✍️ ಆರ್ ಕೆ ಮದನಿ ಅಮ್ಮೆಂಬಳ
1999 ನೇ ಇಸವಿಯಿಂದ ನಾನು ಕುಂದಾಪುರ ನಾವುಂದದಲ್ಲಿ ಮದ್ರಸಾ ಅಧ್ಯಾಪಕನಾಗಿದ್ದ ಸಮಯದಿಂದ ನಿನ್ನೆಯ ತನಕ ನಿರಂತರ ಸಂಪರ್ಕದಲ್ಲಿ ಇದ್ದ ನನ್ನ ಆತ್ಮೀಯ ಮಾರ್ಗದರ್ಶಕ ನಾನು ದೈನಂದಿನ ಬೆಳ್ಳಂಬೆಳಿಗ್ಗೆ ನನ್ನ ವಾಟ್ಸಾಪ್ ಫೇಸ್ಬುಕ್ ಮುಖಾಂತರ ಹಾಕುವ ಸ್ವಲಾತ್ ಹೇಳಿ ಅದರಲ್ಲಿ ಬರುವ ಸಂದೇಶವನ್ನು ಓದಿ ನನಗೆ ಬುದ್ದಿವಾದಗಳನ್ನು ಹೇಳಿ ಕೊಡುವ ಉಸ್ತಾದರುಗಳ ಪೈಕಿ (ಮೂವರಲ್ಲಿ ಜಿ ಎಂ ಸಖಾಫಿ ಉಸ್ತಾದ್, ಜಪ್ಪು ಮದನಿ ಉಸ್ತಾದ್) ಆತೂರು ಉಸ್ತಾದ್ ಓರ್ವರಾಗಿದ್ದಾರೆ.
ಪ್ರತೀ ಶುಕ್ರವಾರ ನಾನು ಕಳುಹಿಸಿ ಕೊಡುವ ಮಯ್ಯಿತ್ ನಮಾಝ್ ಪಟ್ಟಿಯಲ್ಲಿ ಒಬ್ಬರ ಹೆಸರು ಸೂಚಿಸುತ್ತಾ ಇದ್ದರು ನನಗೆ ಕರೆ ಅಥವಾ ವಾಟ್ಸಾಪ್ ಮುಖಾಂತರ ಶಾಲಾ ಕಾಲೇಜು ವಿಷಯದಲ್ಲಿ ನಿಮ್ಮಭಿಪ್ರಾಯ ಹೇಳಿ ಕಿರಿಯನಾದ ನನ್ನೊಂದಿಗೆ ಕೇಳಿ ತಿಳಿಯುತ್ತಿದ್ದರು. ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಹಾಗೂ ಇತರ ಜಿಲ್ಲೆಗಳಿಗೆ ಮದ್ರಸಾ ವಿದ್ಯಾರ್ಥಿಗಳ ಪ್ರತಿಭಾ ಸಂಗಮದ ತೀರ್ಪುಗಾರರಾಗಿ ಹೆಚ್ಚು ಕಡೆಗೆ ಹೋಗುತ್ತಿದ್ದೆ ಆ ಸಮಯದಲ್ಲಿ ನನಗೆ ಮೊದಲು ಹೇಳುತ್ತಿದ್ದ ಮಾತು ಇದಾಗಿತ್ತು “ಇಂದಿನ ಮಕ್ಕಳು ಮುಂದಿನ ಜನಾಂಗ” ಅವರ ಭವಿಷ್ಯ ಸರಿಯಾಗಿ ಅರ್ಥ ಮಾಡಿಕೊಂಡು ಅಂಕ ನಿರ್ಧರಿಸಿ ತೀರ್ಪುಗಾರರಾದ ನೀವು ಸರಿಯಾಗಿ ಕಾರ್ಯ ನಿರ್ವಹಿಸದಿದ್ದಲ್ಲಿ ಆ ವಿಧ್ಯಾರ್ಥಿಗಳು ಬಹಳಷ್ಟು ನೋವು ಅನುಭವಿಸಬಹುದು .
