ಪುತ್ತೂರು (ವಿಶ್ವ ಕನ್ನಡಿಗ ನ್ಯೂಸ್) : ಕೊರೊನಾ ಎರಡನೆಯ ಅಲೆಯು ಅತಿಯಾಗುತ್ತಿದ್ದಂತೆ ಸಂಕಷ್ಟದಲ್ಲಿ ಇದ್ದ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಧೀಮಂತ ನಾಯಕ, ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯರಾದಂತಹ ಬೂಡಿಯಾರ್ ಪುರುಷೋತ್ತಮ ರೈ(ಕುಟ್ಟಣ್ಣ) ತನ್ನ ಸ್ವಂತ ಖರ್ಚಿನಲ್ಲಿ ಜಾತಿ ಮತ ಭೇದ ನೋಡದೆ ಕಳೆದ 4 ದಿನಗಳಿಂದ ಜನರ ಕಷ್ಟಗಳಿಗೆ ಸ್ಪಂದನೆ ಮಾಡುತ್ತಾ, ತಾನಾಗಿಯೇ ನಡೆದುಕೊಂಡು ಹೋಗಿ 400ಕ್ಕೂ ಹೆಚ್ಚು ಕುಟುಂಬಗಳಿಗೆ ಕಿಟ್ ನೀಡುವ ಮೂಲಕ ಜನರ ಮನಗೆದ್ದಿದ್ದಾರೆ.
ಇವರೊಂದಿಗೆ ಪಂಚಾಯತ್ ಸದಸ್ಯರಾದ ಶ್ರೀಮತಿ ಕಲಾವತಿ ಜೆ ಶೆಟ್ಟಿ, ನಳಿನಿ ಮಲಾರ್, ನಾಗೇಶ ಕುರಿಯ, ಪ್ರಕಾಶ್ ಶೆಟ್ಟಿ ಮಲಾರ್, ಅಯ್ಯೂಬ್ ಗಡಾಜೆ, ಅಶ್ವತ್ ಕುರಿಯ, ಸೂಫಿ ಕುರಿಯ, ಸಮೀರ್ ಕುರಿಯ, ಅಶ್ರಫ್ ಕುರಿಯ, ಸುನಿಲ್ ಡಿಸೋಜ ಮಲಾರ್, ಶೇಖರ ಪೂಜಾರಿ ಕಿನ್ನಿಮಜಲು, ಪುತ್ತು ಮಲಾರ್, ಆಸೀಫ್ ಕುರಿಯ, ಸಮದ್ ಕುರಿಯ, ಜಬ್ಬಾರ್ ಮಾವಿನಕಟ್ಟೆ, ಸೀನ ಅಜಲಾಡಿ, ಮಜೀದ್, ಮನ್ಸೂರ್ ರಿಕ್ಷಾ, ಭರತ್ ಬಲ್ಲಮಜಲು, ಇಬ್ರಾಹಿಂ ನೆಕ್ಕರೆ, ವೆಂಕಪ್ಪ ಡಿಂಬ್ರಿ, ಜನಾರ್ಧನ ಡಿಂಬ್ರಿ, ಹನೀಫ್ ಪಡ್ಪು, ಹಸೈನಾರ್ ಹೊಸಮಾರು, ಜಗದೀಶ ನಾಯ್ಕ ಮೊದಲಾದವರು ಜೊತೆಗಿದ್ದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.