ಇದೇ ಮೊದಲ ಬಾರಿಗೆ ಕೇರಳ ಹಾಗೂ ಕರ್ನಾಟಕ ರಾಜ್ಯಗಳ ಎಂಟೆಂಟು ತಂಡಗಳ ನಡುವೆ ನಡೆದ ಐತಿಹಾಸಿಕ ಕ್ರೀಡಾಕೂಟ I ಯಂಗ್ ಫ್ರೆಂಡ್ಸ್ ಊರುವ ಚಾಂಪಿಯನ್ಸ್
ಮಂಜೇಶ್ವರ (www.vknews.com) : ಅಂಡರ್ ಆರ್ಮ್ ವರ್ಲ್ಡ್ ವಾಟ್ಸಪ್ ಗ್ರೂಪ್ ಅಂಡರ್ ಆರ್ಮ್ ಕ್ರೀಡೆಯಲ್ಲಿ ಹೊಸ ಪ್ರಯೋಗ ನಡೆಸಿ ಐತಿಹಾಸಿಕ ಕ್ರೀಡಾಕೂಟವನ್ನು ಮಾರ್ಚ್ 17/18 ರಂದು ಮಂಜೇಶ್ವರ ಪಂಚಾಯತ್ ಮಿನಿ ಕ್ರೀಡಾಂಗಣಲ್ಲಿ ಆಯೋಜಿಸಿತು. ಕೇರಳ ಹಾಗೂ ಕರ್ನಾಟಕ ರಾಜ್ಯಗಳ ಪ್ರಸಕ್ತ ಎಂಟೆಂಟು ತಂಡಗಳನ್ನು ಆಹ್ವಾನಿಸಿ ಹೊಸ ಮೈಲುಗಲ್ಲುಗಳನ್ನು ಸ್ಥಾಪಿಸಿತು.
ಕ್ರಿಡಾಕೂಟದ ಮೊದಲ ದಿನ ಘಟಾನು ಘಟಿ ಆಟಗಾರರನ್ನೂಳಗೊಂಡ ಕಾಸಗೋಡು ಜಿಲ್ಲೆಯ ಎಂಟು ತಂಡಗಳ ನಡುವೆ ಪಂದ್ಯಾಟ ನಡೆಯಿತು. ಅದರಲ್ಲಿ ಎನ್ ಯಿ ಪೊಸೋಟ್ ಪ್ರಶಸ್ತಿ ಹಂತಕ್ಕೆ ಲಗ್ಗೆ ಇಟ್ಟಿತು. ಎರಡನೇ ದಿನದಂದು ದಕ್ಷಿಣ ಕನ್ನಡ ಜಿಲ್ಲೆಯ ಘಟಾನು ಘಟಿ ಆಟಗಾರರನ್ನೂಳಗೊಂಡ ಎಂಟು ತಂಡಗಳ ನಡುವೆ ಪಂದ್ಯಾಟ ನಡೆಯಿತು, ಇದರಲ್ಲಿ ಯಂಗ್ ಫ್ರೆಂಡ್ಸ್ ಊರುವ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿತು. ಸಜ್ಜಾದ್ ಉಪ್ಪಳ, ಚಂದ್ರು ಕುಂಬ್ಳೆ, ರಹೀಮ್ ಬಿಎಸ್ಸಿ, ನಾಸಿರ್, ಝಮ್ ಝಮ್ ಕುಞ, ಮತ್ತು ನ್ಯೂಸ್ಟಾರ್ ಇವರ ಪ್ರಾಯೋಜಕತ್ವ ಹಾಗೂ ಸಹಕಾರದಿಂದ ನಡದ ಕ್ರಿಡಾಕೂಟವು ಅಂಡರ್ ಆರ್ಮ್ ನ ಇತಿಹಾಸ ಪುಟ ಸೇರಿತು.
