ಮೂಡುಬಿದಿರೆ (www.vknews.com) : ಜೈನಕಾಶಿ ಮೂಡುಬಿದಿರೆಯ ಬಡಗಬಸ್ತಿ ಯ ಭಗವಾನ್ ಶ್ರೀ ಚಂದ್ರಪ್ರಭಸ್ವಾಮಿಯ ರಥೋತ್ಸವ ಗುರುವಾರ ( 25/2/2021) ಅದ್ದೂರಿಯ ಜರಗಿತು .
‘ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ’:
ಮೂಡುಬಿದಿರೆ ಜೈನ ಮಠದ ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು ಪಾವನ ಸಾನಿಧ್ಯವನ್ನು ವಹಿಸಿ , ಆಶೀರ್ವಚನ ನೀಡಿದರು.
ಅಳದಂಗಡಿ ಅರಮನೆಯ ಅರಸರದ ಡಾ. ಪದ್ಮಪ್ರಸಾದ್ ಅಜಿಲರು. ಶ್ರೀ ಕ್ಷೇತ್ರ ಧರ್ಮಸ್ಥಳ ಡಿ. ಸುರೇಂದ್ರ ಕುಮಾರ್ ಹೆಗ್ಗಡೆ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಸಹಿತ ಮೊದಲಾದ ಅನೇಕ ಗಣ್ಯ ಮಹನೀಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಧವಲತ್ರಯ ಜೈನ ಕಾಶಿ ಟ್ರಸ್ಟ್ ಮೂಡುಬಿದಿರೆ ಆಶ್ರಯದಲ್ಲಿ ಸುದೇಶ್ ಜೈನ್ ಮಕ್ಕಿಮನೆ ನೇತೃತ್ವದ ಮಕ್ಕಿಮನೆ ಕಲಾವೃಂದದ ವತಿಯಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು , ಎಲ್ಲರ ಮೆಚ್ಚುಗೆ ಪಡೆಯಿತು . ಸಾಂಸ್ಕೃತಿಕ ಕಾರ್ಯಕ್ರಮವನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಪಂಚಮಿ ಮಾರೂರು ಹಾಗೂ ಪ್ರಮಯಿ ಜೈನ್ ಮೂಡುಬಿದಿರೆ ನಿರೂಪಿಸಿದರು. ಚೇತನ ಕುಮಾರ್ ಜೈನ್ ವೇಣೂರು ಸಹಕರಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.