(www.vknews.com) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹಳ ದೀನಿ ಸ್ಥಾಪನೆಗಳು ಮತ್ತು ಅರೇಬಿಕ್ ಕಾಲೇಜುಗಳು ಬಹಳ ಸುಂದರವಾಗಿ ನಡೆದುಬರುತ್ತಿದೆ ಅಲ್-ಹಮ್ದುಲಿಲ್ಲಾಹ್
ಶೈಕ್ಷಣಿಕ ರಂಗದಲ್ಲಿ ಹಾಗೂ ಮುಸ್ಲಿಂ ಕಲ್ಯಾಣ ಕೆಲಸಗಳಲ್ಲಿ ಕಳೆದ ಹಲವಾರು ವರ್ಷಗಳಿಂದ ಅನೇಕ ಶಾಫೀ ಹಾಗೂ ಹನಫಿ ಮದ್ಹಬ್ಗಳ ದೀನಿ ಸ್ಥಾಪನೆಗಳು ಬಹಳ ಉತ್ಸಾಹದಿಂದ ಕಾರ್ಯಾಚರಿಸುತ್ತಿರುವುದು ನಮಗೆಲ್ಲರಿಗೂ ತಿಳಿದ ವಿಷಯ. ಇಲ್ಲಿ ದೀನಿ ಬೋಧನೆ ನಡೆಸುತ್ತಿರುವ ಉಸ್ತಾದರಂತೂ ಯಾವುದೇ ಮತ- ಪಂಡಿತರುಗಳಿಗೆ ಕಡಿಮೆಯೇನಿಲ್ಲ.
ಪದವಿ ಪಡೆದ ಪಂಡಿತರು ಅಲ್ಲದೆ ಲೌಕಿಕ ಬೋಧನೆ ನಡೆಸಲು ಹಲವಾರು ಶಿಕ್ಷಕರು ಕೂಡ ದುಡಿಯುತ್ತಿದ್ದಾರೆ ಶೈಕ್ಷಣಿಕ ರಂಗದಲ್ಲಿ ಇಂತಹ ಸಂಸ್ಥೆಗಳು ಮುಸ್ಲಿಂ ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರ. ಇಂತಹ ಸ್ಥಾಪನೆ ಗಳಲ್ಲಿ ಕಲಿತಿರುವ ಎಷ್ಟೋ ವಿದ್ಯಾರ್ಥಿಗಳು ಹಿಫ್ಲುಲ್ ಖುರ್ಆನ್ ಹಾಗೂ ಸಮನ್ವಯ ವೀಧ್ಯಾಭ್ಯಾಸ ವಿಷಯಗಳಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿ ಇಂತಹ ಸಂಸ್ಥೆಗಳನ್ನೇ ಸೇರಿ ಉದ್ಯೋಗ ಮಾಡುತ್ತಿದ್ದಾರೆ. ಕೆಲವೊಂದು ಕಡೆಗಳಲ್ಲಿ 400 ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಇವರ ಬೋಧನೆಗೆ ಕೇವಲ 4 – 5 ಉಸ್ತಾದ್ ಗಳು ಮಾತ್ರವೇ ಇರುವುದು ಕಂಡುಬರುತ್ತಿದೆ.
ಹೆಚ್ಚಿನ ಸಂಸ್ಥೆಗಳಲ್ಲಿ ದೀನಿ ಪಂಡಿತರು ಹಾಗೂ ಶಿಕ್ಷಕರಿಗೆ ಅತ್ಯಂತ ಕನಿಷ್ಠ ಮಾಸಿಕ ಸಂಬಳ ವಿದು ಇತರ ಯಾವುದೇ ವರಮಾನ ಗಳು ಇರುವುದಿಲ್ಲ. ದಿನವೊಂದಕ್ಕೆ ಸುಮಾರು ಹದಿನೈದು ಗಂಟೆಗಳಿಗೂ ಹೆಚ್ಚುಕಾಲ ಸೇವೆ ನೀಡುವ ಇವರಿಗೆ , ಮೊಹಲ್ಲಾದಲ್ಲಿ ನಡೆಯುವಂತಹ ಮದುವೆ ಮೌಲಿದ್ ಇಂತಹ ಯಾವುದೇ ಕಾರ್ಯಕ್ರಮಗಳಿಗೆ ಹೋಗಲು ಸಾಧ್ಯವಾಗುವುದಿಲ್ಲ. ಒಟ್ಟಿನಲ್ಲಿ ಹೇಳುವುದಾದರೆ ಸಂಸ್ಥೆಗಳಿಂದ ಸಿಗುವ ಕನಿಷ್ಟ ಸಂಬಳವಿಲ್ಲದೆ ಬೇರೆ ಯಾವುದೇ ರೀತಿಯ ಒಂದು ರೂಪಾಯಿಯ ಅನುಕೂಲ ಕೂಡ ಇವರಿಗೆ ದೊರಕುತ್ತಿಲ್ಲ.
