ಬೆಂಗಳೂರು(www.vknews.in): ಎರಡು ದಿನಗಳ ಹಿಂದೆ, ಸಂಸದ ತೇಜಸ್ವೀ ಸೂರ್ಯ ನಾಲ್ಕು ಶಾಸಕರೊಂದಿಗೆ ಬೆಂಗಳೂರಿನ ಕೊವಿಡ್ ವಾರ್ ರೂಂ ಗೆ ನುಗ್ಗಿ, ಮುಸ್ಲಿಂ ನೌಕರರ 16 ಹೆಸರುಗಳನ್ನು ಓದುತ್ತಿದ್ದರೆ, ಶಾಸಕರೊಬ್ಬರು ಸಹಾಯವಾಣಿ ಅಥವಾ ಮದರಸಾವನ್ನು ನಡೆಸುತ್ತೀರಾ ಎಂದು ಕೇಳುವ ವಿಡಿಯೋವೊಂದು ವೈರಲಾಗಿ ಸಂಸದರ ರಾಜಿನಾಮೆಯ ಒತ್ತಡ ಕೇಳಿ ಬರುತ್ತಿರುವಂತೆಯೇ . ಇತ್ತ ಗುರುವಾರ ಮತ್ತೊಮ್ಮೆ ವಾರ್ ರೂಂಗೆ ಭೇಟಿ ನೀಡಿದ ಸಂಸದರು ಸಿಬ್ಬಂದಿಗಳ ಕ್ಷಮೆಯಾಚಿಸಿದ್ದಾರೆ.
‘ನಿಮ್ಮಲ್ಲಿ ಯಾರೊಬ್ಬರ ವಿರುದ್ಧವೂ ನನಗೆ ವೈಯಕ್ತಿಕವಾಗಿ ಧ್ವೇಷ ಇಲ್ಲ. ನನ್ನ ಭೇಟಿಯಿಂದಾಗಿ ಯಾರಿಗಾದರೂ ಅಥವಾ ಯಾವುದೇ ಸಮುದಾಯ ಭಾವನಾತ್ಮಕವಾಗಿ ನೋವಾದರೆ, ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ನನ್ನ ಗಮನಕ್ಕೆ ಬಂದ ಹಾಸಿಗೆ ಹಂಚಿಕೆ ಹಗರಣದ ಬಗ್ಗೆ ತನಿಖೆ ನಡೆಸಲು ನಾನು ಬಯಸಿದ್ದೆ, ಆದರೆ ನನ್ನ ಕಾರ್ಯಗಳು ಯಾರಿಗಾದರೂ ನೋವುಂಟು ಮಾಡಿದ್ದರೆ, ದಯವಿಟ್ಟು ನನ್ನ ಕ್ಷಮೆಯಾಚನೆಯನ್ನು ಸ್ವೀಕರಿಸಿ ‘ಎಂದು ಅವರು ಸಿಬ್ಬಂದಿಗೆ ತಿಳಿಸಿದರು, “ಎಂದು ಏಜೆನ್ಸಿಯ ಕ್ರಿಸ್ಟಲ್ ಇನ್ಫೋಸಿಸ್ಟಮ್ಸ್ ಅಂಡ್ ಸರ್ವಿಸಸ್ನ ಪ್ರಾಜೆಕ್ಟ್ ಮ್ಯಾನೇಜರ್ ಶಿವು ನಾಯಕ್ ಹೇಳಿದರು.
ತನಿಖೆ ಮಾಡಲು ಅವನ್ಯಾವನೋ ಐಎಎಸ್ / ಐಪಿಎಸ್ ಆಫೀಸರಾ? ಮುಟ್ಟಾಳ.. ಎಲ್ಲಾದ್ರೂ ಹೋಗಿ ಡೋಲು ಬಡಿಯಲಿ..
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.