ಮದನಿ, ಮುಹಿಮ್ಮಾತ್ ಪಿ ಆರ್ ಸೆಕ್ರೆಟರಿ ಅಬ್ದುಲ್ ಖಾದಿರ್ ಸಖಾಫಿ ಮೊಗ್ರಾಲ್ ಪ್ರತಿನಿಧಿಗಳಿಗೆ ಮುಹಿಮ್ಮಾತಿನ ಸ್ಮರಣಿಕೆಯನ್ನು ನೀಡಿದರು. ಮೂಸ ಸಖಾಫಿ ಕಳತ್ತೂರು ಸ್ವಾಗತಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.