ವಿಶ್ವಕನ್ನಡಿಗ ನ್ಯೂಸ್(www.vknews.in): ಪುತ್ತೂರು ತಾಲೂಕಿನಲ್ಲಿ ಮುಸ್ಲಿಂ ಸಮುದಾಯದ ಸಬಲೀಕರಣಕ್ಕಾಗಿ ಕಾರ್ಯಾಚಾರಿಸುತ್ತಿರುವ ಸಂಘ, ಸಂಸ್ಥೆಗಳಲ್ಲಿ ಪುತ್ತೂರು ತಾಲೂಕು ಸೀರತ್ ಕಮೀಟಿ, ಮತ್ತು ಕರ್ನಾಟಕ ಮುಸ್ಲಿಂ ಜಮಾಅತ್ ಎಂಬ ಈ ಎರಡು ಸಂಘಟನೆಗಳು ಕೂಡ ಮುಂಚೂಣಿಯಲ್ಲಿದೆ.ಈ ಎರಡೂ ಸಂಘಟನೆಗಳ ಅಧ್ಯಕ್ಷ ಪದವಿಯಲ್ಲಿರುವ ಇಬ್ಬರು ನಾಯಕರಿಗೂ ನಮ್ಮೂರು ಕೊಡಂಗಾಯಿ ಗೂ ಹತ್ತಿರದ ಸಂಬಂಧ ಇದೆ. ತುಂಬೆ ಅಹ್ಮಧ್ ಹಾಜಿ ,ಕೆ.ಪಿ.ಅಹ್ಮದ್ ಹಾಜಿ,ಯುನಿಟಿ ಹಾಜಿ ಮೊದಲಾದವರು ಈ ಹಿಂದೆ ಸಾರಥ್ಯ ನೀಡಿದ್ದ, ಪುತ್ತೂರು ತಾಲೂಕು ಸೀರತ್ ಕಮೀಟಿಗೆ ಇದೀಗ ಅದರ ನೂತನ ಅಧ್ಯಕ್ಷರಾಗಿ ಆಯ್ಕೆಯಾದವರು ಸುರಯ್ಯಾ ಖಾದರಾಜಿ ಎಂದೇ ಕರೆಯಲ್ಪಡುವ ಪ್ರಾಮಾಣಿಕ ವ್ಯಕ್ತಿತ್ವದ , ಧಾರ್ಮಿಕ ಹಾಗೂ ಸಾಮಾಜಿಕ ಕಾಳಜಿಯನ್ನು ಹೊಂದಿರುವ ಉತ್ಸಾಹಿ ಸಂಘಟಕ ಪುತ್ತೂರಿನ ಕೂರ್ನಡ್ಕದ ಅಬ್ದುಲ್ ಕಾದರ್ ಹಾಜಿ ಸುರಯ್ಯಾ ಅವರು.
ಈ ಖಾದರ್ ಹಾಜಿಯ ಹುಟ್ಟೂರು ನಮ್ಮೂರು ಕೊಡಂಗಾಯಿ. ಇನ್ನು ಇದೇ ಸೀರತ್ ಕಮಿಟಿ ಯ ಉಪಾದ್ಯಕ್ಷರಾದ ಪುತ್ತೂರು ತಾಲೂಕು ಮುಸ್ಲಿಂ ಜಮಾಅತ್’ನ ಅಧ್ಯಕ್ಷರಾಗಿ ರುವ ಅರಿಯಡ್ಕ ಅಬ್ದುಲ್ ರಹಮಾನ್ ಹಾಜಿ ಯವರು ಮೂಲತಃ ಪುತ್ತೂರಿನ ಕುಂಬ್ರ ಅರಿಯಡ್ಕದವರು ಆದರೂ ಅವರ ಧರ್ಮ ಪತ್ನಿಯ ಊರು ನಮ್ಮೂರು ಕೊಡಂಗಾಯಿ ಎಂಬುದು ಕೂಡ ಗಮನಾರ್ಹ. ಈ ರೀತಿಯಾಗಿ ಈ ಎರಡು ನಾಯಕರಿಗೂ ನಮ್ಮೂರಿನೊಂದಿಗೆ ಸಂಬಂಧವಿರುವುದು ಊರಿಗೊಂದು ಅಭಿಮಾನವಾಗಿದೆ.
