ಪುತ್ತೂರು(ವಿಶ್ವಕನ್ನಡಿಗ ನ್ಯೂಸ್): ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಬೆಟ್ಟಂಪಾಡಿ ಇದರ ಆಶ್ರಯದಲ್ಲಿ ಕೆಎಂಸಿ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮವು ಬೆಟ್ಟಂಪಾಡಿ ಸಮುದಾಯ ಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಸಭಾ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಶಾಫಿ ಬೆಳ್ಳಾರೆ ಮಾತನಾಡಿ ರಕ್ತದಾನ ಮಹಾದಾನ ಸದೃಢವಂತಹ ಎಲ್ಲಾರೂ ರಕ್ತದಾನ ಮಾಡುವ ಮನೋಭಾವ ರೂಢಿಸಿಕೊಳ್ಳಬೇಕು. ಸಾವು ಬದುಕಿನ ಮಧ್ಯೆ ಹೋರಾಟ ನಡೆಸುವವರನ್ನು ಬದುಕಿಸಲು ರಕ್ತದಾನ ಮಾಡಬೇಕು, ವ್ಯಕ್ತಿಯೊಬ್ಬ ಇನ್ನೊಬ್ಬರ ಜೀವ ಉಳಿಸಲು ತನ್ನ ರಕ್ತವನ್ನು ಸ್ವಯಂ ಪ್ರೇರಿತರಾಗಿ ದಾನ ಮಾಡಲು ಮುಂದಾಗಿ ಜೀವ ಉಳಿಸುವಂತಹ ಮಹತ್ಕಾರ್ಯ ಮಾಡಬೇಕು. ಇಂತಹ ಸಮಾಜಮುಖಿ ಕಾರ್ಯ ಮಾಡುವಂತಹ ಉದ್ದೇಶದಿಂದ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಅನ್ನು ರಚಿಸಿದ್ದೇವೆ. ಮುಂದಕ್ಕೆ ರಾಜ್ಯದ ಪ್ರತೀ ಸ್ಥಳಗಳಲ್ಲಿ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ವ್ಯಾಪಕವಾಗಿ ಕಾರ್ಯ ನಿರ್ವಹಿಸಲಿದೆ ಎಂದರು. ಅಸ್ಸಯ್ಯದ್ ಹಾಶಿಂ ಬಾಅಲವಿ ತಂಙಳ್ ಕೊರಿಂಗಿಲ ಅವರು ಕಾರ್ಯಕ್ರಮದಲ್ಲಿ ದುವಾ ಆಶೀರ್ವಚನಗೈದರು. ಸಭಾ ಕಾರ್ಯಕ್ರಮದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಪುತ್ತೂರು ಜಿಲ್ಲಾಧ್ಯಕ್ಷರಾದ ಜಾಬೀರ್ ಅರಿಯಡ್ಕ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಸಮಿತಿ ಸದಸ್ಯರಾದ ಸಾದಿಕ್ ಅರಿಯಡ್ಕ ಮಾತನಾಡಿ ರಕ್ತದಾನ ಮಹಾದಾನ ಯುವ ತರುಣರೇ ತುಂಬಿರುವಂತಹ ಭಾರತೀಯ ಸಮಾಜದಲ್ಲಿ ಆರೋಗ್ಯವಂತ ಭಾರತ ನಿರ್ಮಾಣವಾಗಬೇಕಾದರೆ ಪ್ರತಿಯೊಬ್ಬರು ಹಾಗೂ ವಿದ್ಯಾರ್ಥಿ ಸಮೂಹವು ರಕ್ತದಾನ ಮಾಡಬೇಕು ಹಾಗೂ ಸಮಾಜದಲ್ಲಿ ರಕ್ತದಾನದ ಬಗ್ಗೆ ಜಾಗೃತಿಯನ್ನು ಮೂಡಿಸಿಬೇಕು ಎಂದರು. ನಮ್ಮ ಒಂದೊಂದು ಹನಿ ರಕ್ತವೂ ಒಂದೊಂದು ಜೀವವನ್ನು ಬದುಕಿಸುತ್ತದೆ ಇದರಿಂದ ಆರೋಗ್ಯವಂತ ಭಾರತ ನಿರ್ಮಾಣವಾಗುತ್ತದೆ. ಯಾರೆಲ್ಲ ರಕ್ತದಾನಿಗಳಾಗಳು ಯೋಗ್ಯರು ಮತ್ತು ರಕ್ತದಾನ ಮಾಡುವಾಗ ಅಥವಾ ಮಾಡಿದ ನಂತರ ಗಮನಿಸಬೇಕಾದ ಕೆಲವೊಂದು ಮುನ್ನೆಚ್ಚರಿಕೆ ಕ್ರಮದ ಕುರಿತು ಮಾತನಾಡಿದರು. ಸುಮಾರು 75 ಕ್ಕು ಹೆಚ್ಚು ಸ್ಥಳೀಯ ಯುವಕರು ಹಲವಾರು ಸಂಘಟನೆಗಳ ಪದಾಧಿಕಾರಿಗಳು ಸದಸ್ಯರು ರಕ್ತದಾನವನ್ನು ಮಾಡಿದರು.
