(www.vknews.com) : ಇಹಲೋಕದಲ್ಲಿ ಕುಟುಂಬ ಸೌಹಾರ್ದತೆ ಮೆರೆದು ಇಸ್ಲಾಮ್ ತೋರಿದ ದಾರಿಯನ್ನು ಗೌರವಿಸುವವನೂ ಹಾಗೂ ಇಸ್ಲಾಮ್ ತೋರಿದ ದಾರಿಯಲ್ಲಿ ನಡೆಯುವವನೇ ಪರಲೋಕದಲ್ಲಿ ವಿಜಯಿಗಳ ಜೊತೆಗಿರುವನು . ‘ಕುಟುಂಬ’ ಎಂದರೆ ಕೇವಲ ಬದುಕು ಹಾಗೂ ಮರಣದ ಮಧ್ಯೆ ಸೀಮಿತಗೊಂಡ ಕೆಲವು ಪಾತ್ರಧಾರಿಗಳ ವರ್ತನೆ ಮಾತ್ರವಲ್ಲ. ನಮ್ಮ ಭಾದ್ಯತೆಯು ಮರಣದ ದೊಂದಿಗೆ ಅಂತ್ಯವೂ ಆಗುವುದಿಲ್ಲ.
ಕುಟುಂಬದ ಶೀರ್ಷಿಕೆಯಲ್ಲಿ ಮಾತಾಪಿತರು ಮೊದಲ ಸರದಿಯಲ್ಲಿರುವರು .ಮಕ್ಕಳನ್ನು ಬೆಳೆಸುವ ಕಾಲದಲ್ಲಿ ಅಮ್ಮ- ಅಪ್ಪ ಅದೆಷ್ಟು ಸ್ವತಂತ್ರ ರಾಗಿ ಇದ್ದು ,ಅದೆಷ್ಟು ಪ್ರೀತಿ ಸ್ನೇಹ ಸುರಿದಿರುತ್ತಾರೆ.ಎಷ್ಟೊಂದು ಕಷ್ಟ ಪಟ್ಟು ಬೆಳೆಸುತ್ತಾರೆ . ತಮ್ಮ ಕೈಲಾದಷ್ಟನ್ನೂ ಮಮತೆಯೊಂದಿಗೆ ಬೆರೆಸಿ ಮಕ್ಕಳಿಗೆ ಸಮಾನವಾಗಿ ಹಂಚುತ್ತಾ ,ಮಕ್ಕಳ ಸಂತೃಪ್ತಿಯಲ್ಲಿ ತಮ್ಮಯ ಹಸಿವು ನೀಗಿಸಿಕೊಂಡಿರುತ್ತಾರೆ. ಅದಷ್ಟೋ ಹಗಲು ರಾತ್ರಿ ನಿದ್ದೆಗೆಟ್ಟಿರುತ್ತಾರೆ. ಮಕ್ಕಳ ಏಳಿಗೆಗಾಗಿ ಅಲ್ಲಾಹ ನಲ್ಲಿ ದುವಾ ಮಾಡಿರುತ್ತಾರೆ.
ಕಾಲಕ್ರಮೇಣ ಇಂತಹ ಹಲವು ಮಾತಾಪಿತರು ಮಕ್ಕಳ ಮುಂದೆ ಮಾತನಾಡಲು ಭಯಪಡುವ ಹಂತಕ್ಕೆ ತಲುಪುವುದು ಖೇದನೀಯ. ಮಕ್ಕಳಿಂದ ನಿರೀಕ್ಷಿಸಿದ್ದೆಲ್ಲವೂ ಕೇವಲ ನಿರಾಶೆಯಾಗಿ ಉಳಿದಿರುತ್ತದೆ. ಮಕ್ಕಳ ಮುಂದೆ ಕೇವಲ ಮೂಖ ಪ್ರೇಕ್ಷಕರಾಗಿರುತ್ತಾರೆ. ಬದುಕಿರುವಾಗ ಹೆತ್ತವರ ಬಾಧ್ಯತೆ, ಹೊಣೆ,ಶುಶ್ರೂಶೆ ನಡೆಸದವನು ಅವರ ಮರಣದ ನಂತರದ ಬಾಧ್ಯತೆಯನ್ನು ಮನಸಾರೆ ಕೈಗೊಳ್ಳುವನೇ? ಬದುಕಿರುವಾಗ ಹೆತ್ತವರಿಗೆ ಸಲಾಂ ಹೇಳಿರದವನು ಇನ್ನು ಕಬರಿನ ಬಳಿ ಬಂದು ಸಲಾಂ ಹೇಳಿ ಪ್ರಾರ್ಥಿಸುವನೇ ….?
