(www.vknews.in)ಕಡಬ:-ಇಲ್ಲಿನ ಕಡಬ ಗೃಹರಕ್ಷಕ ದಳ ಘಟಕಕ್ಕೆ ರವಿವಾರ ಮಾನ್ಯ ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾದ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಕಮಾಡೆಂಟ್ ಡಾ|| ಮುರಳಿ ಮೋಹನ್ ಚೂಂತಾರು ಭೇಟಿ ನೀಡಿದರು ನಂತರ ಕವಾಯತು ವೀಕ್ಷಣೆ ಮಾಡಿದರು ನಂತರ ಗೃಹರಕ್ಷಕರನ್ನು ಉದ್ದೇಶಿಸಿ ಮಾತಾನಾಡಿದರು
ಕಡಬ ಗೃಹರಕ್ಷಕದಳ ಘಟಕದಿಂದ ಸನ್ಮಾನ:-ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾಗಿರುವ ಜಿಲ್ಲಾ ಕಮಾಡೆಂಟ್ ಡಾ||ಮುರಲೀ ಮೋಹನ್ ಚೂಂತಾರುರವರನ್ನು ಕಡಬ ಘಟಕದ ವತಿಯಿಂದ ಮುಖ್ಯ ಅತಿಥಿಯಾಗಿ ಆಗಮಿಸಿದ ನಿವೃತ್ತ ಶಿಕ್ಷಕರಾದ ಜನಾರ್ಧನ ಗೌಡ ಪಣೆಮಜಲು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಮತ್ತು ಶ್ರೀ ದುರ್ಗಾಂಬಿಕಾ ಅಮ್ಮನವರ ವ್ಯವಸ್ಥಾಪನ ಸಮಿತಿಯ ನಿಕಟಪೂರ್ವ ಅಧ್ಯಕ್ಷರು ಇವರು ಶಾಲು ಹೊದಿಸಿ ಫಲ-ಪುಷ್ಪ ನೀಡಿ ಸನ್ಮಾನಿಸಲಾಯಿತು
ಮೊದಲಿಗೆ ಕಮಾಡೆಂಟ್ ರವರಿಗೆ ಕಡಬ ಘಟಕದ ಪ್ರಭಾರ ಘಟಕಾಧಿಕಾರಿ ತೀರ್ಥೇಶ್ ರವರು ಗೌರವ ವಂದನೆ ಸಲ್ಲಿಸಿದರು, ಎಸ್ ಎಲ್ ಆದ ಉದಯಶಂಕರ್, ಗೃಹರಕ್ಷಕ ರಾದ ಸಂದೇಶ್,ಲೊಲಾಕ್ಷ, ಇವರು ಅಥಿತಿಗಳಿಗೆ ಹೂ ಗುಚ್ಚ ನೀಡಿ ಗೌರವಿಸಿದರು ಈ ಸಂದರ್ಭದಲ್ಲಿ ಘಟಕದ ಸಿಬ್ಬಂದಿ ಉಪಸ್ಥಿತರಿದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.