ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ನಿತ್ಯೋತ್ಸವ ಕವಿ ನಾಡೋಜ ಕೆ ಎಸ್ ನಿಸಾರ್ ಅಹಮದ್ ರವರ ಪ್ರಥಮ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಮಕ್ಕಿಮನೆ ಕಲಾವೃಂದ ಮಂಗಳೂರು ವತಿಯಿಂದ ಅನ್ ಲೈನ್ ಮೂಲಕ ಮಂಗಳವಾರ ಕವಿ ಗೋಷ್ಠಿ ಕಾರ್ಯಕ್ರಮ ಜರಗಿತು .
ಮೂಡುಬಿದಿರೆಯ ಹಿರಿಯ ಸಾಹಿತಿ, ಪ್ರೊ ಅಜಿತ್ ಪ್ರಸಾದ್ ಅಧ್ಯಕ್ಷತೆಯನ್ನು ವಹಿಸಿದ್ದರು. ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ & ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್ ಪ್ರದೀಪ ಕುಮಾರ ಕಲ್ಕೂರ ಹಾಗೂ ಕನಕಪುರದ ಹಿರಿಯ ಸಾಹಿತಿ & ಶಿಕ್ಷಕ ವಾಸುದೇವ ನಾಡಿಗ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಡಾಲಿ ವಿಜಯ ಕುಮಾರ್ ಸಾಗರ, ಸಂತೆಬೆನ್ನೂರು ಫೈಜ್ನಟ್ರಾಜ್ ಚೆನ್ನಗಿರಿ ,ಚೈತ್ರ ಶಿವಯೋಗಿಮಠ ಬೆಂಗಳೂರು, ಮುಆದ್ ಜಿ. ಎಂ ಮಂಗಳೂರು, ನಿರಂಜನ್ ಜೈನ್ ಕುದ್ಯಾಡಿ, ಸ್ವಸ್ತಿಕ್ ಕನ್ಯಾಡಿ, ಸುಪ್ರೀತಾ ಜನುವಾರುಕಟ್ಟೆ ರವರು ಕವನವಚನ ಮಾಡಿದರು. ಸುದೇಶ್ ಜೈನ್ ಮಕ್ಕಿಮನೆ ಮೊದಲಾದವರು ಉಪಸಿತರಿದ್ದರು.
ಪ್ರಾರ್ಥನೆಯನ್ನು ಪದ್ಮಪ್ರಿಯಾ ಕೇಳ ಹಾಡಿದರು, ಶಾಮ ಪ್ರಸಾದ ಹಾನುಗೂಡು ನಿರೂಪಿಸಿದರು, ಮಹಾವೀರ ಪ್ರಸಾದ್ ಹೊರನಾಡು ಶಾಂತಿ ಮಂತ್ರ ಪಠಣ ಮಾಡಿದರು, ಸ್ಪೂರ್ತಿ ಜೈನ್ ಬೆಂಗಳೂರು ಸಹಕರಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.