ಮುಸ್ಲಿಮನಾದವನು ,ತನಗೂ, ತನ್ನ ಮಾತಾಪಿತರಿಗೂ ಹಾಗೂ ತನ್ನ ಕುಟುಂಬಕ್ಕೂ ದುಆ ಮಾಡಿ ಅಲ್ಲಾಹನಲ್ಲಿ ಪ್ರಾರ್ಥಿಸಿಕೊಳ್ಳಬೇಕಿರುವುದು ಅವನ ಭಾದ್ಯತೆಯಾಗಿದೆ. ನಮಗಾಗಿ ನಾವು ಪ್ರಾರ್ಥಿಸುವುದಕ್ಕಿಂತಲೂ, ನಮ್ಮಯ ಹೆತ್ತವರು ,ನಮ್ಮ ಕುಟುಂಬಸ್ಥರು ಅಥವಾ ಬೇರೆ ಯಾರೇ ಆಗಲಿ ನಮಗಾಗಿ ನಡೆಸುವ ಪ್ರಾರ್ಥನೆ ಅತ್ಯಮೂಲ್ಯವಾಗಿರುವುದು. ಆ ಪ್ರಾರ್ಥಿಸುವವರಿಗೂ ದುಪ್ಪಟ್ಟು ಒಳಿತಿರುವುದು ಖಂಡಿತಾ. ಮರಣ ಹೊಂದಿರುವ ತನ್ನ ಹೆತ್ತವರಿಗಾಗಿ ಸದಾ ಪ್ರಾರ್ಥಿಸಬೇಕಿದೆ. ಮರಣದ ನಂತರವೂ ಬಾಧ್ಯತೆಯು ಕೊನೆಗೊಂಡಿರುವುದಿಲ್ಲ. ಎಷ್ಟೇ ದೂರ ಉಳಿದುಕೊಂಡರೂ ಕೂಡ ಕುಟುಂಬದ ಬಾಧ್ಯತೆ, ಹೊಣೆ ನಮ್ಮಿಂದ ದೂರ ಉಳಿಯಲಾರದು.
ಸಣ್ಣ ಸಣ್ಣ ವಿಷಯಗಳು ವಿವಾದಕ್ಕೊಳ ಗೊಂಡು, ಮನಸ್ತಾಪಕ್ಕೆ ಕಾರಣವಾಗಬಹುದು. ಈ ಜಗಳ, ಭಿನ್ನಾಭಿಪ್ರಾಯಗಳೆಲ್ಲವೂ ,ಬಂಧುಗಳ ಮಧ್ಯೆಯೇ ಬರುವಂಥದ್ದು. ವರ್ಷಾನುಕಟ್ಟಲೆ ಮಾತುಕತೆ ಇಲ್ಲದೆ ಸಂಬಂಧ ಮುರಿದಿರುತ್ತಾರೆ. ಈಮಾನ್ ನಷ್ಟಗೊಳ್ಳುವ ಬಗ್ಗೆ ಚಿಂತಿಸದೆ ಹಠ ಸಾಧಿಸುತ್ತಾರೆ.