ಎಂಬಿತ್ಯಾದಿ ವಿಷಯಗಳನ್ನು ತಿಳಿಸುತ್ತಿದ್ದರು ಪದೇಪದೇ ನನಗೆ ನೆನಪಿಸುತ್ತಾ ಇದ್ದರು. 2013ನೇ ಇಷವಿಯಲ್ಲಿ ನಾನು ಬಂಟ್ವಾಳ ರೆಂಜ್ ಕಾರ್ಯದರ್ಶಿಯಾಗಿ ಇರುವ ಸಮಯ ಪವಿತ್ರ ಹಜ್ ಉಮ್ರಾ ನಿರ್ವಹಿಸುವ ಸೌಭಾಗ್ಯ ಲಭಿಸಿತು.
ಆ ಸಮಯ ಒಂದು ತಿಂಗಳು ಮೊದಲೇ ಮಹಾ ಸಭೆ ಕರೆಯಲು ಅಂದಿನ ರಾಜ್ಯಾಧ್ಯಕ್ಷ ಜಪ್ಪು ಅಬ್ದುಲ್ ರಹ್ಮಾನ್ ಮದನಿ ಉಸ್ತಾದರಲ್ಲಿ ಕೇಳಿಕೊಂಡಾಗ ಧಿಡೀರಣೆ ಒಂದು ಸಮಯ ನಿರ್ಣಯಿಸಲು ಅವಕಾಶವನ್ನು ಕೊಟ್ಟರು ಅಂದಿನ ಸಭೆಗೆ ಉಸ್ತುವಾರಿಯಾಗಿ ಆತೂರು ಉಸ್ತಾದರು ಭಾಗವಹಿಸಿದ್ದರು. ಸಮಯದ ಕೊರತೆಯಿಂದ ವರದಿ ವಾಚನೆ ಮಾಡುವಾಗ ನನ್ನ ನೆನಪಿಗೆ ಬಂದ ಕೆಲವು ಕಾರ್ಯವೈಖರಿಯನ್ನು ಬರೆಯದೆ ಓದಿದೆ ಅಧ್ಯಕ್ಷರ ಭಾಷಣದಲ್ಲಿ ಅವರು ಆ ಶಿಸ್ತಿನ ಗಾಂಭೀರ್ಯತೆಯಲ್ಲಿ ನನ್ನ ತಪ್ಪನ್ನು ಹೇಳಿಯೇ ಬಿಟ್ಟರು.
ನನ್ನ 30 ವರ್ಷಗಳ ಅನುಭವದಲ್ಲಿ ವರದಿಯಲ್ಲಿ ಬರೆಯದೆ ಪುಸ್ತಕಗಳನ್ನು ನೋಡಿ ವರದಿ ಓದಿದ ಓರ್ವ ಸಾಧಕ ಅದು ಆರ್ ಕೆ ಮದನಿ ಮಾತ್ರ ಅದಕ್ಕೊಂದು ಉದಾಹರಣೆ ಕೂಡಾ ವೇದಿಕೆಯಲ್ಲಿ ಹೇಳಿದ್ದರು (ಉಸ್ತಾದಿಗೆನೆ ಉರ್ಕು ಕಟ್ಟಿದ್ದಾ) ಆತೂರು ಉಸ್ತಾದರು ತಪಾಸಣಾ ಅಧಿಕಾರಿಯಾಗಿದ್ದ ಸಮಯದಲ್ಲಿ ಉಸ್ತಾದರು ಕಾರ್ಯಾಚರಣೆ ಮಾಡುವ ಹೆಚ್ಚಿನ ರೇಂಜ್ ಕಡೆಗೆ ಪ್ರತಿಭಾ ಸಂಗಮದ ಮುಖ್ಯ ತೀರ್ಪುಗಾರರಾಗಿ ನನ್ನನ್ನು ಆಯ್ಕೆ ಮಾಡುತ್ತಿದ್ದರು.
ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ರಾಜ್ಯಾಧ್ಯಕ್ಷ, ಹಾಗೂ ಕರ್ನಾಟಕದ ಮದ್ರಸಾ ರಂಗದಲ್ಲಿ ಅನೇಕ ಬದಲಾವಣೆಗಳಿಗೆ ಮುನ್ನುಡಿ ಬರೆದ ಮುಅಲ್ಲಿಂ ಚಳವಳಿಯ ನಾಯಕ ಆತೂರು ಉಸ್ತಾದರ ಮರಣ ಮುಅಲ್ಲಿಮರಾದ ನಮಗೆಲ್ಲರಿಗೂ ಶಿಕ್ಷಣ ಸಂಸ್ಥೆಗೂ (ನನಗಂತೂ) ತುಂಬಲಾರದ ನಷ್ಟ ಯಾವುದೇ ಪದವಿ ಇಲ್ಲದಿದ್ದರೂ ಸಹಸ್ರಾರು ಪದವೀಧರ ಮದ್ರಸ ಉಸ್ತಾದರಗಳಿಗೆ ಮಾರ್ಗದರ್ಶಕರಾಗಿ, ತರಬೇತುದಾರರಾಗಿ, ತಪಾಸಣಾ ಅಧಿಕಾರಿಯಾಗಿ ಸುದೀರ್ಘಕಾಲ ಸೇವೆ ನಿರ್ವಹಿಸಿದ ಅತೂರು ಉಸ್ತಾದರು ನಿಜಕ್ಕೂ ಸಾಟಿಯಿಲ್ಲದ ಸರದಾರ ರಾಜ್ಯದ ಮದರಸಾ ಶಿಕ್ಷಣ ಕ್ಷೇತ್ರದ ಸಮಗ್ರ ರೂಪರೇಷೆ ಹಾಗೂ ನಿರ್ವಹಣೆಯ ಹೊಣೆಯನ್ನು ಸಮರ್ಪಕವಾಗಿ ಜಾರಿಗೆ ತರುವ ಕರ್ನಾಟಕ ಸುನ್ನೀ ಎಜ್ಯುಕೇಶನಲ್ ಡೆವೆಲಪ್ ಮೆಂಟ್ ಕಮೀಟಿಯ ಚಾಲನಾ ಶಕ್ತಿಯಾಗಿದ್ದ ಅತೂರು ಉಸ್ತಾದರು ಸುನ್ನಿ ಸಂಘ ಸಂಸ್ಥೆಗಳಲ್ಲಿ ಜಂಇಯ್ಯತುಲ್ ಮುಅಲ್ಲಿಮೀನ್ ಮುಂತಾದ ಸಂಘಟನೆಗಳಲ್ಲಿ ಹಲವಾರು ಹುದ್ದೆಗಳನ್ನು ಅಲಂಕರಿಸಿದ್ದರು. ಮುಅಲ್ಲಿಮರ (ಮದ್ರಸಾ ಅಧ್ಯಾಪಕರ) ಅಭಿವೃದ್ಧಿಗಾಗಿ ಬಹಳಷ್ಟು ಕಷ್ಟಪಟ್ಟ ಪ್ರಮುಖರಲ್ಲಿ ಓರ್ವರಾಗಿದ್ದಾರೆ.
ಇದೀಗ ಆ ಮಹಾ ಚೇತನ ಅಲ್ಲಾಹನೆಡೆಗೆ ಪಯಣಿಸಿದೆ ಎಂಬ ಕಹಿ ಸುದ್ದಿಯನ್ನು ಅರಗಿಸಿ ಕೊಳ್ಳಲು ನಮ್ಮಿಂದ ಸಾಧ್ಯವಿಲ್ಲ. ಅಲ್ಲಾಹನು ಅವರ ಮಹಿಮೆಯನ್ನು ಹೆಚ್ಚಿಸಲಿ ಆ ಮಹಾನುಭಾವರ ದರಜವನ್ನು ಉನ್ನತಿಗೇರಿಸಲಿ ಸ್ವರ್ಗ ಉದ್ಯಾವನದಲ್ಲಿ ನಮ್ಮೆಲ್ಲರನ್ನು ಒಂದಾಗಿ ಸೇರಿಸಲಿ.. (ಆಮೀನ್).
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.