ಹಿಂದಿನ ಭಾಗ:
ಇದ್ರೀಸ್ ನಬಿಯ ಚರಿತ್ರೆಯ ಕುಡಿ ನೋಟ : ಭಾಗ 1
(www.vknews.com) : ಕುರಾನ್ ನ 19 ನೇ ಸೂರತ್ ಮರಿಯಂ ಲ್ಲೀ 4 ನಬಿವರ್ಯರ ಹೆಸರಿದೆ.ಅದರಲ್ಲಿ ಇದ್ರೀಸ್ ನಬಿ ಅಲೈಃ ಸಲತು ವಸ್ಸಲಂರೂ ಒಬ್ಬರು. ಆದಂ ನಬಿ ಸ.ಅ ರವರ ಕಾಲಕ್ಕೂ ಇದ್ರೀಸ್ ನಬಿ ಸ.ಅ ರವರ ಕಾಲಗಳ ಮದ್ಯೆ 1000 ವರುಷಗಳ ಅಂತರವಿತ್ತು.
ಇದ್ರೀಸ್ ನಬಿಯು ನೀಳ ನಿಲುವಿನ ,ದೃಢ ಕಾಯದ, ಶ್ವೇತ ವರ್ಣದ , ಅಗಲ ಎದೆಯ ,ಅಂದವಾದ ತಲೆ ಕೂದಲುಗಳಿರುವ ಸುಂದರ ಸ್ಪುರದ್ರೂಪಿ ತರುಣರಾಗಿದ್ದರು. ಅವರಲ್ಲಿ ಮಾತು ವಿರಳ,ಚಿಂತನೆ ಬಹಳವಾಗಿತ್ತು . ಈ ಮಹನೀಯರು ಮಿಸುರಿಲ್ ಅನ್ನುವ ನಗರದಲ್ಲಿ ಜನಿಸಿದ್ದರು.ಹೇರಳವಾದ ಇಬಾದತ್ ಗಾರರಾಗಿದ್ದರು. ಅವರು ಸದಾ ದ್ಸಿಕ್ರ್, ತಸ್ಬೀಹ್ ಗಳಲ್ಲೇ ತಲ್ಲೀನರಾಗಿದ್ದರು. ಹೇರಳವಾದ ಅಲ್ಲಾಹ್ ನ ಆರಾಧಕರಾಗಿದ್ದರು. ಪ್ರಥಮವಾಗಿ ನೂಲು ,ಸೂಜಿ ಉಪಯೋಗಿಸಿ ವಸ್ತ್ರ ಹೊಲಿದ ಖ್ಯಾತಿ ಇದ್ರೀಸ್ ನಬಿಗಿದೆ.ಅಲ್ಲಿಯವರೆಗೂ ಹೊಲಿದ ವಸ್ತ್ರಗಳು ಯಾರೂ ತೊಟ್ಟಿರಲಿಲ್ಲ. ಪ್ರಾಣಿ ಚರ್ಮ ಗಳು, ಎಲೆಗಳ ಬಳಕೆ ಮಾತ್ರವಾಗಿತ್ತು. ಇದ್ರೀಸ್ ನಬಿ ಈ ಸೂಜಿ ಹಾಗೂ ನೂಲು ಬಳಸಿ ವಿಭಿನ್ನವಾಗಿ ವಸ್ತ್ರಗಳನ್ನುಹೊಲಿಯುವುದರಲ್ಲಿ ನಿಪುಣರಾಗಿದ್ದರು.ಹಾಗೂ ಅದನ್ನೇ ತಮ್ಮ ಕಸುಬಾಗಿಸಿಕೊಂಡಿದ್ದರು. ಈ ಕಸುಬಿನೊಂದಿಗೆ ತನ್ನ ಹೃದಯ, ನಾಲಗೆಯನ್ನು ತಸ್ಬೀಹ್ ಲ್ಲೆ ನಿರತಗೊಳಿಸಿದ್ದರು. ಹೊಲಿದ ಬಟ್ಟೆಗಳನ್ನು ಮಾರಿ ಸಂಪಾದನೆ ಮಾಡುತಿದ್ದರು,ಹಾಗೆ ಸೌಜನ್ಯ ಪೂರ್ವಕವಾಗಿಯೂ ನೀಡುತ್ತಲಿದ್ದರು.
