ಮಂಗಳೂರು (www.vknews.com) : ಸರಕಾರಿ ಆಸ್ಪತ್ರೆಗೆ ಮುಸ್ಲಿಂ ವೈದ್ಯರನ್ನು ನೇಮಕ ಮಾಡಿದ ಬಿಬಿಎಂಪಿ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸಂಸತ್ ಸದಸ್ಯ ತೇಜಸ್ವಿ ಸೂರ್ಯ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ ಮೂಲಕ ಅವಿವೇಕ ಮತ್ತು ಬೇಜವಾಬ್ದಾರಿ ಯಿಂದ ವರ್ತಿಸಿದ್ದು ಜನರನ್ನು ಪ್ರತಿನಿಧಿಸುವ ಮಹತ್ವದ ಸ್ಥಾನಕ್ಕೆ ಅರ್ಹನಲ್ಲದ ಕಾರಣ ಕೂಡಲೇ ರಾಜೀನಾಮೆ ನೀಡಬೇಕೆಂದು ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹೆಚ್.ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಆಗ್ರಹಿಸಿದ್ದಾರೆ.
ಈ ಹಿಂದೆ ಮುಸ್ಲಿಮರನ್ನು ಪಂಚರ್ ಹಾಕುವವರು ಎಂದು ನಿಂದಿಸಿದ್ದ ಸಂಸದ ತೇಜಸ್ವಿ ಸೂರ್ಯ,ಮುಸ್ಲಿಮರು ಉನ್ನತ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗೆ ಬಂದು ವೈದ್ಯರಾಗಿ ಸಮಾಜದ ಸೇವೆ ಮಾಡುವಾಗ ಕೋಮು ವಿಷ ಕಾರುವ ಮೂಲಕ ತನ್ನ ನೀಚ ಮನಸ್ಥಿತಿಯನ್ನು ಬಹಿರಂಗ ಪಡಿಸಿದ್ದಾರೆ.
ಜನರನ್ನು ಧರ್ಮ,ಜಾತಿ ಆಧಾರದಲ್ಲಿ ವಿಂಗಡಿಸುವ ಯಾವುದೇ ರಾಜಕೀಯ ಅಪಾಯಕಾರಿಯಾಗಿದ್ದು,ಭಾರತೀಯ ಸಮುದಾಯವನ್ನು ಒಂದೇ ಮನೋಭಾವದಿಂದ ನೋಡುವವರಿಗೆ ಮಾತ್ರ ದೇಶದ ಉನ್ನತ ಹಾಗೂ ಜವಾಬ್ದಾರಿಯುತ ಹುದ್ದೆಯಲ್ಲಿ ಮುಂದುವರಿಯಲು ಸಾಧ್ಯ.
ಚಾಮರಾಜನಗರ ದಲ್ಲಿ ಆಕ್ಸಿಜನ್ ಸಿಗದೆ ದಾರುಣವಾಗಿ ಮರಣಹೊಂದಿದ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನದ ಭಾಗ ಇದಾಗಿದ್ದು, ಜನರಿಂದ ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಆಯ್ಕೆಯಾದ ತೇಜಸ್ವಿ ಸೂರ್ಯ ಭಾರತದ ಪರಮೋಚ್ಚ ಸಂವಿಧಾನಕ್ಕೆ ಅಪಚಾರ ಮಾಡಿರುವುದು ನಾಚಿಕೆಗೇಡು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.