ಜೆದ್ದಾ(www.vknews.in):ಕೊವಿಡ್ ಪ್ರಯಾಣ ನಿರ್ಬಂಧಗಳ ಮಧ್ಯೆ ಯುಎಇ ಮೂಲಕ ಸೌದಿ ಅರೇಬಿಯಾ ಮತ್ತು ಕುವೈಟ್ಗೆ ಪ್ರಯಾಣಿಸದಂತೆ ಇಲ್ಲಿನ ಭಾರತೀಯ ರಾಯಭಾರ ಕಚೇರಿಯು ಭಾರತೀಯ ನಾಗರಿಕರಿಗೆ ಸೂಚಿಸಿವೆ.
ಅಬುಧಾಬಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸೋಮವಾರ ಸಂಜೆ ಯುಎಇಯಲ್ಲಿ ಸಿಲುಕಿರುವ ಇಂತಹ ಪ್ರಯಾಣಿಕರನ್ನು ತಾಯ್ನಾಡಿಗೆ ಮರಳುವಂತೆ ಒತ್ತಾಯಿಸಿ ಸಲಹೆಯನ್ನು ನೀಡಿತು.
‘ಸೌದಿ ಅರೇಬಿಯಾ ಮತ್ತು ಕುವೈತ್ಗೆ ಪ್ರಯಾಣಿಸಲು ಇಚ್ಚಿಸುವ ಹಲವಾರು ಭಾರತೀಯ ಪ್ರಜೆಗಳು ಯುಎಇಯಲ್ಲಿ ಸಿಲುಕಿಕೊಂಡಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಪ್ರಯಾಣ ಮುಂದುವರಿಸದೆ ತಾಯ್ನಾಡಿಗೆ ಮರಳುವಂತೆ ಇವರೆಲ್ಲರಿಗೂ ಸಲಹೆ ನೀಡಲಾಗಿದೆ’ ಎಂದು ರಾಯಭಾರಿ ಕಚೇರಿಯ ಟ್ವಿಟ್ಟರಿ ನಲ್ಲಿ ಪೋಸ್ಟ್ ಮಾಡಲಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.