ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ನ್ಯಾಷನಲ್ ವಿಮೆನ್ಸ್ ಫ್ರಂಟ್ ಕರ್ನಾಟಕದ ವತಿಯಿಂದ ಬಾಬರಿ ಚರಿತ್ರೆ ರಸಪ್ರಶ್ನೆ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಮಂಗಳೂರಿನಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ದ ಸ್ಪೂರ್ತಿ ಲೇಖಕಿಯರ ವೇದಿಕೆ ಇದರ ಅಧ್ಯಕ್ಷೆಯಾದ ಮರ್ಯಮ್ ಇಸ್ಮಾಯಿಲ್ ಮಾತನಾಡಿ, “ಬಾಬರಿ ಮಸೀದಿ ವಿಷಯದಲ್ಲಿ ಆದ ಅನ್ಯಾಯ ನಿಜಕ್ಕೂ ಖೇದಕರ. ಇದರ ಇತಿಹಾಸ ಮರೆತರೆ ನಮಗೆ ನಾವೇ ದ್ರೋಹವೆಸಗಿದಂತೆ ” ಎಂದರು.
Dr. Saleena ಬಾನು MD (ಆಯು) ದೇರಳಕಟ್ಟೆ, ವಿಜೇತರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ ಕಾರ್ಯಕ್ರಮವನ್ನು ಶ್ಲಾಘಿಸಿದರು. ನ್ಯಾಷನಲ್ ವಿಮೆನ್ಸ್ ಫ್ರಂಟ್ ರಾಜ್ಯಧ್ಯಕ್ಷೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಮಂಗಳೂರು ಮಹಾನಗರ ಪಾಲಿಕೆ ಸದಸ್ಯೆ ಸಂಶಾದ್ ಅಬೂಬಕ್ಕರ್, ನ್ಯಾಷನಲ್ ವಿಮೆನ್ಸ್ ಫ್ರಂಟ್ ರಾಷ್ಟ್ರೀಯ ಸಮಿತಿ ಸದಸ್ಯೆ ದಿಲ್ದಾರ್ ಉಪಸ್ಥಿತರಿದ್ದರು. ಸೈದಾ ಸ್ವಾಗತಿಸಿದರು. ಫರ್ಝಾನ ಕಾರ್ಯಕ್ರಮ ನಿರೂಪಿಸಿ, ಶಮೀಮಾ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.