ಮಂಗಳೂರು (ವಿಶ್ವಕನ್ನಡಿಗ ನ್ಯೂಸ್): ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಯನ್ನು ಮತ್ತು ಪ್ರಸಕ್ತ ನಿರಂತರ ಏರುತ್ತಿರುವ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ದಿನಬಳಕೆ ವಸ್ತುಗಳ ಬೆಲೆ ಏರಿಕೆಯ ವಿರುದ್ಧ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಪ್ರತಿಭಟನೆಯ ಭಾಗವಾಗಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ದ.ಕ. ಜಿಲ್ಲಾ ಘಟಕವು ಇಂದು ಸಂಜೆ 4:00 ಕ್ಕೆ ಮಂಗಳೂರು ಹಂಪನಕಟ್ಟೆಯ ಮಿನಿ ವಿಧಾನಸೌಧ ಎದುರಿನಲ್ಲಿ ಪಕ್ಷದ ಜಿಲ್ಲಾಧ್ಯಕ್ಷರಾದ ಅಡ್ವೋಕೇಟ್ ಸರ್ಫ್ ರಾಝ್ ನೇತೃತ್ವದಲ್ಲಿ ಪ್ರತಿಭಟನಾ ಸಭೆಯನ್ನು ಜರಗಿಸಿತು. ಸುಮಾರು ಇನ್ನೂರಕ್ಕೂ ಮಿಕ್ಕಿ ಪ್ರತಿಭಟನಾ ನಿರತರನ್ನು ಹೊಂದಿದ್ದ ಈ ಸಭೆಯಲ್ಲಿ, ಮಾತನಾಡಿದ FITU ರಾಜ್ಯ ಕಾರ್ಯದರ್ಶಿ ದಿವಾಕರ್ ಬೋಳೂರು, ಕೇಂದ್ರ ಸರಕಾರ ತೈಲ ಬೆಲೆ ಏರಿಕೆಯನ್ನು ಮಾಡಿ ಜನಸಾಮಾನ್ಯರ ಬದುಕಿನಲ್ಲಿ ಚೆಲ್ಲಾಟವಾಡುವುದನ್ನು ನಿಲ್ಲಿಸಲಿ ಎಂದರು. ಫ್ರೆಟರ್ನಿಟಿ ಮೂವ್ಮೆಂಟ್ ಜಿಲ್ಲಾ ಕಾರ್ಯದರ್ಶಿಯವರಾದ ಮೊಹಮ್ಮದ್ ಸಯ್ಯಾಫ್ ರವರು ಇಂದು ಸರಕಾರದ ಜನ ವಿರೋಧಿ ನೀತಿಯನ್ನು ವಿಮರ್ಶಿಸಿದರೆ ಪಾಕಿಸ್ತಾನದವನಾಗುತ್ತಾನೆ ಎಂಬುವುದಾಗಿ ಸರಕಾರದ ವಕ್ತಾರರ ಮತ್ತು ಅವರ ಚೇಲಾ ಮಾಧ್ಯಮಗಳು ನೀಡುವ ಹೇಳಿಕೆಗಳನ್ನು ಲೇವಡಿ ಮಾಡಿದರು, WPI, ಜಿಲ್ಲಾ ಉಪಾಧ್ಯಕ್ಷೆ ಮರ್ಯಮ್ ಶಹೀರರವರು,ಬಡಜನತೆನ್ನು ಭಾಧಿಸುವ ತೈಲ ಬೆಲೆಯೇರಿಕೆಯನ್ನು ಕೇಂದ್ರ ಸರ್ಕಾರ ತಕ್ಷಣ ಹಿಂಪಡೆಯಲು ಮುಂದಾಗಬೇಕೆಂದು ಹೇಳಿದರು. WPI ಜಿಲ್ಲಾ ವಕ್ತಾರ ಅರಫಾ ಮಂಚಿಯವರು, ಕೇಂದ್ರ ಸರ್ಕಾರದ ವಿವಿಧ ರೀತಿಯ ಜನಮರುಳು ಗೊಳಿಸುವ ತಂತ್ರಗಳನ್ನು ವಿವರಿಸಿದರು. WPI ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಅಬ್ದುಲ್ ಖಾದರ್ ಕುಕ್ಕಾಜೆಯವರು ಮಾತಾನಾಡಿ, ಸರಕಾರದ ವೈಫಲ್ಯದ ಬಗ್ಗೆ ಹೇಳಿದರೆ, ಕಾಂಗ್ರೆಸ್ ಪಕ್ಷದಿಂದ ಏನು ಮಾಡಿದ್ದಾರೆ ಎಂದು ಕೇಳುತ್ತಾರೆ, ಹೌದು, ಪ್ರತಿಪಕ್ಷದ ಸ್ಥಾನದಲ್ಲಿರುವ ಕಾಂಗ್ರೆಸ್ ಬೆಲೆಯೇರಿಕೆಯಂತಹ, ಸರಕಾರದ ಯಾವುದೇ ಜನವಿರೋಧಿ ನೀತಿಗೆದುರಾಗಿ ಏನು ಮಾಡದೆ ಇದರ ಬಗ್ಗೆ ವಿರೋಧ ಪಕ್ಷಗಳು ಮೌನ ಪ್ರೇಕ್ಷಕವಾಗಿ ತೆಪ್ಪಗೆ ಕುಳಿತಿರುವ ಕಾರಣದಿಂದಲೇ ನಮ್ಮ ಇಂದಿನ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆಯೆಂದರು ಸರಕಾರದ ಈ ಜನ ವಿರೋಧಿ ನೀತಿಯನ್ನು ವಿರೋಧಿಸಿ ರಂಗಕ್ಕಿಳಿಯುವುದು ನಮಗೆ ಅನಿವಾರ್ಯವಾಗಿರುವುದರಿಂದಾಗಿ ಇದನ್ನು ವಿರೋಧಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಂಡಿದೆಯೆಂದವರು ತಿಳಿಸಿದರು. WPI ರಾಜ್ಯ ಉಪಾಧ್ಯಕ್ಷರಾಗಿರುವ ಶ್ರೀಕಾಂತ್ ಸಾಲ್ಯಾನ್ ರವರು, ಕೇಂದ್ರ ಸರ್ಕಾರವು ಜನಸಾಮಾನ್ಯರ ಜೇಬಿನಿಂದ ಲೂಟಿ ಮಾಡಿದ ಹಣವನ್ನು ಬ್ರಹತ್ ಉದ್ಯಮಿಗಳಿಗೆ ಪಾವತಿಸುತ್ತಿದೆಯೆಂದು ತಮ್ಮ ಭಾಷಣದಲ್ಲಿ ವಿವರಿಸಿದರು. ಕೊನೆಯಲ್ಲಿ ಮಾತನಾಡಿದ WPI ದ. ಕ. ಜಿಲ್ಲಾಧ್ಯಕ್ಷರಾದ ಅಡ್ವೋಕೇಟ್ ಸರ್ಫ್ರಾಝ್ ರವರು ಅಂತರ್ರಾಷ್ಟ್ರೀಯ ಮಾರುಕಟ್ಟೆಯ ಕಚ್ಚಾ ತೈಲದ ಇಂದಿನ ಬೆಲೆಯಲ್ಲಿ ನಮ್ಮ ನೆರೆ ದೇಶಗಳಲ್ಲಿ (ನೇಪಾಳ, ಶ್ರೀಲಂಕಾ, ಬಾಂಗ್ಲಾ, ಪಾಕಿಸ್ತಾನ) ಮಾರುತ್ತಿರುವ ದರವನ್ನು ಹೋಲಿಸಿದರೆ ಇಂದು ನಮ್ಮಲ್ಲಿ ಲೀಟರ್ ಒಂದಕ್ಕೆ 40 ರೂಪಾಯಿಗಿಂತ ಹೆಚ್ಚು ಪಡೆಯುವ ಹಾಗಿಲ್ಲವೆಂದರಲ್ಲದೆ ಕೇಂದ್ರ ಸರ್ಕಾರವು ತೈಲ ಮಾರಾಟ ವನ್ನು ಜಿ. ಎಸ್. ಟಿ. ವ್ಯಾಪ್ತಿಗೆ ತರಲಿ ಎಂದು ಅಗ್ರಹಿಸಿದರು.
ಇಂದಿನ ಪ್ರತಿಭಟನಾ ಸಭೆಯಲ್ಲಿ W.P.I.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ಎಮ್. ಮುತ್ತಲಿಬ್ ರವರು ಮತ್ತು ಪಕ್ಷದ ಎಲ್ಲಾ ವಲಯ ಅಧ್ಯಕ್ಷರುಗಳು ಕಾರ್ಯದರ್ಶಿಗಳು ಮತ್ತು ಅನೇಕ ಕಾರ್ಯಕರ್ತರುಗಳು ಭಾಗವಹಿಸಿದ್ದರು ಸಭೆಯನ್ನು ನಿರೂಪಣೆ ಮಾಡಿದ ಮುನೀರ್ ಪದ್ರಂಗಿ ಕೊನೆಯಲ್ಲಿ ಧನ್ಯವಾದವಿತ್ತರು. ಶಾಂತಿಗೀತೆಯೊಂದಿಗೆ, ಕಾರ್ಯಕ್ರಮವನ್ನು ಮುಗಿಸಿ, ಪ್ರಸಕ್ತ ತೈಲ ದರವನ್ನು ಇಳಿಸುವಂತೆ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಯವರಿಗೆ ಮನವಿಯನ್ನು ನೀಡಲಾಯಿತು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.