ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಸಮಿತಿ ಅಧೀನದಲ್ಲಿ ತರ್ತೀಲ್, ಖುರ್ಆನ್ ಖಿರಾಅತ್ ಹಾಗೂ ಹಿಫ್ಳ್ ಸ್ಪರ್ಧಾ ಕಾರ್ಯಕ್ರಮ ನಡೆಯಿತು. ಯುನಿಟ್ ಗಳಿಂದ ಆಯ್ಕೆಯಾಗಿ ಸೆಕ್ಟರ್ ಮಟ್ಟದ ಸ್ಪರ್ಧೆಯ ನಂತರ ಡಿವಿಷನ್ ಅಧೀನದ ಐದು ಸೆಕ್ಟರ್ ಗಳಿಂದ ಸಬ್ ಜೂನಿಯರ್, ಜೂನಿಯರ್, ಸೀನಿಯರ್ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಡಿವಿಷನ್ ವಿಸ್ಡಂ ಕಾರ್ಯದರ್ಶಿ ಖಲೀಲ್ ಝುಹ್ರಿ ನೆಕ್ಕಿಲ ರವರ ದುಆದೊಂದಿಗೆ ಸ್ಪರ್ಧಾ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
ಸಮಾರೋಪ ಸಭಾ ಕಾರ್ಯಕರ್ಮ ಡಿವಿಷನ್ ಅಧ್ಯಕ್ಷ ಫೈಝಲ್ ಝುಹ್ರಿ ಕಲ್ಲುಗುಂಡಿ ಅಧ್ಯಕ್ಷತೆಯಲ್ಲಿ ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾಧ್ಯಕ್ಷ ಜಿ.ಕೆ ಇಬ್ರಾಹೀಂ ಅಂಜದಿ ಉದ್ಘಾಟಿಸಿದರು. ಡಿವಿಷನ್ ಫಿನಾನ್ಸ್ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಸಖಾಫಿ ತಂಬಿನಮಕ್ಕಿ ದುಆ ನೆರವೇರಿಸಿದರು. ಸಂಪನ್ಮೂಲ ವ್ತಕ್ತಿಗಳಾಗಿ ಕರ್ನಾಟಕ ರಾಜ್ಯ ಎಸ್.ವೈ.ಎಸ್ ಸಾಂತ್ವನ ವಿಭಾಗ ಅಧ್ಯಕ್ಷರಾದ ಜಿ.ಎಂ ಮುಹಮ್ಮದ್ ಕಾಮಿಲ್ ಸಖಾಫಿ, ಎಸ್ಸೆಸ್ಸೆಫ್ ರಾಷ್ಟ್ರೀಯ ಉಪಾಧ್ಯಕ್ಷರಾದ ಉಬೈದುಲ್ಲಾಹ್ ಸಖಾಫಿ ಕಲ್ಲಿಕೋಟೆ, ಕೇರಳ ಎಸ್ಸೆಸ್ಸೆಫ್ ನಿಕಟಪೂರ್ವ ರಾಜ್ಯಾಧ್ಯಕ್ಷ ರಾಶಿದ್ ಬುಖಾರಿ ವಿವಿಧ ವಿಷಯಗಳಲ್ಲಿ ಮಾತನಾಡಿದರು.
ಶಹೀಂ ಸೂಫಿ ಪೈಂಬಚ್ಚಾಲ್ (ಸಬ್ ಜೂನಿಯರ್ ಖಿರಾಅತ್) ಸುಹೈಲ್ ಬೆಳ್ಳಾರೆ ( ಸಬ್ ಜೂನಿಯರ್ ಹಿಫ್ಳ್) ಸಲ್ಮಾನ್ ಫಾರಿಸ್ ನಿಂತಿಕ್ಕಲ್ (ಜೂನಿಯರ್ ಖಿರಾಅತ್) ಅಫ್ಳಲ್ ಇಂದ್ರಾಜೆ (ಜೂನಿಯರ್ ಹಿಫ್ಳ್) ಅಝ್ಮಲ್ ಗಟ್ಟಿಗಾರ್ (ಸೀನಿಯರ್ ಖಿರಾಅತ್) ಅನಸ್ ಪೈಂಬಚ್ಚಾಲ್ (ಸೀನಿಯರ್ ಹಿಫ್ಳ್) ವಿಜೇತರಾದರು. ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯ ಶಫೀಖ್ ಮಾಸ್ಟರ್ ತಿಂಗಳಾಡಿ, ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ರಶೀದ್ ಮಡಂತ್ಯಾರ್, ಜಿಲ್ಲಾ ಪಬ್ಲಿಕೇಷನ್ ಕಾರ್ಯದರ್ಶಿ ಸಿದ್ದೀಖ್ ಗೂನಡ್ಕ ವಿಜೇತರನ್ನು ಘೋಷಿಸಿದರು.
ಕರ್ನಾಟಕ ಮುಸ್ಲಿಂ ಜಮಾಅತ್ ಸುಳ್ಯ ತಾಲೂಕು ಅಧ್ಯಕ್ಷ ಮುಹಮ್ಮದ್ ಕುಂಞಿ ಗೂನಡ್ಕ, ಎಸ್.ವೈ.ಎಸ್ ಸುಳ್ಯ ಸೆಂಟರ್ ಅಧ್ಯಕ್ಷ ಎ.ಬಿ ಅಶ್ರಫ್ ಸಅದಿ, ಎಸ್.ವೈ.ಎಸ್ ಬೆಳ್ಳಾರೆ ಸೆಂಟರ್ ಅಧ್ಯಕ್ಷ ಸತ್ತಾರ್ ಸಖಾಫಿ ಬೆಳ್ಳಾರೆ ಆಶಂಸಾ ಮಾತುಗಳನ್ನಾಡಿದರು. ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಸ್ವಾದಿಖ್ ಮಾಸ್ಟರ್ ಕಲ್ಲುಗುಂಡಿ ಸ್ವಾಗತಿಸಿ ಕ್ಯಾಂಪಸ್ ಕನ್ವೀನರ್ ಸ್ವಾಲಿಹ್ ಹನೀಫಿ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.