ಕೊಡಗು(ವಿಶ್ವಕನ್ನಡಿಗ ನ್ಯೂಸ್): ರಕ್ತದಾನವು ಅತಿ ಶ್ರೇಷ್ಠ ದಾನ ವಾಗಿದ್ದು ರಕ್ತಕ್ಕೆ ಪರ್ಯಾಯವಾಗಿ ಬೇರೊಂದನ್ನು ಯಾವುದೇ ಶಾಸ್ತ್ರಜ್ಞರು ಕಂಡುಹಿಡಿದಿಲ್ಲ. ಈ ನಿಟ್ಟಿನಲ್ಲಿ ರಕ್ತದ ಅವಶ್ಯಕತೆ ಬಂದಾಗ ಮನುಷ್ಯರಿಂದ ಮನುಷ್ಯರೇ ನೀಡಬೇಕು ಹೊರತು ಬೇರೊಂದು ಮಾರ್ಗವಿಲ್ಲ ಎಂದು ವೈದ್ಯಕೀಯ ಕಾಲೇಜು ಮಡಿಕೇರಿ ಇದರ ವೈದ್ಯಾಧಿಕಾರಿಗಳಾದ ಡಾಕ್ಟರ್ ಕರುಂಬಯ್ಯನವರು ಹೇಳಿದರು.
ವಿಶ್ವ ಆರೋಗ್ಯ ದಿನದ ಅಂಗವಾಗಿ ಇಂದು ಎಸ್ಎಸ್ಎಫ್ ಕೊಡಗು ಜಿಲ್ಲಾ ಬ್ಲಡ್ ಸೈಬೋ ಹಾಗೂ ವೈದ್ಯಕೀಯ ಕಾಲೇಜು ಮಡಿಕೇರಿ ಇವರ ಸಹಯೋಗದೊಂದಿಗೆ ಎಸ್ಎಸ್ಎಫ್ ಚೆಟ್ಟಿಮಾನಿ ಶಾಖೆ ವತಿಯಿಂದ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಎಸ್ಎಸ್ಎಫ್ ರಕ್ತದಾನ ಶಿಬಿರಗಳನ್ನು ಹಮ್ಮಿಕೊಂಡು ಜನರಿಗೆ ನೆರವಾಗುವ ವಿಚಾರದಲ್ಲಿ ನಡೆಸುತ್ತಿರುವ ಕಾರ್ಯ ವೈಖರಿಗಳನ್ನು ಅವರು ಶ್ಲಾಘಿಸಿದರು.
ಪೊಲೀಸ್ ಸಿಬ್ಬಂದಿಗಳು ಸಹಿತ ಹಲವಾರು ರಕ್ತದಾನಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿ ಎಸ್ಎಸ್ಎಫ್ ಕೊಡಗು ಜಿಲ್ಲಾಧ್ಯಕ್ಷರಾದ ಶಾಫಿ ಸಅದಿ ಸೋಮವಾರಪೇಟೆರವರು ಮಾತನಾಡಿ ಎಸ್ಎಸ್ಎಫ್ ಒಂದು ಧಾರ್ಮಿಕ ಸಂಘಟನೆ ಯಾಗಿದ್ದರೂ ಕೂಡ ಸಮಾಜಮುಖಿ ಕಾರ್ಯಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸುತ್ತಿದ್ದು ಸಮಾಜಸೇವೆಗೆ ಎಂದೂ ಮುಂಚೂಣಿಯಲ್ಲಿದ್ದು ಈ ಸೇವೆಗಳೆಲ್ಲವೂ ಕುರಾನ್ ಮತ್ತು ಪ್ರವಾದಿಯವರ ಜೀವನದಿಂದ ಪ್ರೇರಣೆಗೊಂಡು ನಡೆಸುವಂತದ್ದಾಗಿದ್ದು ಎಸ್ಸೆಸ್ಸೆಫ್ ನ ಕಾರ್ಯಕರ್ತರಿಗೆ ಒಬ್ಬ ಭಾರತೀಯನಾಗಿ ಇಸ್ಲಾಮಿನ ತತ್ವಗಳನ್ನು ಪಾಲಿಸಿ ಸಮಾಜದಲ್ಲಿ ಬದುಕುವ ತರಬೇತಿಯನ್ನು ನೀಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಚೆಟ್ಟಿಮಾನಿ ಜಮಾಅತ್ ಅಧ್ಯಕ್ಷರಾದ ತಮೀಮ್ ತಂಙಳ್, ಎಸ್ವೈಎಸ್ ಮುಖಂಡರಾದ ಪಿ ಯು ಇಬ್ರಾಹಿಂ, ಶಾಖಾ ಅಧ್ಯಕ್ಷರಾದ ಹಂಸ ಶರ್ಫುದ್ದೀನ್ ಇನ್ನಿತರ ನಾಯಕರು ಹಾಜರಿದ್ದರು. ಶುಹೈಬ್ ಸ್ವಾಗತ ಭಾಷಣ ಮಾಡಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.