ಮೊಟ್ಟ ಮೊದಲ ಬಾರಿಗೆ “ಲೇಖನಿಯಿಂದ ಲೇಖನ” ಬರೆದ ಖ್ಯಾತಿಯೂ ಇದ್ರೀಸ್ ನಬಿಗೆ ಸಲ್ಲುತ್ತದೆ. ಅಂದಿನ ವರೆಗೂ ಜನ ಸಮೂಹವು ವಿಷಯ,ಘಟನೆ ,ಸಂದೇಶಗ ಳನ್ನು ಕೇವಲ ನೆನಪುಗಳಲ್ಲಿ ಇರಿಸಿ ಕೊಂಡು,ಮಾತುಗಳಲ್ಲಿ ಮಾತ್ರವಿಸ್ತರಿಸುತ್ತಲಿದ್ದರು.ನೆನಪುಗಳಲ್ಲಿ ಎಷ್ಟೇ ಸಂಗ್ರಹಿಸಿ ಕೊಂಡರೂ ಒಬ್ಬನ ನೆನಪಿನ ಶಕ್ತಿಯ ಆಯುಷ್ಯ ಇಂತಿಷ್ಟೇ ಅಲ್ಲವೇ.ಹಾಗಿದ್ದರೆ ವಿಷಯ, ವಿಸ್ತಾರ, ಸಂಶ್ಲೇಷಣೆಗಳನ್ನು ಸಂಗ್ರಹಿಸಿ ಇಡುವ ನಿಟ್ಟಿನಲ್ಲಿ ಲೇಖನಿ ಬೇಕಿದೆ ಎಂಬುದನ್ನು ಮೊದಲ ಸಾರಿ ಇದ್ರೀಸ್ ನಬಿಯವರೇ ಚಿಂತನೆ ಮಾಡಿ ಆ ನಿಟ್ಟಿಗೆ ಶ್ರಮಿಸಿದರು.ಬಣ್ಣದ ಕಲ್ಲುಗಳಿಂದ , ಹಲವಾರು ಬಗೆಯ ಪುಷ್ಪಗಳಿಂದ ಬಣ್ಣದ ದ್ರವ ತೆಗೆದು ಮೊದಲ ಬಾರಿಗೆ ಲೇಖನಿಯಿಂದ ಲೇಖನ ಬರೆದು ಜನರಿಗೆ ಕಲಿಸಿಕೊಟ್ಟರು ಹಾಗೂ ಲೇಖನಗಳನ್ನು ಜನರಿಗೆ ತಲುಪಿಸಲಾಗಿತ್ತು.
ಲೇಖನಿ ಉಪಯೋಗಿಸಿ, ಬರಹಗಳನ್ನು ಬರೆದ ಮೊದಲ ವ್ಯಕ್ತಿಎಂಬ ಖ್ಯಾತಿಯು ಇದ್ರೀಸ್ ನಬಿಯವರಿಗಿದೆ ಅನ್ನುವುದನ್ನು ಸತ್ಯ ಚರಿತ್ರೆಗಳಲ್ಲಿ ಸವಿಸ್ತಾರವಾಗಿ ಕಾಣಬಹುದು.
” ತೂಕ ಹಾಗೂ ಅಳತೆಗಳು” ಅಲ್ಲಿಯವರೆಗೂ ಆ ಕಾಲದವರೆಗೂ ಇದ್ದಿರಲಿಲ್ಲ. ತೂಕ ,ಅಳತೆಗಳಿಲ್ಲದೆ ಜನ ಜೀವನ ನಡೆಸುತ್ತಿದ್ದರು.ಅದರ ಪ್ರಾಮುಖ್ಯತೆಯ ಅರಿಯ ಮೂಡಿಸಿದ ಹಾಗೂ ಅಳತೆ , ತೂಕಗಳನ್ನು ಕಲಿಸಿಕೊಟ್ಟ ಪ್ರಥಮ ವ್ಯಕ್ತಿಯು ಇದ್ರೀಸ್ ನಬಿ ಆಗಿರುವರು ಎಂಬುವುದನ್ನು ಉಲಮಾಗಳು ಸವಿಸ್ತಾರವಾಗಿ ಚರಿತ್ರೆಯ ಗ್ರಂಥಗಳಲ್ಲಿ ವಿವರಿಸಿದ್ದಾರೆ.
