(www.vknews.com) : ಕೆಂದ್ರ ಮತ್ತು ರಾಜ್ಯ ಬಿ ಜೆ ಪಿ ಸರಕಾರ ಜನ ವಿರೋಧಿ ನೀತಿಯಿಂದಾಗಿ ದೇಶದಾದ್ಯಂತ ಲಕ್ಷಾಂತರ ಮಂದಿ ಸಾವಿಗೀಡಾಗುವ ಪರಿಸ್ಥಿತಿ ಬಂದಿದೆ. ಇದಕ್ಕೆ ಪ್ರದಾನ ಮಂತ್ರಿ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರೇ ನೇರಹೊಣೆ ಎಂದು ಕಾಂಗ್ರೇಸ್ ಮುಖಂಡ ಟಿ.ಎಂ.ಶಾಹೀದ್ ತೆಕ್ಕಿಲ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಪ್ರಪಂಚದಲ್ಲಿ ಕೋವಿಡ್- 19 ಸಾಂಕ್ರಾಮಿಕ ರೋಗ ಹತೋಟಿಗೆ ಬಂದಿದ್ದರು ದೇಶ ಮತ್ತು ರಾಜ್ಯದಲ್ಲಿ ಹತೋಟಿಗೆ ಬಾರದೇ ಭಾರತದ ಪ್ರತಿಷ್ಠೆಗೆ ಕಳಂಕ ತಂದಿದ್ದಾರೆ. ದೇಶದಾದ್ಯಂತ ಲಕ್ಷಾಂತರ ಜನರು ಕೋವಿಡ್ ನ್ನಿಂದ ಸಾವಿಗೀಡಾಗಿರುವುದೇ ನರೇಂದ್ರ ಮೋದಿಯವರ ಹಾಗೂ ಯಡಿಯೂರಪ್ಪನವರ ಮಹಾ ಸಾಧನೆ.
ದೇಶದ ಅಡಿಪಾಯ ಗಟ್ಟಿ ಮಾಡದೆ ವಿದೇಶದಲ್ಲಿ ತಮ್ಮ ಗೌರವ ಹೆಚ್ಚಿಸುನ ಪ್ರಯತ್ನ ಮಾಡಿದಲ್ಲದೆ ಪ್ರಶಂಸೆಗೆ ಬೇಕಾಗಿ ಕೋಟ್ಯಾಂತರ ರೂಪಾಯಿಯ ಚುಚ್ಚು ಮದ್ದನ್ನು ರಫ್ತು ಮಾಡಿದರ ಪರಿಣಾಮ ದೇಶದ ಲಕ್ಷಾಂತರ ಜನ ಸಾಯುವ ಪರಿಸ್ಥಿತಿಯಾಯಿತು. 7 ವರ್ಷದಲ್ಲಿ ಮಹಾ ಸಾಧನೆಯನ್ನು ಮಾಡಿದೆ ಎಂದು ಬೀಗುತ್ತಿರುವ ಕೇಂದ್ರ ಸರಕಾರಕ್ಕೆ ಜುಜುಬಿಯಾಗಿ ನಿರ್ಮಿಸುವ ಆಮ್ಲಜನಕವನ್ನು ನೀಡಲು ವಿಫಲವಾಗಿದ್ದೆ ಮಹಾ ಸಾಧನೆ ಇದಕ್ಕೆ ಕೇಂದ್ರ ಸರಕಾರಕ್ಕೆ ಅಭಿನಂದನೆಗಳು.
ತೇಜಸ್ವಿ ಸೂರ್ಯ ರವರು ನಿನ್ನೆ ಮಾಡಿದ ರಹಸ್ಯ ಕಾರ್ಯಾಚರಣೆಗೆ ನೋಬೆಲ್ ಪ್ರಶಸ್ತಿಯನ್ನು ನೀಡಬಹುದೆಂದು ಕಾಂಗ್ರೇಸ್ ಮುಖಂಡ ಟಿ.ಎಂ.ಶಾಹೀದ್ ತೆಕ್ಕಿಲ್ ಗೇಲಿ ಮಾಡಿದರು. ಅವರು ಮುಖ್ಯಮಂತ್ರಿ ಸರಕಾರದ ವೈಫಲ್ಯವನ್ನು ಎತ್ತಿ ತೋರಿಸಿದ್ದು ಆಸ್ಪತ್ರೆಗಳನ್ನು ನಿರ್ಮಿಸಬೇಕಾದ ಸರಕಾರಗಳು ಸ್ಮಶಾನವನ್ನು ನಿರ್ಮಾಣ ಮಾಡುತ್ತಿರುವುದು ಸರಕಾರದ ಅಭಿವೃದ್ಧಿಯನ್ನು ಎತ್ತಿ ತೋರಿಸುತ್ತಿದೆ ಎಂದು ಶಾಹೀದ್ ರವರು ಟೀಕಿಸಿದರು. ಆದುದರಿಂದ ಸರಕಾರ ಕೂಡಲೆ ಎಚ್ಚೆತ್ತು ಬಡವರ, ಬೀದಿಬದಿ ವ್ಯಾಪಾರಸ್ಥರ , ಕೂಲಿಕಾರ್ಮಿಕರ ಕಷ್ಠಗಳಿಗೆ ಸ್ಫಂದಿಸಿ ಪ್ರತಿ ಕುಟುಂಬಗಳ ಖಾತೆಗೆ ತಲಾ 10 ಸಾವಿರ ರೂಪಾಯಿಯನ್ನು ಹಾಕಬೇಕೆಂದು ಟಿ.ಎಂ.ಶಾಹೀದ್ ರವರು ಸರಕಾರವನ್ನು ಒತ್ತಾಯಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.