ಕೆಸಿಏಫ್ ದುಬೈ ನೋರ್ತ್ ಝೋನಿನ ನೂತನ ಕಚೇರಿಯ ಉದ್ಘಾಟನೆ ಹಾಗೂ ಬುರದಃ ,ಮಹ್ಳರತುಲ್ ಬದ್ರಿಯಾ ಮಜ್ಲಿಸ್ ದಿನಾಂಕ 26/2/2021 ಶುಕ್ರವಾರ ಸಯ್ಯಿದ್ ಮುಹಮ್ಮದ್ ತ್ವಾಹ ಮದನಿ ತಂಙಳ್ ಚೆರ್ವತ್ತೂರ್ ರವರ ನೇತೃತ್ವದಲ್ಲಿ ಮಗ್ರಿಬ್ ನಮಾಝ್ ಬಳಿಕ ನಡೆಯಿತು.
ನೂತನ ಕಚೇರಿ ಉದ್ಘಾಟನೆ ನಡೆಸಿದ ಸಯ್ಯಿದ್ ಮುಹಮ್ಮದ್ ತ್ವಾಹ ಮದನಿ ತಂಙಳ್ ರವರು ನೂತನ kcf ಕಚೇರಿಗೆ ತಾಜುಲ್ ಫುಕಹಾಅ್ ಬೇಕಲ ಉಸ್ತಾದ್ ಸ್ಮಾರಕ ಕಚೇರಿ ಎಂಬ ನಾಮಕರಣ ಮಾಡಿದರು ಕಾರ್ಯಕ್ರಮದ ಅಧ್ಯಕ್ಸತೆಯನ್ನು ದುಬೈ ನೋರ್ತ್ ಝೋನ್ ಅಧ್ಯಕ್ಸರಾದ ಇಸ್ಮಾಯಿಲ್ ಮದನಿ ನಗರರವರು ವಹಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಸಿದ kcf ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಸರಾದ ಜಲೀಲ್ ನಿಝಾಮಿ ಹಾಗೂ kcf ರಾಷ್ತ್ರೀಯ ಸಮಿತಿ ಪ್ರದಾನ ಕಾರ್ಯದರ್ಶಿ ಮೂಸ ಹಾಜಿ ಬಸರರವರು ಶುಭಹಾರೈಸಿದರು ಕಾರ್ಯಕ್ರಮದಲ್ಲಿ ಅಸ್ಸುಫ್ಫ ಹಾಗೂ ತಾರೀಖ್ ಕ್ಲಾಸ್ ನಡೆಸಿಕೊಂಡು ಬರುತ್ತಿರುವ *kcf ಯುಎಇ ರಾಷ್ಟ್ರೀಯ ಸಮಿತಿ ಶಿಕ್ಸಣ ವಿಭಾಗದ ಅಧ್ಯಕ್ಸರಾದ ಇಬ್ರಾಹಿಂ ಸಖಾಫಿ ಕೆದುಂಬಾಡಿ ಉಸ್ತಾದರಿಗೆ ಗೌರವಾರ್ಪಣೆ ನೀಡಲಾಯಿತು.
kcf ಯುಎಇ ರಾಷ್ತ್ರೀಯ ಸಮಿತಿಯ ವತಿಯಿಂದ 2021 ಸಾಲಿನ ಪ್ರತಿಭೋತ್ಸವದಲ್ಲಿ ಭಾಗವಹಿಸಿ ಕಲಾ ಪ್ರತಿಭೆಗಳಾಗಿ ಹೊರಹೊಮ್ಮಿದ ದುಬೈ ನೋರ್ತ್ ಝೋನಿನ ಮುಹಮ್ಮದ್ ರಂಲಿ ಕೋಡಿ ಹಾಗೂ ಸಾರಾ ಬುರೈದ ಕೋಡಿ ರವರನ್ನು ಸನ್ಮಾನಿಸಲಾಯಿತು.
ಇತ್ತೀಚ್ಚಿಗೆ ಮರಣ ಹೊಂದಿದ ಅಬ್ದುಲ್ ಕೆರೀಂ ಹಾಜಿ ಉಳ್ಳಾಲ ಹಾಗೂ ಕರ್ನಾಟಕ ಜಂಇಯಾತುಲ್ ಮುಅಲ್ಲಿಮೀನ್ ಅದ್ಯಕ್ಶರಾದ ಸಅದ್ ಮುಸ್ಲಿಯಾರ್ ಆತೂರು ರವರಿಗೆ ಖತ್ಮುಲ್ ಕುರ್ಆನ್ ಸಮರ್ಪಣೆಗೆ ಸಯ್ಯಿದ್ ಅಬೂಬಕ್ಕರ್ ತಂಙಳ್ ಕೋಲ್ಪೆ ರವರು ನೇತೃತ್ವ ನೀಡಿದರು.
ಕಾರ್ಯಕ್ರಮದಲ್ಲಿದುಬೈ ನೋರ್ತ್ ಝೋನ್ ಶಿಕ್ಸಣ ಸಮಿತಿ ಆದ್ಯಕ್ಷರಾದ ಅಬ್ದುಲ್ ಅಝೀಝ್ ಲತೀಫಿ ಸ್ವಾಗತಿಸಿ ಕಾರ್ಯದರ್ಶಿ ಅಬ್ದುಲ್ ಹಮೀದ್ ಸಖಾಫಿ ಬೆಳ್ಳಾರೆ ಕೃತಜ್ಞತೆ ಸಲ್ಲಿಸಿದರು.ಈ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಅಲ್ಲಾಹು ತಕ್ಕದಾದ ಪ್ರತಿಫಲ ನೀಡಿ ಅನುಗ್ರಹಿಸಲಿ ಆಮೀನ್ .
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.