ಅಜ್ಜಿನಡ್ಕ(ವಿಶ್ವಕನ್ನಡಿಗ ನ್ಯೂಸ್): ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಎಸ್ಡಿಪಿಐ ಇದರ ವತಿಯಿಂದ ರಮದಾನ್ ತಿಂಗಳಲ್ಲಿ ಆಹಾರ ಕಿಟ್ ಗಳನ್ನು ಅರ್ಹ ಫಲಾನುಭವಿಗಳಿಗೆ ನಿರಂತರವಾಗಿ ತಲುಪಿಸುತ್ತಿದೆ.
ಮುಂದುವರಿದ ಭಾಗವಾಗಿ ದಿನಾಂಕ ಎಪ್ರಿಲ್ 11 ರವಿವಾರ ದಂದು ಮುಳ್ಳುಗುಡ್ಡೆ (ಹಿದಾಯತ್ ನಗರ) ಅಜ್ಜಿನಡ್ಕ ,ಕೆಳಗಿನ ಕೋಟೆಕಾರ್ ಮತ್ತು ಹತ್ತಿರದ ಇನ್ನಿತರ ಪ್ರದೇಶಗಳಿಗೆ ದಾನಿಗಳ ನೆರವಿನೊಂದಿಗೆ 3,70,820 ರೂಪಾಯಿಯ 230 ಆಹಾರ ಕಿಟ್ ಗಳನ್ನು ವಿತರಿಸಲಾಯಿತು
ಕಾರ್ಯಕ್ರಮದಲ್ಲಿ ಕೋಟೆಕಾರ್ ಪಟ್ಟಣ ಪಂಚಾಯತ್ ಕೌನ್ಸಿಲರ್ ಜುಲೇಖಾ ಬಶೀರ್, ತಲಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಮೊಯಿದಿನ್ ಜಾಹಿರ್, ಎಸ್ಡಿಪಿಐ. ಅಜ್ಜಿನಡ್ಕ ಇದರ ಅಧ್ಯಕ್ಷರಾದ ಇರ್ಶಾದ್ ಅಜ್ಜಿನಡ್ಕ ಹಾಗೂ ಸರ್ವ ಸದಸ್ಯರು ಭಾಗವಹಿಸಿದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.