ಸುಳ್ಯ (ವಿಶ್ವ ಕನ್ನಡಿಗ ನ್ಯೂಸ್) : KA21 ಸುಳ್ಯ ವಾಟ್ಸಾಪ್ ಗ್ರೂಪ್ ಹಾಗುಗಾಂಧಿ ರೋಯಲ್ ವಾಟ್ಸಾಪ್ ಗ್ರೂಪ್ ವತಿಯಿಂದ ಮರ್ಹೂಂ ಕಟ್ಟೆ ಕ್ಕಾರ್ ಅಬ್ಬಾಸ್ ಹಾಜಿ ಹಾಗು ಮರ್ಹೂಂ ಕೆಎಂ ಅಬ್ದುಲ್ಲ ಹಾಜಿ ಸ್ಮರಣಾರ್ಥ ವಾಗಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಇದರ ಜಂಟಿ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬ್ಲಡ್ ಬ್ಯಾಂಕ್ ಮಂಗಳೂರು ಇದರ ಸಹಭಾಗಿತ್ವದಲ್ಲಿ ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರವು ದಿನಾಂಕ 04 ಎಪ್ರಿಲ್ 2021 ಆದಿತ್ಯವಾರ ಬೆಳಿಗ್ಗೆ 9:30ರಿಂದ ಮದ್ಯಾಹ್ನ 1:00 ರ ವರೆಗೆ ಅನ್ಸಾರಿಯಾ ಎಜುಕೇಷನಲ್ ಸೆಂಟರ್ ಜಟ್ಟಿಪಳ್ಳ ಸುಳ್ಯದಲ್ಲಿ ನಡೆಯಲಿದೆ.
ಸಬಾ ಕಾರ್ಯಕ್ರಮದಲ್ಲಿ ಉಮ್ಮರ್ ಸಖಾಫಿ (ಖತೀಬರು ಅನ್ಸಾರಿಯಾ ಯತೀಮ್ ಖಾನ)ರವರು ದುವಾ ಆಶೀರ್ವಚನ ನಡೆಸಲಿದ್ದಾರೆ. ಆದಂ ಹಾಜಿ (MJM ಅಧ್ಯಕ್ಷರು ಗಾಂಧಿ ನಗರ ಸುಳ್ಯ)ರವರ ಅದ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರವನ್ನು, ರಿಜ್ವಾನ್ ಜಿ ಎಂ .MBBS (ವೈದ್ಯಾಧಿಕಾರಿ.ಪ್ರಾಥಮಿಕಅರೋಗ್ಯ ಕೇಂದ್ರ ಅರಂತೋಡು)ರವರು ಉದ್ಘಾಟನೆಗೈಯಲಿದ್ದಾರೆ.
ಅಥಿತಿಗಳಾಗಿ ಮಜೀದ್. ಜೆ ಎಸ್ (ಅಧ್ಯಕ್ಷರು ಅನ್ಸಾರಿಯಾ ಎಜುಕೇಷನಲ್ ಟ್ರಸ್ಟ್), ಸುಧಾಕರ್ ರೈ ಪೆರಾಜೆ (ಮಹಾ ರಕ್ತದಾನಿ, ಅಧ್ಯಕ್ಷರು ವರ್ತಕರ ಸಂಘ ಸುಳ್ಯ), ಉಮ್ಮರ್ ಕೆ ಎಸ್ (ಸದಸ್ಯರು ನಗರ ಪಂಚಾಯತ್), ಶರೀಫ್ ಕಂಠಿ (ಸದಸ್ಯರು ನಗರ ಪಂಚಾಯತ್), ರಿಯಾಜ್ ಕಟ್ಟೆಕ್ಕಾರ್ (ಸದಸ್ಯರು ನಗರ ಪಂಚಾಯತ್), ಎಂ.ಬಿ ಸದಾಶಿವ (MB ಚಾರಿಟಿ ಟ್ರಸ್ಟ್), ಅಬ್ದುಲ್ ಕಲಾಂ (ರೋಟರಿ ಕ್ಲಬ್ ಸುಳ್ಯ), ಮುಸ್ತಫಾ ಜನತಾ (ಜಿಲ್ಲಾ ವಕ್ಫ್ ಬೋರ್ಡ್ ಸದಸ್ಯರು), ರಶೀದ್ ಜಟ್ಟಿಪಳ್ಳ (ಅಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣ ಸುಳ್ಯ ನಗರ), ರಹೀಮ್ ಫ್ಯಾನ್ಸಿ (ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಸುಳ್ಯ ಘಟಕ ನಿರ್ವಾಹಕರು), ಉದಯಭಾಸ್ಕರ್ ಸುಳ್ಯ (ಅಮೃತಗಂಗಾ ರಕ್ತನಿಧಿ ಸುಳ್ಯ), ಸಿದ್ದೀಕ್ ಗೂನಡ್ಕ (SSF ಬ್ಲಡ್ ಸೈಬೋ), ರವೂಫ್ ಪಾಲ್ತಾಡ್ (ನಿರ್ವಾಹಕರು ಬ್ಲಡ್ ಡೋನರ್ ಮಂಗಳೂರು), ತಾಜುದ್ದೀನ್ ಟರ್ಲಿ (SKSSF ವಿಖಾಯ ರಕ್ತದಾನಿ ಬಳಗ), ರಿಜ್ವಾನ್ ನಾವೂರ್ (ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಪಾರಂ)ರವರು ಬಾಗವಹಿಸಲಿದ್ದಾರೆ.
ಕೊರೊನ ಮುಂಜಾಗ್ರತಾ ಕ್ರಮವಾಗಿ ನಡೆಯುವ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿಕೊಂಡು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾವಹಿಸಬೇಕಾಗಿ ಸಂಘಟಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : +91 99004 05928 +91 97388 03477 +91 90198 47338
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.