ದಮ್ಮಾಮ್(ವಿಶ್ವಕನ್ನಡಿಗ ನ್ಯೂಸ್): ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಕೇಂದ್ರ ಸಮಿತಿ ಮಂಗಳೂರು ಇದರ 25 ನೇ ವಾರ್ಷಿಕ ಮಹಾಸಭೆ 1, ಜನವರಿ 2021 ಶುಕ್ರವಾರ ಜುಮಾ ನಮಾಝಿನ ಬಳಿಕ ದಮ್ಮಾಂ ನಲ್ಲಿ ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಜನಾಬ್ ಹಾತಿಂ ಕಂಚಿಯವರ ಘನ ಅಧ್ಯಕ್ಷತೆಯಲ್ಲಿ ಜರಗಿತು.ಸಿಲ್ವರ್ ಜುಬಿಲಿ ಸಮಿತಿ ಅಧ್ಯಕ್ಷ ಸಯ್ಯದ್ ಮುಹಮ್ಮದ್ ತಂಙಳ್ ಉಚ್ಚಿಲರವರು ದುಆ ಗೈದರು.
ಕೇಂದ್ರ ಸಮಿತಿ ದಾಯಿ ಪಿ.ಎಚ್. ಇಸ್ಮಾಯೀಲ್ ಮುಸ್ಲಿಯಾರ್ ಸುನ್ನಿ ಸೆಂಟರ್ ನ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು ಹಾಗೂ ಡಿಕೆಯಸ್ಸಿ ಅಧ್ಯಕ್ಷರಾದ ಅಲ್ ಹಾಜ್ ಅಸ್ಸಯ್ಯಿದ್ ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್ ಹಿತವಚನಗಳನ್ನು ನೀಡಿ ಅಲ್ಲಾಹನ ಪವಿತ್ರ ನಾಮದೊಂದಿಗೆ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.ಜೊತೆ ಕಾರ್ಯದರ್ಶಿ ಜನಾಬ್ ಅಬೂಬಕ್ಕರ್ ಬರ್ವ ಮತ್ತು ಕೇಂದ್ರ ಸಮಿತಿ ಕಛೇರಿ ಕಾರ್ಯದರ್ಶಿ ಇಸ್ಮಾಯೀಲ್ ಕಾಟಿಪಳ್ಳ ವಾರ್ಷಿಕ ವರದಿ ವಾಚಿಸಿದರು ಹಾಗೂ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಜನಾಬ್ ಮುಹಮ್ಮದ್ ಹಸನ್ ಮೂಡುತೋಟ ಅಭಿವೃದ್ಧಿ ಕಾರ್ಯಗಳ ಚಟುವಟಿಕೆಗಳನ್ನು ಸಭೆಯಲ್ಲಿ ಮಂಡಿಸಿ ಸಭೆಯ ಅನುಮೋದನೆಯನ್ನು ಪಡೆದರು.
ಕೇಂದ್ರ ಸಮಿತಿ ಅಧೀನದ ಎಲ್ಲಾ ರಾಷ್ಟೀಯ ಸಮಿತಿಗಳ ಗಣ್ಯರು ಕೇಂದ್ರ ಸಮಿತಿಯ ಕಾರ್ಯವೈಖರಿಯನ್ನು ಶ್ಲಾಘಿಸಿದರು ಹಾಗೂ ನೂತನ ಸಮಿತಿಗೆ ಶುಭ ಹಾರೈಸಿದರು.ಮರ್ಕಝ್ ಸಮಿತಿ, ಡೆವೆಲಪ್ ಮೆಂಟ್ ಸಮಿತಿ ಹಾಗೂ ಗೈಡೆನ್ಸ್ ಬ್ಯೂರೋ ದ ಪತ್ರ ಗಳನ್ನು ಕ್ರಮ ಪ್ರಕಾರವಾಗಿ ಅಬ್ದುಲ್ ಅಝೀಝ್ ಆತೂರು, ದಾವೂದ್ ಕಜೆಮಾರ್ ಮತ್ತು ಅಬ್ದುಲ್ ಅಝೀಝ್ ಬಜ್ಪೆ ವಾಚಿಸಿದರು.
2021-22 ನೇ ಸಾಲಿಗೆ ನೂತನ ಸಮಿತಿ ಯನ್ನು ಜನಾಬ್ ಇಸ್ಮಾಯಿಲ್ ಹೊಸಂಗಡಿ ನೇತೃತ್ವದಲ್ಲಿ ಆರಿಸಲಾಯಿತು.
