(www.vknews.com) : ಹಾಯ್ ಓದುಗರೇ…. ಬರಹದ ಟೈಟಲ್ ನೋಡಿದಾಗ ನಿಮಗೆ ಏನಿದು ವಿಚಿತ್ರವೆನಿಸರಬಹುದು. ಹೌದು ಇಂತಹ ವಿಚಿತ್ರವಾದಂತಹ ಘಟನೆ ಇ ಪ್ರಪಂಚದಲ್ಲಿ ನಡೆದಿದೆ.
ಹಿಂದಿನ ಬರಹದಲ್ಲಿ ನಾನು ಮಕ್ಕಳನ್ನು ಯಾವ ರೀತಿ ಪ್ರೀತಿಸಬೇಕು, ಯಾವ ರೀತಿ ಜಾಗರೂಕತೆಯಿಂದ ನೋಡಿಕೊಳ್ಳಬೇಕು ?? ಎಂದು ಬರೆದಿದ್ದೆ. ನಮ್ಮ ಕಣ್ತಪ್ಪಿನಿಂದ ಅಮೂಲ್ಯವಾದ ಜೀವವನ್ನು ಕಳೆದುಕೊಳ್ಳುತ್ತೇವೆ ಎಂದು ಹೇಳಿದ್ದೆ….
ಆದರೆ ಇವತ್ತಿನ ಘಟನೆ ಬಹಳಷ್ಟು ದುಃಖಕರವಾಗಿತ್ತು, ಜೀವನದಲ್ಲಿ ಇಂತಹ ಘಟನೆಯನ್ನು ಕೇಳಲು ಸಿಗುತ್ತದೆ ಎಂದು ನಾನು ಊಹಿಸಿಕೂಡ ಇರಲಿಲ್ಲ. ಹೆತ್ತ ಕಂದಮ್ಮನನ್ನೇ ಕೊಂದ ಘಟನೆ ಬೋಪಾಲ್ ನ ಅಶೋಕ ನಗರದಲ್ಲಿ ನಡೆದಿದೆ. ವಯಸ್ಸು ಕೇಳಿದರೆ ಮೈ ಜುಂ…..! ಎಂದು ಆಗುತ್ತದೆ. 8 ತಿಂಗಳ ಹಸುಗೂಸು ತಾಯಿಯ ಕೈಗೆ ಶರಣಾಗಬೇಕಾದ ಪರಿಸ್ಥಿತಿ ಬಂದಿದೆ. ಮಗು ತನ್ನ ಹೆಸರು ಕೂಡ ತಿಳಿದಿಲ್ಲ, ತನಗೆ ಬೇಕಾದ ರೀತಿಯಲ್ಲಿ ಮಾತನಾಡಲು ತುಟಿಯನ್ನು ಅಲುಗಾಡಿಸಿಲ್ಲ, ತನ್ನ ಕಾಲಿನ ಎರಡು ಪಾದಗಳಿಂದ ಎದ್ದುನಿಲ್ಲಲು ಕೂಡ ಕಲಿಯಲಿಲ್ಲ, ಅಂತಹ ಮಗುವನ್ನು ಆ ಕ್ರೂರ ತಾಯಿ ಕೊಡಲಿಯಿಂದ ರಸ್ತೆ ಮಧ್ಯದಲ್ಲಿ ಕೊಚ್ಚಿ ಕೊಂದು ಬಿಟ್ಟಿತ್ತು.
ಮಕ್ಕಳು ನಮ್ಮ ಆಸ್ತಿ ಎಂದು ಹೇಳುತ್ತೇವೆ, ಆದರೆ ನಮ್ಮಲ್ಲಿರುವ ಸಂಪತ್ತಿಗೆ ಕೊಡುವ ಬೆಲೆಯನ್ನು ಅಮೂಲ್ಯವಾದ ಜೀವಕ್ಕೆ ಕೊಡುತ್ತಿಲ್ಲ. ಇನ್ನೂ ಆ ಮಗುವನ್ನು ಸಾಯಿಸಿ ಆ ಮೃತದೇಹವನ್ನು ಮನೆಗೆ ತಂದಾಗ ಮನೆಯವರು ಮಗುವನ್ನು ಯಾಕೇ ಕೊಂದೆ ವಿಚಾರಿಸಿದಾಗ “ಆದು ಮಗುವಲ್ಲ,,,,ಕುರಿ..!” ಎಂದು ವಿಚಿತ್ರವಾದ ಉತ್ತರ ನೀಡಿದ್ದಾಳೆ.
ಇ ಕೃತ್ಯವನ್ನು ಖಂಡಿಸಿ ಪತ್ನಿಯ ವಿರುದ್ಧ ಪತಿ ಪೋಲಿಸ್ ಮೋರೆ ಹೋಗಿದ್ದು, ಪೋಲಿಸರು ಮಗುವಿನ ತಾಯಲ್ಲಿ ವಿಚಾರಿಸಿದಾಗ “ಮಗು ಮೆಟ್ಟಿಲಿನಿಂದ ಬಿದ್ದು ಸತ್ತು ಹೋಗಿದೆ” ಎಂದು ಉತ್ತರ ನೀಡಿದ್ದಾಳೆ.
ಎಂತಹ ವಿಚಿತ್ರವಲ್ಲವೇ…?? ಕಾಲವೂ ಬದಲಾಗಿದೆ, ತಂದೆ,ತಾಯಿ,ಮಗು ಮಕ್ಕಳು ಎಲ್ಲರ ಪ್ರೀತಿ, ಕಾಳಜಿ ದಿನನಿತ್ಯ ಕಡಿಮೆಯಾಗುತ್ತಿದೆ. ಇವೆಲ್ಲವನ್ನೂ ಮೊದಲಿನ ರೀತಿಯಲ್ಲಿ ತರಬೇಕಾದ ಜವಾಬ್ದಾರಿ ನಮಗೆ ಇದೆ. ನಾವೆಲ್ಲರೂ ನಮ್ಮವರನ್ನು ಕಾಳಜಿಯಿಂದ ನೋಡಿಕೊಳ್ಳುವುದರ ಜೊತೆಗೆ ಇತರರನ್ನು ಕೂಡ ನೆನಪಿಸಬೇಕಾದಂತಹ ಅನಿವಾರ್ಯತೆ ಇದೆ.
ಎಲ್ಲದಕ್ಕೂ ಕಾಲವೇ ಉತ್ತರಿಸಬೇಕಾಗಿದೆ… ನನ್ನ ಉತ್ತರವು ಇಂದು ಮೌನವಾಗಿದೆ….
ಬರಹ : ಯಾಸೀನ್ ಬಂಗೇರಕಟ್ಟೆ ಪತ್ರಿಕೋದ್ಯಮದ ವಿದ್ಯಾರ್ಥಿ, ಉಜಿರೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.