(www.vknews.com) : ಆಧುನಿಕ ಯುಗದಲ್ಲಿ ಒಂದು ಸಮುದಾಯದ ಅಳಿವು ಉಳಿವು ಎಂಬುದು ಶಿಕ್ಷಣದ ಆಧಾರದಲ್ಲಿ ರೂಪುಗೊಂಡಿದ್ದು ಈ ಬಗ್ಗೆ ಸಮಾಜದ ಉನ್ನತ ಸ್ತರದಲ್ಲಿರುವ ಉಲಮಾ ಉಮರಾ ನಾಯಕರು ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ನಿರಂತರ ಮಾಡಬೇಕಿದೆ.
ಮುಸ್ಲಿಂ ಸಮಾಜದ ಮಕ್ಕಳು ಶಿಕ್ಷಣದಲ್ಲಿ ತೀರಾ ಹಿಂದುಳಿದಿರುವ ಅಪಾಯಕಾರಿ ಅಂಕಿಅಂಶಗಳು ಲಭ್ಯವಾಗುತ್ತಿದ್ದು ವಿಶೇಷವಾಗಿ ಗಂಡು ಮಕ್ಕಳು ಕಳಪೆ ಸಾಧನೆ ಮಾಡುತ್ತಿರುವ ವರದಿಗಳು ಬರುತ್ತಿದೆ.
ಪರೀಕ್ಷೆಗೆ ಮಕ್ಕಳು ಸಿದ್ದಗೊಳ್ಳುತ್ತಿರುವ ಈ ಸಂಧರ್ಭದಲ್ಲಿ ಅವರಿಗೆ ಪ್ರೇರಣೆ ನೀಡುವಂತೆ ವಿವಿಧ ರೀತಿಯ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳಲು ಮೊಹಲ್ಲಾ ನಾಯಕರು ಮುಂದೆ ಬರಬೇಕಿದೆ.
ಮೊಹಲ್ಲಾ ಖತೀಬರು ಜುಮಾ ಭಾಷಣದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡುವುದೇ ಅಲ್ಲದೇ ವಿದ್ಯಾರ್ಥಿಗಳ ಪೋಷಕರನ್ನೂ ಸಂಪರ್ಕಿಸಿ ಪರೀಕ್ಷೆ ಯ ಪೂರ್ವಸಿದ್ಧತೆ ಗೆ ಬೇಕಾದ ಅಗತ್ಯ ಕಾರ್ಯಗಳನ್ನು ನಿರ್ವಹಿಸಲು ಮುಂದಾಗಬೇಕು.ಆ ಮೂಲಕ ಸಕಾರಾತ್ಮಕ ಪರಿಣಾಮ ಬೀರ ಬಹುದು ಎಂದು ನಂಬಲಾಗಿದೆ.
ಇದನ್ನು ಅತ್ಯಂತ ಗೌರವಪೂರ್ಣವಾಗಿ ಸ್ವೀಕರಿಸಿ ಸಮಾಜದ ಸಬಲೀಕರಣದಲ್ಲಿ ಎಲ್ಲರೂ ಕೈ ಜೋಡಿಸುವಂತೆ ರಾಜ್ಯ ದಾರಿಮಿ ಉಲಮಾ ಒಕ್ಕೂಟ ಕರೆ ನೀಡಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.