(www.vknews.com) :
ರೋಗ ಸೃಷ್ಟಿ ಕರ್ತನದ್ದು ಮರಣವೂ…. ನಡುವಲ್ಲಿ ಅದೆಷ್ಟೋ ದಂಧೆಗಳು ಹಾದು ಹೋಗುವುದು ಜೊತೆಗೆ ಪ್ರಚಾರವೂ…
ಮಾಡಿದ್ದೇನು? ಸಾಧಿಸಿದೆಷ್ಟು? ಅಯ್ಯೋ ಸಮಯ ಸಿಗಲಿಲ್ಲ ಸಾಧನೆಯ ಯೋಚಿಸಲು
ಧರ್ಮಾಂಧರಿಗೆ, ಧರ್ಮ ಧರ್ಮಗಳ ನಡುವೆ ದ್ವೇಷ ಹರಡುವ ಪ್ರೆಸ್ ಮಿಟ್ ಕಾಯಕವೇ ಮುಗಿದಿಲ್ಲ ಪಾಪ ಪ್ರಜ್ಞೆಗೂ ಸಮಯ ಬೇಕಲ್ಲವೇ!
ಸಮಾಜ ಸೇವಕರಿಗೆ, ರೋಗಿಗಳ ಬದುಕನ್ನು ಉಳಿಸುವ ಆಮ್ಲಜನಕ ಹೊಂದಿಸುವ ಹೋರಾಟವೇ ಮುಗಿದಿಲ್ಲ ಇನ್ನು ,ಚಿಂತಿಸಲು ಸಮಯ ಬೇಕಲ್ಲವೇ!
ಬಡಪಾಯಿ ಜನರಿಗೆ , ಬದುಕಿನ ಜಂಜಾಟವೇ ಮುಗಿದಿಲ್ಲ ಯೋಚನೆಗೂ ಸಮಯ ಬೇಕಲ್ಲವೇ!
ಪರಲೋಕ ಜೀವನ ಖಂಡಿತ ಚಿಂತಿಸಬೇಕಾಗಿದೆ ತರಾತುರಿಯಲ್ಲಿದ್ದರು ಸಮಯ ಹೊಂದಿಸಬೇಕಾಗಿದೆ.
ಕರೆಗೆ ಓ ಗೋಟ್ಟು ದೇವನ ಧನಾಢ್ಯರು ಬಲಾಢ್ಯರೂ.. ಎಲ್ಲ ಬಿಟ್ಟು ತೆರಳಿದರು ಮುಂದೆ ನಾವೂ…
✍️ ಯಂ.ಕೆ ಬಶೀರ್ ಕಾವು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.