ಮಂಗಳೂರು: ( ವಿಶ್ವ ಕನ್ನಡಿಗ ನ್ಯೂಸ್ ) : 2021 ಜನವರಿ 27 ಬುಧವಾರ ಬೆಳಗ್ಗೆ 9.30 ರಿಂದ ಅಪರಾಹ್ನ 2.30 ಎಸ್ ಎಸ್ ಆಡಿಟೋರಿಯಂ ಮೆಲ್ಕಾರ್ ಪಾಣೆಮಂಗಳೂರ್ ನಲ್ಲಿ ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ ಎಸ್ ವೈ ಎಸ್ ರಾಜ್ಯ ದ್ಯಂತ ನಡೆಯುತ್ತಿರವ ಕೌಂಟ್ 20 ಸಾಂಘಿಕ ಶಿಬಿರ ಜಿಲ್ಲಾ ಮಟ್ಟದ ಸಮಾವೇಶ ದಕ್ಷಿಣ ಕನ್ನಡ ವೆಸ್ಟ್ ಜಿಲ್ಲಾ ಸಮಿತಿ ಕೂಡ ಕಾರ್ಯಕ್ರಮ ಹಮ್ಮಿಕೊಂಡಿದೆ.
ಈ ಕಾರ್ಯಕ್ರಮದ ದುಆ ನೇತ್ರತ್ವ *ಸಯ್ಯಿದ್ ಜಲಾಲ್ ತಂಞಲ್ ಅಳೇಕಲ ಉಳ್ಳಾಲ* ಜಿಲ್ಲಾ ಸದಸ್ಯರು ನೆರವೇರಿಸಲಿರುವರು.
ಜಿಲ್ಲಾಧ್ಯಕ್ಷ ಸಿ ಎಚ್ ಮುಹಮ್ಮದಲಿ ಸಖಾಫಿ ಅಶ್ಹರಿಯ್ಯಾ ಅಧ್ಯಕ್ಷ ತೆಯಲ್ಲಿ ಮುನ್ನುಡಿ ಬಾಷಣ ಇಬ್ರಾಹಿಮ್ ಖಲೀಲ್ ಮುಸ್ಲಿಯಾರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಡುವರು.
ಉದ್ಘಾಟನೆಯನ್ನು ಪಿ ಎಂ ಉಸ್ಮಾನ್ ಸ ಅದಿ ಪಟ್ಟೋರಿ* ರಾಜ್ಯಾಧ್ಯಕ್ಷರು ಮಾಡಲಿರುವರು.
ನಂತರ ಶಿಬಿರ 1-“ಸಾಂಘಿಕ” ವಿಷಯ -1 ಸಂಘಟನೆಯ ಕಾರ್ಯಕ್ಷೇತ್ರ” ವಿಷಯ ದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್ ವಿಷಯ-2 “ಲೀಡರ್ಶಿಪ್ ಟ್ರೈನಿಂಗ್ ಎಸ್ ಪಿ ಹಂಝ ಸಖಾಫಿ ಬಂಟ್ವಾಳ ರಾಜ್ಯ ಸದಸ್ಯರು ಹಾಗೂ ವಿಷಯ -3
“ಸುನ್ನೀ ಚಳವಳಿಯ ಹಾದಿ” ಎಂಬ ವಿಷಯದಲ್ಲಿ ಸುಲೈಮಾನ್ ಸಖಾಫಿ ಮಾಲೇಕಲ್ ಪ್ರಧಾನ ಕಾರ್ಯದರ್ಶಿ ಎಸ್ ವೈ ಎಸ್ ಕೇರಳ ಪ್ರಮುಖ ಬಾಷಣ ಮಾಡಲಿರುವರು.
ಕಾರ್ಯಕ್ರಮ ದ ಗಣ್ಯ ಉಪಸ್ಥಿತಿ ರಾಗಿ ಟಿಎಂ ಮೊಹಿಯ್ಯುದ್ದೀನ್ ಕಾಮಿಲ್ ಸಖಾಫಿ ತೋಕೆ ರಾಜ್ಯ ಕಾರ್ಯದರ್ಶಿ, ಕೆಕೆಎಂ ಕಾಮಿಲ್ ಸಖಾಫಿ ರಾಜ್ಯ ಸದಸ್ಯರು,ಎಂಪಿಎಂ ಅಶ್ರಫ್ ಸಅದಿ ಮಲ್ಲೂರು ರಾಜ್ಯ ಸದಸ್ಯರು, ಅಶ್ರಫ್ ಕಿನಾರ ಮಂಗಳೂರು ರಾಜ್ಯ ಕಾರ್ಯದರ್ಶಿ, ಕೆ ಇ ಸಾಲೆತ್ತೂರು ರಾಜ್ಯ ಸಮಿತಿ ಸದಸ್ಯರು, ಹನೀಪ್ ಹಾಜಿ ಉಳ್ಳಾಲ, ರಾಜ್ಯ ಸದಸ್ಯರು,ಎನ್ ಎಸ್ ಉಮರ್ ಮಾಸ್ಟರ್ ರಾಜ್ಯ ಸದಸ್ಯರು, ಅಬ್ದುಲ್ ಹಮೀದ್ ಬಜ್ಪೆ ರಾಜ್ಯ ಸದಸ್ಯರು ಆಗಮಿಸಲಿರುವರು.
ಕಾರ್ಯಕ್ರಮ ದಲ್ಲಿ ಸಾವಿರದಷ್ಟು ಬರುವ ಪ್ರತಿನಿಧಿಗಳಾದ ಜಿಲ್ಲಾ ಕೌನ್ಸಿಲ್ ಸದಸ್ಯರು,ಸೆಂಟರ್ ಪದಾಧಿಕಾರಿಗಳು,ಬ್ರಾಂಚ್ ಅಧ್ಯಕ್ಷ, ಕಾರ್ಯದರ್ಶಿ, ಕೋಶಾಧಿಕಾರಿ ಈ ಮೂರೂ ವಿಭಾಗದಲ್ಲಿ ಸೇರದ,ಆದರೆ ಜಿಲ್ಲೆಯ ಕಾರ್ಯಾಚರಣೆಯಲ್ಲಿ ಅಗತ್ಯವೆನಿಸುವ ವಿಶೇಷ ಪ್ರತಿನಿಧಿಗಳು (ಗರಿಷ್ಟ 10 ಮಂದಿ) ಭಾಗವಹಿಸಲಿರುವರು. ಎಂದು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.