ಹಳೆಯಂಗಡಿ (www.vknews.com) : ರಾಷ್ಟ್ರೀಯ ಹೆದ್ದಾರಿ 66’ರ ಹಳೆಯಂಗಡಿ ಜಂಕ್ಷನ್ ಬಳಿಯ ಬಾರ್ ಎದುರುಗಡೆ ಆಟೋರಿಕ್ಷಾ ಚಾಲಕನೊಬ್ಬ ಮದ್ಯದ ಅಮಲಿನಲ್ಲಿ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಸ್ಕೂಟರ್ ಮೇಲೆಯೇ ತನ್ನ ರಿಕ್ಷಾ ಚಲಾಯಿಸಿದ್ದು, ಸ್ಕೂಟರ್ ಜಖಂಗೊಂಡಿದೆ.
ಹಳೆಯಂಗಡಿ ಬಳಿಯ ಪಡುಪಣಂಬೂರು ನಿವಾಸಿಯಾಗಿರುವ ಈ ಆಟೋರಿಕ್ಷಾ ಚಾಲಕ ಕಂಠಪೂರ್ತಿ ಮದ್ಯ ಸೇವಿಸಿ ತೂರಾಡುತ್ತಾ ಬಾರ್’ನ ಮುಂಭಾಗದ ಗೋಡೆಗೆ ಗುದ್ದಿ, ಬಳಿಕ ಏಕಾಏಕಿ ಆಟೋ ಹಿಂದಕ್ಕೆ ಚಲಾಯಿಸಿದ ಪರಿಣಾಮ, ಪಾರ್ಕಿಂಗ್ ಮಾಡಿದ್ದ ಸ್ಕೂಟರ್ ಮೇಲೆಯೇ ತನ್ನ ರಿಕ್ಷಾ ಹರಿಸಿದ್ದಾನೆ ಎನ್ನಲಾಗಿದೆ
ಈ ಸಂದರ್ಭ ಪಾರ್ಕಿಂಗ್ ಮಾಡಿದ್ದ ಸ್ಕೂಟರ್ ಮೇಲೆಯೇ ಆಟೋ ರಿಕ್ಷಾ ಹತ್ತಿದ್ದು, ಸ್ಕೂಟರ್’ಗೆ ಬಹಳಷ್ಟು ಹಾನಿಗೊಂಡಿದೆ. ಕೂಡಲೇ ಸ್ಥಳೀಯರು ಸ್ಥಳಕ್ಕೆ ಧಾವಿಸಿ ರಿಕ್ಷಾ ಚಾಲಕನನ್ನು ಕೆಳಗಿಳಿಸಿ ಇನ್ನಷ್ಟು ಅನಾಹುತ ನಡೆಯೋದನ್ನು ತಪ್ಪಿಸಿದ್ದಾರೆ. ಅಪಘಾತದಲ್ಲಿ ಜಖಂಗೊಂಡ ಸ್ಕೂಟರ್, ಹಳೆಯಂಗಡಿ ಲೈಟ್ ಹೌಸ್ ಬಳಿಯ ನಿವಾಸಿ ವಿಶ್ವನಾಥ’ ಎನ್ನುವವರದ್ದು ಎಂದು ತಿಳಿದುಬಂದಿದೆ.
ಈ ಮದ್ಯೆ ರಿಕ್ಷಾ ಚಾಲಕನ್ನು ತರಾಟೆಗೆ ತೆಗೆದುಕೊಂಡ ಸ್ಥಳೀಯರು, ಕೆಲಹೊತ್ತು ಮಾತಿನ ಚಕಮಕಿ ನಡೆಸುತ್ತಿದ್ದ ಸಂದರ್ಭ ಮದ್ಯಪಾನಿ ರಿಕ್ಷಾ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಆ ಬಳಿಕ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಸ್ಕೂಟರ್ ಮಾಲಿಕ ವಿಶ್ವನಾಥ್” ಈ ಬಗ್ಗೆ ಪೋಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ. ಒಟ್ಟಿನಲ್ಲಿ ಕುಡಿದ ಮತ್ತಿನಲ್ಲಿದ್ದ ರಿಕ್ಷಾ ಚಾಲಕನ ಅವಾಂತರಕ್ಕೆ, ಇನ್ನಷ್ಟು ಅನಾಹುತ ನಡೆಯೋದನ್ನು ಹಳೆಯಂಗಡಿ ಜಂಕ್ಷನ್ ಬಳಿಯ ಸ್ಥಳೀಯರು ತಪ್ಪಿಸಿರುತ್ತಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.