(www.vknews.com) : ನಿನ್ನೆಯಿಂದ ಪ್ರತೀ ನಿಮಿಷವು ಬಹಳ ಬೇಸರವನ್ನುಂಟುಮಾಡುತ್ತಿದೆ. ಯಾಕೆಂದರೆ ನಾ ಹೀಗೆ ಸೋಶಿಯಲ್ ಮೀಡಿಯಾದಲ್ಲಿ ವಾಟ್ಸಪ್ ಗ್ರೂಪ್ ತೆರೆದಂತೆ ಪುಟ್ಟ ಕಂದಮ್ಮಗಳ ಫೋಟೋಗಳು ಕಾಣಸಿಕ್ಕಿತ್ತು. ವಿಷಯವನ್ನು ನೋಡಿದಾಗ ಮನದಲ್ಲಿ ದುಃಖವಾಯಿತು. ಏನಿತ್ತಂದರೆ ಅದರಲ್ಲೊಂದು ಘಟನೆಯಾಗಿದೆ ಕಕ್ಕಿಂಜೆಯಲ್ಲಿ ತನ್ನ ಅಜ್ಜಿ ಮನೆಗೆ ಎಂದು ಬಂದಂತಹ 9 ವರ್ಷದ ಮಗು ನೀರಿಗೆ ಬಿದ್ದು ಮೃತವಾದಂತಹ ಘಟನೆಯಾಗಿತ್ತು. ಬಹಳಷ್ಟು ದುಃಖವಾಯಿತು, ತನ್ನ ಅಜ್ಜನಿಗೆ ಉಷಾರಿಲ್ಲವೆಂದು ತಂದೆ ತಾಯಿ ಜೊತೆ ಬಂದಂತಹ ಆ ಪುಟ್ಟ ಜೀವವು ಇಡೀ ಕುಟುಂಬವನ್ನೇ ಕಣ್ಣೀರು ಹಾಕಿಸಿತು. ಹೀಗೆ ಮತ್ತೆಯು ಅದೇ ಸಮಯದಲ್ಲಿ ಇನ್ನೊಂದು ಘಟನೆ ಕಾಣಸಿಗುತ್ತದೆ.
ಪುತ್ತೂರಿನ ವಿಟ್ಲದಲ್ಲಿ ನಡೆದಂತಹ ಒಂದು ದುರ್ಘಟನೆ ಸುಮಾರು ಮೂರು ವರ್ಷದ ಪ್ರಾಯದ ಹುಡುಗಿ ತನ್ನ ಮಾವನ ಮಕ್ಕಳ ಜೊತೆ ತೋಟದಲ್ಲಿ ಆಟವಾಡುತ್ತಿರುವಾಗ ಕಾಲು ಜಾರಿ ಕೆರೆಗೆ ಬಿದ್ದಳು, ಮಾವನ ಮಕ್ಕಳು ಬಂದು ಮನೆಯಲ್ಲಿ ವಿಷಯ ತಿಳಿಸಿ ಆಸ್ಪತ್ರೆ ಸೇರುವಲ್ಲಿ ಕಂದಮ್ಮಳ ಪ್ರಾಣಪಕ್ಷಿಯು ಹಾರಿಹೋಗಿತ್ತು.
ಇಷ್ಟೆಲ್ಲಾ ಘಟನೆಗಳು ಆದರೂ ಹೆತ್ತವರು ವಾಟ್ಸಪ್ ಸ್ಟೇಟಸ್ಗೇ ಸೀಮಿತವಾಗಿದ್ದಾರೆ, ಎಂಬೂದು ಮತ್ತೆರೆಡು ಘಟನೆಗಳಲ್ಲಿ ತಿಳಿಯುತ್ತದೆ. ಅವುಗಳಲ್ಲಿ ಹುಬ್ಬಳ್ಳಿಯಲ್ಲಿ ಐದು ವರ್ಷದ ಮಗು ನೀರಿನ ಟ್ಯಾಂಕಿಗೆ ಬಿದ್ದು ತನ್ನ ಜೀವವನ್ನು ಕಳೆದುಕೊಂಡಿದೆಯಾದರೆ ಇನ್ನು ನಮ್ಮ ಹತ್ತಿರದ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಲ್ಲಿ ಒಂದು ವರೆ ವರ್ಷದ ಮಗು ಆಟವಾಡುತ್ತಿದ್ದಾಗ ಸೀಮೆಎಣ್ಣೆಯನ್ನು ಕುಡಿದು ತನ್ನ ಅಮೂಲ್ಯವಾದ ಜೀವವನ್ನು ಕಳೆದುಕೊಂಡಿದೆ.
ಹೆತ್ತವರೇ……..