ಅಬ್ದುಲ್ ಕಾದರ್ ಹಾಜಿ ಯವರು ಬಂಟ್ವಾಳ ತಾಲೂಕಿನ ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿ ಮರ್ಹೂಂ ಇಬ್ರಾಹಿಮ್ (ಕುಂಞ ಬ್ಯಾರಿ)ಯವರ ಹಿರಿಯಮಗ. ವರ್ಷಗಳ ಹಿಂದೆ ಪುತ್ತೂರಿನ ಹೃದಯ ಬಾಗದಲ್ಲಿ “ಸುರಯ್ಯಾ ಡ್ರೆಸ್ಸಸ್” ಎಂಬ ಹೆಸರಿನ ಬಟ್ಟೆ ವ್ಯಾಪಾರ ಆರಂಭಿಸಿದ್ದ ಇವರು, ನಂತರದಲ್ಲಿ ಕೂರ್ನಡ್ಕ ದಲ್ಲಿ ಮನೆ ಮಾಡಿ ಕೊಂಡು ತಮ್ಮ ವಾಸ್ತವ್ಯವನ್ನು ಪುತ್ತೂರಿಗೆ ವರ್ಗಾಹಿಸಿದರು. ಎಳೆಯ ಪ್ರಾಯದಲ್ಲೇ ಉದ್ಯೋಗ ನಿಮಿತ್ತ ಕೊಲ್ಲಿ ರಾಷ್ಟ್ರ ಕತರ್ ಸೇರಿದ್ದ ಇವರು, ಹಿಂದಿನಿಂದಲೇ ದಾನ ಧರ್ಮ, ಧಾರ್ಮಿಕ,ಸಾಮಾಜಿಕ ಕಾರ್ಯ ಚಟುವಟಿಕೆಗಳಲ್ಲಿ ಮುಂದು. ಉಲಮಾಗಳನ್ನು ಹಾಗೂ ಹಿರಿಯರನ್ನು ಗೌರವಿಸುವ, ಕಿರಿಯರನ್ನು ಪ್ರೀತಿಯಿಂದ ಕಾಣುವ ಇವರು, ಬಡವ ಶ್ರೀಮಂತ ನೆಂಬ ಬೇಧ ಬಾವವಿಲ್ಲದೆ ಎಲ್ಲರಂದಿಗೂ ಪ್ರೀತಿಯಿಂದ ಬೆರೆಯುವರಾಗಿದ್ದಾರೆ. ಸದ್ದಿಲ್ಲದೆ ಸಮಾಜ ಸೇವೆ ಮಾಡುತ್ತಾ ಯಾವುದೇ ಪ್ರಚಾರ ಬಯಸದ ಸರಳ ಸಜ್ಜನ ಸ್ವಭಾವದ ವ್ಯಕ್ತಿತ್ವ ಹೊಂದಿದವರೂ ಆಗಿದ್ದಾರೆ.
ಅದೇರೀತಿ ಅರಿಯಡ್ಕ ಜನಾಬ್: ಅಬ್ದುಲ್ ರಹಿಮಾನ್ ಹಾಜಿ ಅವರ ಬಗ್ಗೆ ಹೇಳುವುದಾದರೆ ಪುತ್ತೂರಿನಲ್ಲಿ ಅವರನ್ನು ತಿಳಿಯದವರು ಇರಲಿಕ್ಕಿಲ್ಲ. ರಾಜಕೀಯ, ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡು ಜಾತಿ, ಧರ್ಮ, ಸಂಘಟನೆಗಳೆಂಬ ಬೇಧವಿಲ್ಲದೆ ಸೇವಾ ಕಾರ್ಯಗಳಲ್ಲಿ ನಿರತರಾಗುವ ಮೂಲಕ ಸದಾ ಸುದ್ದಿಯಲ್ಲಿರುವ ಇವರು, ಗ್ರಾಮ ಪಂಚಾಯತ್ ಅಧ್ಯಕ್ಷರಾಗಿಯೂ,ಮಸೀದಿ ಜಮಾಅತ್ ಕಮಿಟಿಗಳ ಅದ್ಯಕ್ಷರಾಗಿಯೂ ಹಾಗೂ ಇನ್ನಿತರ ಹಲವು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿರುವ ಒಬ್ಬ ನಿಷ್ಠಾವಂತ ಜನನಾಯಕರಾಗಿದ್ದಾರೆ.ಒಟ್ಟಿನಲ್ಲಿ ಒಬ್ಬರು ನಮ್ಮೂರು ಕೊಡಂಗಾಯಿ ಯ ಮನೆ ಮಗನಾದರೆ ಇನ್ನೊಬ್ಬರು ನಮ್ಮೂರು ಕೊಡಂಗಾಯಿ ಯ ಮದುಮಗ ಎಂಬ ಅಭಿಮಾನವಿದೆ ನಮಗೆ.
ಅಲ್ಲಾಹು ಈ ಇಬ್ಬರೂ ನಾಯಕರಿಗೂ ಹಾಗೂ ಅವರ ಸಂಘಟನೆಯ ಇತರ ಪದಾಧಿಕಾರಿಗಳಿಗೂ ದೀರ್ಘಾಯುಷ್ಯ ಆರೋಗ್ಯ ಕರುಣಿಸಲಿ. ನಿಮ್ಮ ಆಡಳಿತಾವಧಿಯಲ್ಲಿ ಸಂಸ್ಥೆಯು ಇನ್ನಷ್ಟೂ ಸಾಧನೆಯ ಹಾದಿಯಲ್ಲಿ ಮುನ್ನಡೆಯಲಿ ಆಮೀನ್.
ಲೇಖನ: ಅಬೂ ಅಯಾನ್ ಕೊಡಂಗಾಯಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.