ಅಧ್ಯಕ್ಷರಾಗಿ ಸಯ್ಯದ್ ಕುಂಬೋಲ್ ತಂಙಳ್, ಕಾರ್ಯಾಧ್ಯಕ್ಷ ರಾಗಿ ಸಯ್ಯಿದ್ ಮುಹಮ್ಮದ್ ತಂಙಳ್ ಉಚ್ಚಿಲ, ಪ್ರಧಾನ ಕಾರ್ಯದರ್ಶಿ ಯಾಗಿ ಸುಲೈಮಾನ್ ಸೂರಿಂಜೆ, ಕೋಶಾಧಿಕಾರಿ ಯಾಗಿ ದಾವೂದ್ ಕಜಮಾರ್ ಮತ್ತು ಸಂಘಟನಾ ಕಾರ್ಯದರ್ಶಿಯಾಗಿ ಅಬ್ದುಲ್ ಹಮೀದ್ ಅರಾಮೆಕ್ಸ್ ಉಳ್ಳಾಲ, ಉಪಾಧ್ಯಕ್ಷರುಗಳಾಗಿ ಕೆ.ಹೆಚ್. ಮುಹಮ್ಮದ್ ರಫೀಖ್ ಸೂರಿಂಜೆ, ಸೀದಿ ಹಾಜಿ ಬಹ್ರೈನ್, ಮುಹಮ್ಮದ್ ಇಕ್ಬಾಲ್ ಕನ್ನಂಗಾರ್ ಹಾಗೂ ಇಮ್ತಿಯಾಝ್ ಕುಂದಾಪುರ, ಕಾರ್ಯದರ್ಶಿಗಳಾಗಿ ಅಬೂಬಕ್ಕರ್ ಬರ್ವ, ಅಬ್ದುಲ್ ಗಫೂರ್ ಸಜಿಪ, ಯೂಸುಫ್ ಆರ್ಲಪದವು ಯು.ಎ.ಇ. ಹಾಗೂ ಅಬ್ದುಲ್ ಮಜೀದ್ ಕನ್ನಂಗಾರ್, ಸಂಚಾಲಕರುಗಳಾಗಿ ಎಂ.ಇ. ಮೂಳೂರು ಯು.ಎ.ಇ., ಮೋನಬ್ಬ ಅಬ್ದುಲ್ ರಹ್ಮಾನ್ ಒಮಾನ್, ಹಾತಿಂ ಕಂಚಿ, ಮುಹಮ್ಮದ್ ಹಸನ್ ಮೂಡುತೋಟ, ಹಾತಿಂ ಕೂಳೂರು ಹಾಗೂ ಅಬ್ದುಲ್ ಅಝೀಝ್ ಆತೂರು ಹಾಗೂ ಉಸ್ಮಾನ್ ಅರಾಮೆಕ್ಸ್ ಹೊಸಂಗಡಿ, ಲೆಕ್ಕ ಪರಿಶೋಧಕರಾಗಿ ಇಸ್ಮಾಯಿಲ್ ಅರಾಮೆಕ್ಸ್ ಹಾಗೂ ಅಬ್ದುಲ್ ಕರೀಮ್ ಮೂಳೂರು ಇವರುಗಳನ್ನು ಆರಿಸಲಾಯಿತು.
ಇಸ್ಮಾಯೀಲ್ ಕಾಟಿಪಳ್ಳರವರು ಖುರ್’ಆನ್ ಪಠಿಸಿದರು.ಕೇಂದ್ರ ಸಮಿತಿ ಕೋಶಾಧಿಕಾರಿ ಜನಾಬ್ ಸುಲೈಮಾನ್ ಸೂರಿಂಜೆ ಸಭೆಗೆ ಆಗಮಿಸಿದ ಸದಸ್ಯರನ್ನು ಸ್ವಾಗತಿಸಿದರು.ಅಬ್ದುಲ್ ಹಮೀದ್ ಅರಾಮೆಕ್ಸ್ ಧನ್ಯವಾದಗೈದರು. ಸುಲೈಮಾನ್ ಸೂರಿಂಜೆ ಕಾರ್ಯಕ್ರಮ ನಿರೂಪಿಸಿದರು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.