ಇದು ಸುಳ್ಳು ಸುದ್ದಿಯಲ್ಲ, ಇಂದು ನಡೆದ ವಾಸ್ತವ ಘಟೆನೆಗಳಾಗಿವೆ. ನಾನು ನೀವೆಲ್ಲರೂ ನಿನ್ನೆಯಿಂದ ವಾಟ್ಸಪ್ ನಲ್ಲಿ ಹರಿದಾಡುತ್ತಿರುವ ಪುಟ್ಟ ಕಂದಮ್ಮಗಳ ಫೋಟೋಗಳನ್ನು ನೋಡುವಾಗ ತಮಗೆ ಅರಿವಿಲ್ಲದೆಯೇ ಕಣ್ಣೀರ ಹಣಿಯು ಜಾರಿ ಬಿದ್ದದು ಬಾಸವಾಗಿದೆ. ಇದಕ್ಕೆಲ್ಲ ಮುಖ್ಯ ಕಾರಣವೇ ಹೆತ್ತ ತಂದೆ-ತಾಯಿಯರು, ದಯವಿಟ್ಟು ಕ್ಷಮಿಸಿ ನಿಮ್ಮಲ್ಲಿ ಮಕ್ಕಳನ್ನು ಜಾಗರೂಕತೆಯಿಂದ ನೋಡಿಕೊಳ್ಳುವವರು ಇದ್ದಾರೆ, ಆದರೆ ಕೆಲವು ಹೆತ್ತವರು ತನಗೆ ಅರಿವಿಲ್ಲದಯೇ ಕಣ್ತಪ್ಪಿ ಇಂತಹ ಘಟನೆಗಳು ಆಗುವ ಸಂದರ್ಭದಲ್ಲೂ ಅದಕ್ಕೆ ಅವಕಾಶ ಮಾಡಿಕೊಡಬಾರದು. ಪುಟಾಣಿ ಕಂದಮ್ಮಗಳನ್ನು ನೋಡುವಾಗ ಯಾವ ರೀತಿಯಲ್ಲಿ ನೋಡಬೇಕು, ತನ್ನ ಕಣ್ಣನ್ನು ತಪ್ಪಿಸಿ ಒಂದಿಂಚು ಅಲುಗಾಡದಂತೆ ನೋಡಿಕೊಳ್ಳುವುದು ಅನಿವಾರ್ಯವಾಗಿದೆ.
ತಂದೆತಾಯಿಯರ ಕಣ್ತಪ್ಪಿ ಅರಿಯದ ಒಂದು ಸೆಂಕಡುಗಳ ಕಾರಣದಿಂದ ತನ್ನ ಪುಟ್ಟ ಕಂದಮ್ಮಗಳನ್ನು ಕಳೆದು ನಿಂತು ಕೊಲ್ಲುವಂತಹ ಪರಿಸ್ಥಿತಿ ಇಂದು ಕೆಲವು ಹೆತ್ತವರಿಗೆ ಬಂದುಬಿಟ್ಟಿದೆ. ಇದಕ್ಕೆಲ್ಲ ಕಾರಣವೇ ಹೆತ್ತ ತಂದೆ-ತಾಯಿ ತನ್ನ ಮಕ್ಕಳನ್ನು ಪ್ರೀತಿಸಿ ಸ್ಟೇಟಸ್ಗಳಲ್ಲಿ ಫೋಟೋ ಹಾಕುವುದು ಮಾತ್ರವಲ್ಲದೆ ತನ್ನ ಕಂದಮ್ಮನನ್ನು ಯಾವ ರೀತಿ ಜಾಗರೂಕತೆಯಿಂದ ನೋಡಬೇಕೆಂಬುದು ತಿಳಿದಿರಬೇಕು.
ಹೆತ್ತವರಲ್ಲಿ ನನ್ನ ವಿನಂತಿ….
– ಯಾಸೀನ್ ಬಂಗೇರಕಟ್ಟೆ
ನನ್ನೆಲ್ಲಾ ಓದುಗರೆ.. ತಮ್ಮಲ್ಲಿ ಒಂದು ವಿನಂತಿಯನ್ನು ಮಾಡುತ್ತಿದ್ದೇನೆ. ಏನಂದರೆ ನಿಮ್ಮ ಅಮೂಲ್ಯವಾದಂತಹ ಒಂದು ಆಸ್ತಿಯನ್ನು ಕಳೆದುಕೊಳ್ಳಬೇಡಿ, ನೀವು ಹೆತ್ತಂತಹ ಕಂದಮ್ಮಗಳನ್ನು ಜಾಗರೂಕತೆಯಿಂದ ನೋಡಿಕೊಳ್ಳಿ, ನಿಮ್ಮ ಕೈತಪ್ಪಿಹೋಗದಂತೆ, ನಿಮ್ಮ ಮಕ್ಕಳ ವಯಸ್ಸಿಗೆ ತಕ್ಕಂತಹ ಅವರಿಗೆ ಆಟವಾಡಲು ಅನುಮತಿ ಕೊಡಿ,
ನೀರಿರುವ ಜಾಗದಲ್ಲಿ ನಿಮ್ಮ ಮಕ್ಕಳನ್ನು ಆಟವಾಡುವುದನ್ನು ತಡೆಹಿಡಿಯಿರಿ. ನಿಮ್ಮ ಮಕ್ಕಳನ್ನು ಕೆರೆ, ಬಾವಿ, ಕಣಿವೆ ಇನ್ನಿತ್ತರ ಸ್ಥಳಗಳು ಇರುವಲ್ಲಿ ಆಟವಾಡಲು ಬಿಡಬೇಡಿ. ನೀವು ಎಚ್ಟರ ತಪ್ಪಿದಲ್ಲಿ ನಿಮ್ಮ ಮಕ್ಕಳನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿ ಉಂಟಾಗುತ್ತದೆ.
“ನಮ್ಮ ಮಕ್ಕಳು ನಮ್ಮ ಆಸ್ತಿ.”
ಬರಹ : ಯಾಸೀನ್ ಬಂಗೇರಕಟ್ಟೆ ಪತ್ರಿಕೋದ್ಯಮ ವಿದ್ಯಾರ್ಥಿ,ಉಜಿರೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.