ಅಂಡರ್ ಆರ್ಮ್ ನ ಇತಿಹಾಸದಲ್ಲೆ ಮೊದಲ ಬಾರಿಗೆ ಆಯೋಜಿಸಿದ ಅಂಡರ್ ಆರ್ಮ್ ವರ್ಲ್ಡ್ ಗ್ಲಾಡಿಯೇಟರ್ ಟ್ರೊಫಿ ಫೈನಲ್ ಪಂದ್ಯಾಟ ಕೇರಳದ ಎನ್ ಯಿ ಪೊಸೋಟ್ ಹಾಗೂ ಕರ್ನಾಟಕದ ಯಂಗ್ ಫ್ರೆಂಡ್ಸ್ ಊರುವ ನಡೆವೆ ನಡೆಯಿತು. ಮೈದಾನದ ಸುತ್ತಲು ನೆರೆದಿದ್ದ ಪ್ರೇಕ್ಷಕರು, ವೇದಿಕೆಯಲ್ಲಿ ಹಾಸಿನರಾದ ಅತಿಥಿಗಳು, ಬೆದ್ರ ಮೀಡಿಯಾದ ನೇರ ಪ್ರಸಾರದ ವಿಕ್ಷಕರ ಸಮ್ಮುಖದಲ್ಲಿ ಯಂಗ್ ಫ್ರೆಂಡ್ಸ್ ಊರುವ (1 ಲಕ್ಷ ನಗದು) ಚೊಚ್ಚಲ ಅಂಡರ್ ಆರ್ಮ್ ವರ್ಲ್ಡ್ ಗ್ಲಾಡಿಯೇಟರ್ ಟ್ರೋಫಿಯನ್ನು ಎತ್ತಿ ಹಿಡಿಯಿತು.
ಎನ್ ಯಿ ಪೊಸೋಟ್ (50 ಸಾವಿರ ನಗದು) ರನ್ನರ್ ಅಪ್ ಆಗಿ ತೃಪ್ತಿ ಪಟ್ಟಿತು. ವೈಯುಕ್ತಿಕ ಪ್ರಶಸ್ತಿ ಪುರಸ್ಕೃತ ಉತ್ತಮ ಎಸೆತಗಾರ ಚರನ್ ಊರುವ, ಉತ್ತಮ ದಾಂಡುಗಾರ ಚೆಮ್ಮಿ, ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಅಶ್ವಿನ್ ರಾಜ್ ಮತ್ತು ಸರಣಿ ಶ್ರೇಷ್ಠ ಅರ್ಶದ್ ರವರು ಪಾತ್ರರಾದರು. ಕೇರಳದ ಅಂಡರ್ ಆರ್ಮ್ ಇತಿಹಾಸದಲ್ಲೆ ಇದೇ ಮೊದಲ ಬಾರಿಗೆ ಆಯೋಜಿಸಿದ ಕ್ರಿಡಾಕೂಟವನ್ನು ಬೆದ್ರ ಮೀಡಿಯಾ ಮುಖಾಂತರ 1.5 ಲಕ್ಷ ಅಧಿಕ ಮಂದಿ ಯೂಟೂಬ್ ವೀಕ್ಷಿಸುದರೊಂದಿಗೆ ಕ್ರಿಡಾಕೂಟವು ಯಶಸ್ಸು ಕಾಣಲು ಸಾಧ್ಯವಾಯತು.
ಕ್ರೀಡಾಕೂಟದ ಸಮಾರೋಪ ಸಮಾರಂಭವನ್ನು ಮಂಜೇಶ್ವರ ಪೋಲೀಸ್ ಠಾಣಾ ಸಿ ಐ ರಾಘವನ್ ಸರ್ ಮುಖ್ಯ ಅತಿಥಿಗಯಾಗಿ ಭಾಗವಹಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಇರ್ಷಾದ್ ಕುಂಜತ್ತೂರ್ ವಹಿಸಿದರು. ಸಮಾರಂಭದ ಉದ್ಘಾಟನೆಯನ್ನು ಹಾರಿಸ್ ಕಣ್ಣೂರ್ ನೆರವೇರಿಸಿದರು. ಹಂಝ ಸ್ವಾಗತಿಸಿ ಮೋನಿಸ್ ವಂದಿಸಿದರು. ವೇದಿಕೆಯಲ್ಲಿ ಇಸ್ಮಾಯಿಲ್ ಗುಡ್ ಲಕ್, ನವೀನ್ ಮಂತೇರೊ, ಹಮೀದ್ ಹೊಸಂಗಡಿ ಹಾಗೂ ಸಲೀಮ್ ನ್ಯೂಸ್ಟಾರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸ್ಟಾರ್ ನಮಾಝ್ ಕಾರ್ಯಕ್ರಮವನ್ನು ನಿರೂಪಿಸಿದರು. ಕ್ರೀಡಾಕೂಟದ ತೀರ್ಪುಗಾರರಾಗಿ ರೋಲನ್ ಪಿಂಟೊ ಹಾಗೂ ಹರೀಶ್ ಪಡೀಲ್ ವೀಕ್ಷಕ ವಿವರಣೆಗಾರರಾಗಿ ಸ್ಟಾರ್ ನವಾಝ್, ಸತೀಶ್ ಸಾಲಿಯಾನ್ ಹಾಗೂ ಅಬ್ದುಲ್ ರಹಿಮಾನ್ ಸಹಕರಿಸಿದರು.
