ಉಡುಪಿ ,(ವಿಶ್ವ ಕನ್ನಡಿಗ ನ್ಯೂಸ್ ):ಗ್ರಾಮಸ್ಥರೇ ಅಲ್ಲದ, ದೂರದ ಊರಲ್ಲಿನ ದಂಪತಿಗಳು ದೇವಳಕ್ಕೆ ಭೇಟಿಕೊಟ್ಟು ಭಗವಂತನಿಗೆ ತುಲಾಭಾರ ಸೇವೆ ಸಲ್ಲಿಸಿದ್ದು ಈಬಾರಿಯ ಹಬ್ಬದ ವಿಶೇಷ.ಹಿಂದಿ ಸಿನೆಮಾದ ಕಾಸ್ಟಿಂಗ್ ಡೈರೆಕ್ಟರ್ ಕರಣ್ ಮಲ್ಲಿ ಹಾಗೂ ಕಮರ್ಷಿಯಲ್ ಮ್ಯೂಸಿಕ್ ವಿಡಿಯೋ ಹಿಂದಿ ಫಿಲ್ಮ್ ಇಂಡಸ್ಟ್ರಿ ಯ ಶಾರ್ಟ್ ಫಿಲಂ ನಿರ್ದೇಶಕಿ ಮಾನವಿ ಬೇಡಿ ದಂಪತಿಗಳು ಬ್ರಹ್ಮಾವರ ಸಮೀಪದ ಉಳ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ಕೊಟ್ಟು ಶ್ರೀ ದೇವರ ದರ್ಶನ ಪಡೆದು ಕೃತಾರ್ಥರಾದರು. ಕಷ್ಟಕಾಲದಲ್ಲಿ ತಮ್ಮ ಕೈಹಿಡಿದು, ಅನುಗ್ರಹಿಸಿದ ಭಗವಂತನಿಗೆ ತಮ್ಮನ್ನೇ ಸಮರ್ಪಣೆ ಮಾಡುವ ತುಲಾಭಾರ ಸೇವೆಯನ್ನು ಸಲ್ಲಿಸಿ ಪ್ರಸಾದ ಸ್ವೀಕರಿಸಿದರುಶ್ರೀ ಮಹಾಲಿಂಗೇಶ್ವರ ದೇವರು ದೂರದ ಊರುಗಳಲ್ಲಿ ನೆಲೆಸಿರುವ ಭಕ್ತರ ಪಾಲಿನ ಕಾರಣಿಕ ದೈವವೂ ಆಗಿದ್ದು , ನಂಬಿದವರ ಕೈ ಬಿಡುವುದಿಲ್ಲ ಎಂಬುದಕ್ಕೆ ಇದೊಂದು ಉದಾಹರಣೆ.ಕರಣ್ ಹಾಗೂ ಮಾನವಿ ದಂಪತಿಗಳು ಉಳ್ತೂರಿನ ಶ್ರೀಮತಿ ಜಯಂತಿ ಹಾಗೂ H ದೇವಪ್ಪ ಮಲ್ಲಿ ದಂಪತಿಗಳ ಕುಟುಂಬಸ್ಥರೂ ಆಗಿದ್ದು, ದೇವರ ಮೇಲಿನಾವರ ಭಕ್ತಿ ಹಾಗೂ ದೂರದ ಊರಿಂದ ಆಗಮಿಸಿ ಹಬ್ಬದ ಸಂದರ್ಭದಲ್ಲಿ ಬಾಗಿಯಾಗಿದ್ದಾರೆ .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.