ಈ ಶಾಶ್ವತವಲ್ಲದ ಈ ಜೀವನ, ಕೇವಲ ನಶ್ವರವಲ್ಲದೆ ಇನ್ನೇನಿಲ್ಲ. ಬೆಳಗ್ಗೆ ಇದ್ದವರು ಮಧ್ಯಾಹ್ನ ಇರುವ ಖಾತ್ರಿ ಇಲ್ಲ. ಮರಣದೊಂದಿಗೆ ಎಲ್ಲವೂ ಕೊನೆಗೊಂಡಿತು. ಆಯುಷ್ಯ ಎಂದರೆ ನೀರ ಮೇಲಿನ ಗುಳ್ಳೆ ಅನ್ನುವ ಸತ್ಯ ಒಪ್ಪಿಕೊಳ್ಳಲೇ ಬೇಕಿರುವ ಕಟುಸತ್ಯ. ಮನಸ್ತಾಪ , ದ್ವೇಷ,ಕೋಪ ಏನೇ ಇದ್ದರೂ ಕ್ಷಮೆ ಯೊಂದಿಗೆ ಮತ್ತೆ ಐಕ್ಯತೆಗೆ ಮರಳಬೇಕು. ಪರಸ್ಪರ ಕ್ಷಮೆಯಾಚಿಸಿ ಮನಸು ಸ್ವಚ್ಚ ಗೊಳಿಸಿಕೊಳ್ಳಬೇಕು. ಮತ್ತೆ ಇನ್ಯಾವತ್ತೂ ಕುಟುಂಬಕಲಹ ಉಂಟಾಗದಂತೆ ಎಚ್ಚರ ವಹಿಸಬೇಕು. ಇಹಲೋಕದ ಸ್ವರ್ಗ ಪ್ರಾಪ್ತಿಗಾಗಿ ನಮಗೂ, ನಮ್ಮ ಕುಟುಂಬಕ್ಕೂ ಪ್ರಾರ್ಥಿಸೋಣ. ಮರಣಹೊಂದಿದ ನಮ್ಮ ಬಾಧ್ಯತೆಗೊಳಪಟ್ಟ ಕುಟುಂಬ ಸದಸ್ಯರಿಗಾಗಿ ಪ್ರಾರ್ಥಿಸಲು ಮರೆಯದಿರೋಣ. ನಾವು ಬೇರೆಯವರಿಗಾಗಿ ಮಾಡುವ ಪ್ರತಿಯೊಂದು ಉಳಿತೂ ನಮ್ಮ ಇಹಲೋಕದ ಒಳಿತಿನ ಪಟ್ಟಿಯಲ್ಲಿ ಅಚ್ಚಾಗಿರುವುದು. ಅದರ ಪ್ರತಿಫಲ ಅಲ್ಲಾಹ್ ನಮಗೆ ಖಂಡಿತ ನೀಡುವನು.
ಪರಿಶುದ್ಧ ರಮಝಾನ್ ನ ಪವಿತ್ರವಾದ ಕೊನೆಯ ಸಾಲುಗಳಲ್ಲಿ ನಾವೀಗ ಇಬಾದತ್ ನಡೆಸುತ್ತಿರುವೆವು .ಈ ಪ್ರಾರ್ಥನೆಗಳಲ್ಲಿ ನಾಡಿಗಾಗೀ ದೇಶಕ್ಕಾಗಿ ಹಾಗೂ ಜನತೆಗಾಗಿ ಪ್ರಾರ್ಥಿಸೋಣ.ದೇಶದ ಹಾಗೂ ಪ್ರಪಂಚದ ಎಲ್ಲೆಡೆ ವ್ಯಾಪಿಸಿ ತನ್ನ ಕೆನ್ನಾಲಿಗೆ ಇಂದ ಜನತೆಯ ಮಾರಣ ಹೋಮಕ್ಕೆ ಕಾರಣವಾದ ಕೋರೋಣ ರೋಗ ನಶಿಸಿಹೋಗಿ,ಜನತೆ ನೆಮ್ಮದಿ ಹಾಗೂ ಆರೋಗ್ಯಪೂರ್ಣ ಬದುಕು ನಡೆಸುವಂತೆ ಆಗಲಿ. ಈ ಬರುವ ಸಂಭ್ರಮದ ಈದ್ ಹಬ್ಬವನ್ನು ಅತೀ ಸರಳವಾಗಿ ಮನೆಯಲ್ಲಿ ಇದ್ದುಕೊಂಡೇ ಆಚರಿಸೋಣ.ಸರಕಾರದ ಆದೇಶಗಳನ್ನು ಪಾಲಿಸೋಣ.ಕುಟುಂಬಕ್ಕೆ ನಡೆಸುವ ದುಆ ದ ಜೊತೆ ದೇಶದ ಉಳಿತಿಗಾಗಿ ಪ್ರಾರ್ಥಿಸೋಣ. (ಆಮೀನ್)
ಸಾರ ಅಲಿ, ಪರ್ಲಡ್ಕ ಪುತ್ತೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.