ಪುತ್ತೂರು (www.vknews.com) : ಬೆಡ್ ಬ್ಲಾಕಿಂಗ್ ಹಗರಣಕ್ಕೆ ಸಂಬಂಧಿಸಿದಂತೆ, ಸಂಸದ ತೇಜಸ್ವಿ ಸೂರ್ಯ ರವರು, ಬೆಂಗಳೂರು ದಕ್ಷಿಣ ವಲಯದ ವಾರ್ ರೂಮಿನಲ್ಲಿ, ಸುಮಾರು ಇನ್ನೂರಕ್ಕೂ ಮಿಕ್ಕಿ ಜನ ಕೆಲಸ ಮಾಡುತ್ತಿದ್ದರೂ, ಕೇವಲ ಒಂದು ಸಮುದಾಯಕ್ಕೆ ಸೇರಿದ 17 ಮಂದಿ ವ್ಯಕ್ತಿಗಳ ಹೆಸರನ್ನು ಮಾತ್ರ ಉಲ್ಲೇಖಿಸಿ, ಇದೇನು ಮದ್ರಸಕ್ಕೆ ನೇಮಕ ಮಾಡಿಕೊಂಡಿದ್ದೀರಾ…? ಎಂದು ಪ್ರಶ್ನಿಸುವ ಮೂಲಕ ರಾಜ್ಯದಲ್ಲಿ ಕೋಮುದ್ವೇಷವನ್ನು ಹರಡಲು ಪ್ರಯತ್ನ ನಡೆಸಿದ್ದಾರೆ. ಇವರ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಬೇಕು ಎಂದು ಕೆಪಿಸಿಸಿ ಅಲ್ಪಸಂಖ್ಯಾತರ ಸಮಿತಿ ಉಪಾಧ್ಯಕ್ಷರಾದ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಆಗ್ರಹಿಸಿದ್ದಾರೆ.
ಮಹಾಮಾರಿ ಕೊರೋನದಿಂದ ಜರ್ಜರಿತವಾಗಿರುವ ಈ ಪರಿಸ್ಥಿತಿಯಲ್ಲಿ, ರಾಜ್ಯದ ಜನರು ಜಾತಿ ಧರ್ಮ ಭಾಷೆ ಗೋತ್ರದ ಎಲ್ಲೆ ಮೀರಿ, ಪರಸ್ಪರ ಸಹಕಾರವನ್ನು ಮಾಡುತ್ತಿರುವುದನ್ನು ಕಂಡು ಸಹಿಸದ ಈ ಸಂಸದರು, ಕೋಮು ವಿಷ ಬೀಜವನ್ನು ಬಿತ್ತಿ ರಾಜ್ಯದ ಜನರ ನಡುವಿನ ಒಗ್ಗಟ್ಟನ್ನು ಮುರಿದು, ತಮ್ಮ ರಾಜಕೀಯ ಲಾಭದ ಉದ್ದೇಶಕ್ಕಾಗಿ ಬಳಸಿಕೊಳ್ಳಲು ಉದ್ದೇಶಿಸಿರುವುದು ತೀರಾ ಶೋಚನೀಯ ಸಂಗತಿಯಾಗಿದೆ. ಮಾತ್ರವಲ್ಲ ತಮ್ಮದೇ ಪಕ್ಷದ ಸರಕಾರ ಆಡಳಿತ ನಡೆಸುತ್ತಿರುವಾಗ ಸರಕಾರದ ವೈಫಲ್ಯವನ್ನು ಮರೆ ಮಾಚುವ ಉದ್ದೇಶದಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು, ಈ ರೀತಿ ವರ್ತಿಸಿದ್ದಾರೆ. ಇಂಥವರನ್ನು ಕಾನೂನಿನ ಕುಣಿಕೆಗೆ ಒಳಪಡಿಸುವುದು ಅತಿ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.