ಆರ್ಥಿಕವಾಗಿ ಇವರಲ್ಲಿ ಸಮಸ್ಯೆ ಅನುಭವಿಸುವ ಅನೇಕರಿದ್ದಾರೆ. ಆದರೆ ಯಾರ ಬಳಿಯೂ ಇವರು ಕೇಳುವ ಹಾಗಿಲ್ಲ ಮತ್ತು ಇವರ ಬಗ್ಗೆ ಮೊಹಲ್ಲಾದಲ್ಲಿ ಇರುವವರ ಗಮನವೂ ಕೂಡ ಬಹಳ ಕಡಿಮೆ. ಪುಣ್ಯ ಮಾಸ ರಮದಾನ್ ತಿಂಗಳಲ್ಲಾದರೂ ಬೇರೆ ಉಸ್ತಾದರಿಗೆ ಸಿಗುವಂತಹ ಯಾವುದೇ ಸೌಲಭ್ಯಗಳು ಇವರನ್ನು ತಲುಪುವುದಿಲ್ಲ .
ಆದ್ದರಿಂದ ನಿಮ್ಮೆಲ್ಲರಲ್ಲಿ ನನ್ನ ಕಳಕಳಿಯ ವಿನಂತಿ ಏನೆಂದರೆ , ಅವರಿಗೆ ಲಭಿಸುವ ತುಚ್ಛವಾದ ಸಂಬಳ ಮಾತ್ರವಾಗಿರುತ್ತದೆ ಇದರಲ್ಲಿಯೇ ಅವರ ಕುಟುಂಬ ಜೀವನ ಅವರು ನಡೆಸಬೇಕಾಗಿದೆ ರಂಜಾನ್ ತಿಂಗಳಲ್ಲಿ ಸಹ ಯಾವುದೇ ಒಂದು ಸಹಾಯ ಅವರಿಗೆ ಲಭ್ಯವಾಗುವುದಿಲ್ಲ ಇವರನ್ನು ಯಾರೂ ಗಮನಿಸುವುದಿಲ್ಲ ಬಹಳ ಕಷ್ಟದಿಂದ ಅವರು ಜೀವನ ಸಾಗಿಸುತ್ತಾರೆ ದೀನುಲ್ ಇಸ್ಲಾಮಿನ ಖಿದ್ ಮತ್ ಮಾಡಲು ಸಾವಿರಗಟ್ಟಲೆ ವಿದ್ಯಾರ್ಥಿಗಳಿಗೆ ಬೋಧನೆ ನೀಡಿ ಸಮುದಾಯಕ್ಕೆ ಸಮರ್ಪಿಸುವ ಈ ಅಧ್ಯಾಪಕರನ್ನು ನಾವು ಮರೆಯಲೇಬಾರದು ಒಂದೊಂದು ಜಾಗದಲ್ಲಿರುವ ಅರಬಿಕ್ ಕಾಲೇಜಿನ ಅಧ್ಯಾಪಕರಿಗೆ ತಾಲೂಕಿನ ಅಲ್ಲವಾದರೆ ಸುತ್ತಮುತ್ತಲಿನ ಸಂಪನ್ನರು ಕೊಡುಗೈ ದಾನಿಗಳು ಸಹಾಯ ಮಾಡಬೇಕಾದ ಅತ್ಯಗತ್ಯ ವಿದೆ ಅಲ್ಲದೆ ಕೊರೋನ ಹಾಗೂ ಲಾಕ್ ಡೌನ್ ಇವೆಲ್ಲವನ್ನು ಮನಗಂಡು ತಮ್ಮಿಂದಾಗುವ ಹೆಚ್ಚಿನ ಸಹಾಯವನ್ನು ಇವರಿಗೆ ನೀಡಬೇಕಾಗಿ ಕೇಳಿಕೊಳ್ಳುತ್ತಿದ್ದೇನೆ .
ಈ ಮಾರಕ ರೋಗದಿಂದ ಅಲ್ಲಾಹು ನಮ್ಮನ್ನು ಮತ್ತು ನಮ್ಮ ಕುಟುಂಬವನ್ನು ರಕ್ಷಿಸಲಿ ಹಾಗೂ ನಮ್ಮೆಲ್ಲರ ಇಹ-ಪರ ಗಳನ್ನು ಅಲ್ಲಾಹು ವಿಜಯ ಗಳಿಸಲಿ ಆಮೀನ್ .
✒️ ಕೆ.ಎಚ್ ಖಾಸಿಂ ಹಾಜಿ ಕೂರ್ನಡ್ಕ ಅಧ್ಯಕ್ಷರು, ಪೀರ್ ಮೊಹಲ್ಲಾ ಮುಹಿಯುದ್ದೀನ್ ಜುಮಾ ಮಸ್ಜಿದ್ ಕೂರ್ನಡ್ಕ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.