ಮುಲ್ಕಿ(ವಿಶ್ವಕನ್ನಡಿಗ ನ್ಯೂಸ್): ಸುಮಾರು 51 ವರ್ಷಗಳ ಕಾಲ ಕಾಪು ಪೊಲಿಪು ಜುಮ್ಮಾ ಮಸೀದಿಯಲ್ಲಿ ಖತೀಬರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ಕಾಪು ಜಮಾಅತ್ತಿನ ಖಾಝಿಯಾಗಿ ಅಧಿಕಾರ ಸ್ವೀಕರಿಸಿದ ಶೈಖುನಾ ಪಿ ಬಿ ಅಹ್ಮದ್ ಮುಸ್ಲಿಯಾರ್ ಉಸ್ತಾದರಿಗೆ ಹಝ್ರತ್ ಸಾದಾತ್ ವೃಧ್ಧಾಶ್ರಮ ದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಬಹು ಮುಹಮ್ಮದ್ ಮದಾರಿ ಉಸ್ತಾದ್ ಕಾಪು ಖತೀಬ್ ಬಹು ಇರ್ಷಾದ್ ಸಅದಿ,ಫಕ್ರೇ ಆಲಮ್ ಮುಂಬಯಿ, ಜಾಫರ್ ಕಟಪಾಡಿ ನಸೀರ್ ಸಾಹೇಬ್ ಕೊಂಬಗುಡ್ಡೆ ಹಾಗು ಇನ್ನಿತರರು ಉಪಸ್ಥಿತರಿದ್ದರು. ಇರ್ಷಾದ್ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.