ಕೊಚ್ಚಿ (ವಿಶ್ವ ಕನ್ನಡಿಗ ನ್ಯೂಸ್): ಭಾರತದ ಶ್ರೀಮಂತರ ಪಟ್ಟಿಯಲ್ಲಿರುವ,ಗಲ್ಫ್ ರಾಷ್ಟ್ರಗಳಲ್ಲಿ ಲುಲುಗ್ರೂಪ್ ಸೇರಿದಂತೆ ವಿವಿಧ ಉದ್ಯಮದಲ್ಲಿ ಪ್ರಸಿದ್ದಿ ಗಳಿಸಿರುವ ಎಂ.ಎ ಯೂಸುಫ್ ಅಲಿಯವರು ಸೇರಿ ಕುಟುಂಬದ ಆರು ಮಂದಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಕೇರಳದ ಕೊಚ್ಚಿ ಸಮೀಪದ ಪಣಂಗಾಡ್ ನಲ್ಲಿ ತುರ್ತು ಲ್ಯಾನ್ಡಿಂಗ್ ನಡೆಸಿತು. ಯೂಸುಫ್ ಅಲಿ,ಅವರ ಪತ್ನಿ ಶಾಬಿರಾ,ಪಿ.ಎ ಶಾಹಿದ್ ಪಿಕೆ ಹಾಗು ಪೈಲಟ್-ಕೋ ಪೈಲಟ್ ಗಳು ಸುರಕ್ಷಿತರಾಗಿದ್ದಾರೆ ಹಾಗು ಆರೋಗ್ಯ ತಪಾಸಣೆಗಾಗಿ ಪ್ರತಿಷ್ಠಿತ ಲ್ಯಾಕ್ ಶೈರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಧ್ಯಮ ಮೂಲಗಳು ತಿಳಿಸಿದೆ.
ಮಳೆ ಸುರಿಯುತ್ತಿದ್ದ ಕಾರಣ ಹೆಲಿಕಾಪ್ಟರ್ ಲ್ಯಾನ್ಡಿಂಗ್ ಬಳಿಕ ನೀರು ತುಂಬಿಕೊಂಡಿತ್ತು.ಸ್ಥಳೀಯ ಕುಟುಂಬದ ಮೂಲಕ ವಿವರ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿದ್ದು ಈ ಘಟನೆಯ ಕುರಿತು ತನಿಖೆ ನಡೆಸುವುದಾಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ.ಶುಕ್ರವಾರಷ್ಟೇ ಯುಎಇ ಯುವರಾಜ ಶೈಖ್ ಮಹಮ್ಮದ್ ಬಿನ್ ಜಾಯೆದ್ ಅಲ್ ಖಲೀಫಾ ಯೂಸುಫ್ ಅಲಿ ಯವರಿಗೆ ದೇಶದ ಪ್ರತಿಷ್ಠಿತ ಗೌರವ ಪ್ರಶಸ್ತಿ ನೀಡಿದ್ದರು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.