ಕ್ರೀಡಾಕೂಟದ ಸಂಘಟಕರಾದ ಫಿರೋಜ್ ಮಂಜೇಶ್ವರ, ರಖೀಬ್, ಚೆಮ್ಮಿ, ಕೌಸರ್ ಬಡಾಜೆ, ಹಂಝ ಸೂಪರ್ ಸ್ಟಾರ್ ಪಂಜ, ಇರ್ಷಾದ್ ನ್ಯೂಸ್ಟಾರ್, ಮೋನಿಷ್ ಮುನ್ನಿ, ಅಸ್ಗರ್ ಫೇಮಸ್, ಹಾರಿಸ್ ವೈಎಫ್ಸಿ, ಅಮಾನ್ ಕುಂಬ್ಳೆ, ಜಾಸಿ ಗುಡ್ ಲಕ್ ಹಾಗೂ ಅಂಡರ್ ಆರ್ಮ್ ವರ್ಲ್ಡ್ ಗ್ಲಾಡಿಯೇಟರ್ ವಾಟ್ಸಪ್ ಗ್ರೂಪ್ ಕ್ರಿಡಾಕೂಟವನ್ನು ಯಶಸ್ವಿಯಾಗಿ ಆಯೋಜಿಸಿದರು.
ಕ್ರೀಡಾಕೂಟದಲ್ಲಿ ಭಾಗವಹಿಸಿದ ತಂಡಗಳು.
ಪೂಲ್ ಎ – ಕೇರಳ ಕಾಸರಗೋಡು
ಎನ್ ಇ ಪೊಸೋಟ್, ಗುಡ್ ಲಕ್ ಪೊಪೋಟ್, ನ್ಯೂಸ್ಟಾರ್ ಕುಂಜತ್ತೂರ್, ಐಸಿಸಿ ನಿರ್ಚಾಲ್, ನುಸ್ರತ್ ಚೌಕಿ, ಅಪ್ನ ಗಲ್ಲಿ ಕ್ರಿಕೇಟರ್ಸ್, ಟೀಮ್ ಕುಂಬ್ಳೆ ಮತ್ತು ಎಮ್ ಎನ್ ಮೂಸೋಡಿ.
ಪೂಲ್ ಬಿ – ಕರ್ನಾಟಕ ದಕ್ಷಿಣ ಕನ್ನಡ
ಯಂಗ್ ಫ್ರೆಂಡ್ಸ್ ಊರುವ, ಎನ್ ಎಮ್ ಮಂಗಳೂರು, ಎಚ್ ಎಫ್ ಸಿ ಹರೇಕಳ, ಟೀಮ್ ಎಲಿಗೆಂಟ್, ಬ್ರದರ್ಸ್ ಮಕ್ಯಾರ್, ಗೋರಿ ಯಂಗ್ ಬೋಯ್ಸ್, ಯಂಗ್ ಫ್ರೆಂಡ್ಸ್ ಗಾಂಧಿನಗರ ಮತ್ತು ಕೆಎಫ್ಸಿ ಕೋಡಿಕಲ್.
ವರದಿ – ಮೀಡಿಯಾ ಟೀಮ್ (ಅಂಡರ್ ಆರ್ಮ್ ವರ್ಲ್ಡ್ ಗ್ಲಾಡಿಯೇಟರ್)
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.