ಈ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಬೆಟ್ಟಂಪಾಡಿ ಘಟಕವನ್ನು ರಚಿಸಲಾಯಿತು. ಇದರ ಗೌರವಾಧ್ಯಕ್ಷರಾಗಿ ಹಮೀದ್ ಕೊಮ್ಮೆಮ್ಮಾರ್, ಅಧ್ಯಕ್ಷರಾಗಿ ಅಶ್ರಫ್ ಪಾರಾ, ಕಾರ್ಯದರ್ಶಿಯಾಗಿ ಸಿದ್ದೀಕ್ ತಂಬುತ್ತಡ್ಕ , ಉಪಾಧ್ಯಕ್ಷರಾಗಿ ಅಶ್ರಫ್ ಕುಕ್ಕುಪುಣಿ ಮತ್ತು ಜೊತೆ ಕಾರ್ಯದರ್ಶಿಯಾಗಿ ಅಶ್ರಫ್ ಪಾರ್ಪಲ, ಕೋಶಾಧಿಕಾರಿಯಾಗಿ ರಫೀಕ್ ಡಿ.ಎಂ ಹಾಗೂ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅಬ್ದುಲ್ ರಹಿಮಾನ್ ಹಾಜಿ ಮನ್ನಾಪು ಅಧ್ಯಕ್ಷರು ಜುಮ್ಮಾ ಮಸೀದಿ ರೆಂಜ, ಮಹಮ್ಮದ್ ಹಾಜಿ ಕೊರಿಂಗಿಲ ಅಧ್ಯಕ್ಷರು ಜುಮಾ ಮಸೀದಿ ಕೊರಿಂಗಿಲ, ಅಬ್ದುಲ್ಲ್ ಕುಂಞ ಅಧ್ಯಕ್ಷರು ಸುನ್ನಿ ನಗರ ಜುಮಾ ಮಸೀದಿ ಆರ್ಲಪದವು, ರಝಾಕ್ ಬದ್ರಿಯಾ ಅಧ್ಯಕ್ಷರು ಅಫ್ರಾ ಜುಮಾ ಮಸೀದಿ ಆರ್ಲಪದವು, ಆಸಿಫ್ ತಂಬುತ್ತಡ್ಕ ಅಧ್ಯಕ್ಷರು ಜುಮಾ ಮಸೀದಿ ತಂಬುತ್ತಡ್ಕ , ಮೊಹಮ್ಮದ್ ನವಾಝ್ ಅಧ್ಯಕ್ಷರು ಜುಮಾ ಮಸೀದಿ ಪೇರಲ್ತಡ್ಕ , ಮಹಮ್ಮದ್ ಹಾಜಿ ಕುಕ್ಕುವಳ್ಳಿ, ಶಾಕೀರ್ ಕಟ್ಟತ್ತಾರ್ ಅಧ್ಯಕ್ಷರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕುಂಬ್ರ ಡಿವಿಜನ್ , ಅಶ್ರಫ್ ಸಂಟ್ಯಾರ್ ಅಧ್ಯಕ್ಷರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಪ್ಯ ಏರಿಯಾ, ಸಫ್ವಾನ್ ಸಾಬಿತ್ ಅಜ್ಜಿಕಲ್ಲು ಅಧ್ಯಕ್ಷರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಟ್ಟಂಪಾಡಿ ಘಟಕ, ಅಬ್ದುಲ್ ರಹಿಮಾನ್ ಮನ್ನಾಪು ಅಧ್ಯಕ್ಷರು ಎಸ್ ವೈ ಎಸ್ ರೆಂಜ, ಹಮೀದ್ ಕೊಮ್ಮೆಮ್ಮಾರ್ ಅಧ್ಯಕ್ಷರು ಸಂಶುಲ್ ಉಲಮಾ ಕಲ್ಚರಲ್ ಸೆಂಟರ್ ಪೇರಲ್ತಡ್ಕ , ಮೈೂದು ಕುಂಞಿ ಸದಸ್ಯರು ಗ್ರಾಮ ಪಂಚಾಯತ್ ಬೆಟ್ಟಂಪಾಡಿ, ನವೀನ್ ರೈ ಸದಸ್ಯರು ಗ್ರಾಮ ಪಂಚಾಯತ್ ಬೆಟ್ಟಂಪಾಡಿ , ಆಲಿ ಕುಂಞ ಬಿ.ಇ ಮಾಜಿ ಸದಸ್ಯರು ಗ್ರಾಮ ಪಂಚಾತ್ ಬೆಟ್ಟಂಪಾಡಿ, ಮಜೀದ್ ಅಜ್ಜಿಕಲ್ಲು ಪ್ರಧಾನ ಕಾರ್ಯದರ್ಶಿ ಸಿರಾಜುಲ್ ಹುದಾ ಅಸೋಸಿಯೇಶನ್ ಗುಮ್ಮಟಗದ್ದೆ, ಮಹಮ್ಮದ್ ಎಸ್ ಪಿ ಟಿ , ಶರೀಫ್ ಕುಕ್ಕುವಲ್ಲಿ , ಸಂಶೀರ್ ತಂಬುತ್ತಡ್ಕ , ಸವಾದ್ ರೆಂಜ ಅಧ್ಯಕ್ಷರು ಎಸ್ ಡಿ ಪಿ ಐ ಬೆಟ್ಟಂಪಾಡಿ , ಬಶೀರ್ ವಾಗ್ಲೆ ಅಧ್ಯಕ್ಷರು ಎಸ್ ಡಿ ಪಿ ಐ ಸಂಪ್ಯ ವಲಯ , ಕೆಎಂಸಿ ವೈದ್ಯರಾದ ಪ್ರಜ್ವಲ್ ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಝಕರಿಯಾ ಕೊರಿಂಗಿಲ ಸ್ವಾಗತಿಸಿ ವಂದಿಸಿದರು. ಶೌಕತ್ ಅಲಿ ರೆಂಜ ಕಾರ್ಯಕ್ರಮವನ್ನು ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.