ಮಹನೀಯರಿಗೆ ತಮ್ಮಯ 40ನೆಯ ವಯಸ್ಸಿಗೆಅಲ್ಲಾಹ್ ನ ಮಹತ್ವಪೂರ್ಣ ನುಬೂವವತ್ ಲಭಿಸಿರುತ್ತದೆ .
ಸ್ವಿದ್ಕ್ (ಸತ್ಯ)ನ್ನು ರೂಡಿಸಿಕೊಂಡಿದ್ದರು.ಮುಆಮೀನ್ ಸುಳ್ಳು ಹೇಳಲಾರ ,ಸತ್ಯ ಮಾತ್ರವೇ ಈಮಾನ್ ನ ರೂಪ ಅನ್ನುವುದನ್ನು ಸಾರಿದರು.ಸತ್ಯ ಮಾರ್ಗಕ್ಕೆ ಜನಗಳನ್ನು ಕ್ಷಣಿಸಿದರು.ಜನರಿಗೆ ದೀನ್ ಕಲಿಸುವ ನಿಟ್ಟಿನಲ್ಲಿ ದರ್ಸ್ ನಡೆಸುತ್ತಿದ್ದರು. ಸಿದ್ದೀಕ್ ಅನ್ನುವ ಹೆಸರು ಇದ್ರೀಸ್ ಎಂಬ ಹೆಸರಾಗಿ ಮಾರ್ಪಟ್ಟು ಕರೆಯಲ್ಪಟ್ಟಿದ್ದೂ ದರ್ಸ್ ನಡೆಸುತಿದ್ದಿದ್ದರಿಂದಲೇ ಆಗಿರುವುದು. ದೀನ್ ಬೋಧಿಸಿ ಬಹುತೇಕ ಶಿಷ್ಯರನ್ನು ಹೊಂದಿದ್ದರು. ಪ್ರಪಂಚದ ಎಲ್ಲಾ ಕಡೆಗಳಿಗೂ ಈ ಮಹನೀಯರು ದೀನ್ ಪ್ರಸರಿಸುವ ಸಲುವಾಗಿ ಸಂಚರಿಸುತ್ತಿದ್ದರು. 140 ನಗರಗಳನ್ನು ನಿರ್ಮಿಸಿದ್ದರು. ಅಲ್ಲಿರುವಷ್ಟು ಜನಗಳು ಇದ್ರೀಸ್ ನಬೀಯರ ಶಿಷ್ಯರಾಗಿದ್ದರು.ಆಕಾಶ ಲೋಕಕ್ಕೆ ಏರುತ್ತಲಿದ್ದ ಇಬಾದತ್ ಗಳ ಬೃಹತ್ ಸಮೂಹಗಳ ಕಂಡು ಮಲಕುಗಳ ತಂಡವೇ ಅಚ್ಚರಿ ಪಟ್ಟಿತ್ತು.ಅವರಿಂದ ದೀನ್ ಸ್ವೀಕರಿಸಿ ಅಲ್ಲಾಹ್ ನ ಇಬಾದತ್ ನಡೆಸುವ ಅವರ ಶಿಶ್ಯಂದಿರ ಇಬಾದತ್ ಕೂಡ ಇದ್ರೀಸ್ ನಬಿಯರ ಆರಾಧನೆ ಯ ಜೊತೆ ಸೇರಿ ಅತೀ ದೊಡ್ಡ ಇಬಾದತ್ ಗಳ ಸಂಗಮದಂತೆ ಆಕಾಶದೆತ್ತರಕ್ಕೆ ಏರಲ್ಪಡುತ್ತಿತ್ತು.
ಮುಂದುವರೆಯುವುದು….
– ಸಾರ ಅಲಿ, ಪರ್ಲಡ್ಕ, ಪುತ್ತೂರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.