(www.vknews.com) : ಅಂದಿನ ಅಲ್ಲಿನ ಬನೂ ಖಾಬಿಲ್ ಅನ್ನುವ ಒಂದು ಶತ್ರು ಕೂಟವೊಂದಿತ್ತು. ನಬಿಯವರ ಸತ್ಯ ಮಾರ್ಗಕ್ಕೆ ಸಾಕಷ್ಟು ತೊಂದರೆ ನೀಡುತ್ತಿದ್ದರು. ಅವರಿಂದ ನಬಿಯು ಸಂಕಷ್ಟಕ್ಕೆ ಒಳಗೊಂಡಿದ್ದರು. ಇದ್ರೀಸ್ ನಬಿಯು ಈ ಶತ್ರು ಕೂಟದ ಜೊತೆ ಹೋರಾಡಬೇಕಾಗಿಯು ಬಂದಿತ್ತು.
ಬನು ಖಾಬಿಲ್ ನ ಮೊಮ್ಮಗ ಮಹವೇಲ್ ಮಿಸುರಿಲ್ ನ ರಾಜನಾಗಿದ್ದನು. ಇದ್ರೀಸ್ ನಬಿ ಆ. ಸ ಜನರಿಗೆ ತೋರುತ್ತಿದ್ದ ಸತ್ಯದಾರಿಯನ್ನು ಈ ರಾಜನು ತಳ್ಳಿ ಹಾಕುತ್ತಿದ್ದನು ಮತ್ತು ವಿರೋದಿಸುತಿದ್ದನು. ಹಾಗೂ ನಬಿಯನ್ನ ಹದ್ದುಬಸ್ಥಿನಲ್ಲಿಡಲು ಹುನ್ನಾರ ನಡೆಸುತ್ತಿದ್ದನು.ಆದರೆ ಇದ್ರೀಸ್ ನಬಿ ತೋರಿದ ಅಲ್ಲಾಹ್ ನ ಸತ್ಯ ಮಾರ್ಗವನ್ನು ಒಪ್ಪಿಕೊಂಡ ಸನ್ಮಾರ್ಗದತ್ತ ವಾಲಿದ ಜನ ಸಮೂಹವನ್ನು ಕಂಡು ರಾಜನು ಅಚ್ಚರಿಗೊಂಡನು.ತುಂಬಾ ಸ್ವೇಚ್ಚೆಯಿಂದ ಅನಾಚಾರ ಯುಕ್ತವಾಗಿದ್ದ ಮಿಸುರಿಲ್ ನಗರವನ್ನು ನಬಿಯರು ಬದಲಾಯಿಸಿದರು. ನಬಿ ಅಲ್ಪ ಕಾಲ ಮಶ್ರಿಕ್ ನಗರಕ್ಕೆ ತೆರಳಿ ದೀನ್ ಪ್ರಸರಿಸುವ ಸಲುವಾಗಿ ವಾಸಿಸಿದ್ದರು.ತದ ನಂತರ ಅಲ್ಲಿನ ರಾಜರುಗಳು ಇದ್ರೀಸ್ ನ ಅ. ಸ ತೋರಿದ ದಾರಿಯನ್ನು ಒಪ್ಪಿಕೊಂಡು,ಸತ್ಯವಿಶ್ವಾಸದೊಂದಿಗೆ ಮಶ್ರಿಕ್ ನಿಂದ , ಮಿಸಿರಿಲ್ ಗೆ ಹುಡುಕಿಕೊಂಡು ಬಂದರು.ಇದೆಲ್ಲವೂ ಮಹವೇಲ್ ರಾಜನ ಮನ ಪರಿವರ್ತಿಸಿತ್ತು.ರಾಜನಲ್ಲಿ ಬದಲಾವಣೆಗಳು ಮೂಡಿದವು. ಇದ್ರೀಸ್ ನಬಿಯ ಚರ್ಯೆ,ವ್ಯಕ್ತಿತ್ವ, ಪಾಂಡಿತ್ಯ, ಸತ್ಯಸಂದ ಮಾರ್ಗ,ಜನ ಸಮೂಹದ ಬೆಂಬಲ ಇವೆಲ್ಲದರ ಮುಂದೆ ರಾಜನು ಸೋತು ಹೋದನು.ಕೊನೆಗೆ ರಾಜನು ಸತ್ಯದತ್ತ ವಾಲಿದನು. ಅರಿವಿನ ಪ್ರಾಪ್ತಿಗಾಗಿ ಇದ್ರೀಸ್ ನಬಿಯನ್ನು ಅವಲಂಬಿಸಿ, ಆನಂತರದ ದಿನಗಳಲ್ಲಿ ರಾಜನು ಸತ್ಯಮಾರ್ಗ ವನ್ನು ಅನುಸರಿಸಿದನು. ಉತ್ತಮನಾದ ರಾಜನು ಹೇಗಿರಬೇಕೆಂದು ನಬಿಯರ ಮೂಲಕ ಕಲಿತುಕೊಂಡನು.
ಅಲ್ಲಾಹ್ ಇದ್ರೀಸ್ ನಬಿಯರಿಗೆ ನೀಡಿದ ಮತ್ತೊಂದು ಸಿದ್ಧಿ ನಕ್ಷತ್ರ ವಿವರವಾಗಿದೆ.
ಮಹನೀಯರು ನಕ್ಷತ್ರ ಶಾಸ್ತ್ರ (ಇಲ್ಮ್ ನ್ನುಜೂಮ್) ಚೆನ್ನಾಗಿ ಅರಿತಿದ್ದರು. ರೇಖೆ ಅನುಸಾರವಾಗಿ ಕೆಲವು ಚಲನ ವಲನಗಳ ಬಗ್ಗೆ ಹೇಳಿದ್ದುಂಟು.ಇದು ಅಲ್ಲಾಹ್ ನೀಡಿದ ಮುಹ್ಜಿಝತ್ ಆಗಿದೆ ಅನ್ನುವುದನ್ನು ವೇದಗ್ರಂಥ ಗಳಲ್ಲಿ ವಿಶ್ಲೇಷಿಸಲಾಗಿದೆ.
ಇದ್ರೀಸ್ ನಬಿ,ಸದಾ ಇಬಾದತ್ ನಡೆಸುವ ಮಹಾನ್ ವ್ಯಕ್ತಿಯಾಗಿದ್ದರು.ಹಗಲಲ್ಲಿ ಉಪವಾಸ ವ್ರತ ಆಚರಿಸುತ್ತಲಿದ್ದೂ ಸಂಜೆಯ ನಂತರವೂ ಇಬಾದತ್ ಲ್ಲೇ ರಾತ್ರಿಯನ್ನೆಲ್ಲ ಕಳೆಯುತ್ತಿದ್ದರು.
ಕಸುಬಿನ ಜೊತೆಗೆ “ಸುಬುಹಾನಲ್ಲಃ” ತಸ್ಬೀಹ್ ನ್ನೂ ಪರಿಪಾಠ ಗೊಳಿಸಿದ್ದರು. ಸೂಜಿ ,ದಾರ ಪೂಣಿಸುತ್ತಿರಬೇಕಿದ್ದರೆ ಪ್ರತೀ ಸಾರಿ ತಸ್ಬಿಹ್ ಉಚ್ಚರಿಸುತ್ತಲಿದ್ದರು.
ಹಿಂದಿನ ಭಾಗಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ…
ಮುಂದುವರೆಯುವುದು….
– ಸಾರ ಅಲಿ, ಪರ್ಲಡ್ಕ, ಪುತ್ತೂರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.