(www.vknews.in) ಪುತ್ತೂರು – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಉಪ್ಪಿನಂಗಡಿಯ ಖ್ಯಾತ ದಂತ ವೈದ್ಯರು ಆಗಿರುವ ಡಾ.ರಾಜಾರಾಂ ಕೆ. ಬಿ. ರವರು ಉಪ್ಪಿನಂಗಡಿ ಗೃಹರಕ್ಷಕದಳದ ಪ್ರವಾಹ ರಕ್ಷಣಾ ತಂಡಕ್ಕೆ ಕೊಡೆಗಳನ್ನು ವಿತರಣೆ ಮಾಡಿದರು
ಪುತ್ತೂರು ತಹಸೀಲ್ದಾರ್ ನೇತೃತ್ವದಲ್ಲಿ ಜೂನ್ ನಿಂದ ಆಗಸ್ಟ್ ವರೆಗೆ ಉಪ್ಪಿನಂಗಡಿಯ 5 ಗೃಹರಕ್ಷಕ ರು ಮತ್ತು ತಾಲೂಕು ಆಡಳಿತದ ನುರಿತ 3 ಈಜುಗಾರರು ಉಪ್ಪಿನಂಗಡಿಯ ಪ್ರವಾಹ ರಕ್ಷಣಾ ತಂಡದಲ್ಲಿ ವರ್ಷ0 ಪ್ರತಿ ಕೆಲಸ ಮಾಡುತ್ತಿದ್ದಾರೆ. ಉಪ್ಪಿನಂಗಡಿ ವ್ಯಾಪ್ತಿಯಲ್ಲಿ ನೆರೆ ಬರುವ ಸಂದರ್ಭದಲ್ಲಿ ಆಹೋರಾತ್ರಿ ಈ ತಂಡವು ಜನರ ಆಸ್ತಿ ಪಾಸ್ತಿ ಹಾಗೂ ಜೀವವನ್ನು ರಕ್ಷಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಂತಹ ಜನನನುರಾಗಿ ಕೆಲಸ ಮಾಡುವ ಈ ತಂಡಕ್ಕೆ ಗಿರಿಜಾ ದಂತ ಕ್ಲಿನಿಕ್ ನ ಡಾಕ್ಟರ್ ರಾದ ಡಾ.ರಾಜಾರಾಂ ಕೆ. ಬಿ ರವರು ಒಳ್ಳೆಯ ಕೊಡೆಗಳನ್ನು ಕೊಡುಗೆಯಾಗಿ ನೀಡಿರುತ್ತಾರೆ. ಅವರಿಗೆ ಪ್ರವಾಹ ರಕ್ಷಣಾ ತಂಡವು ಕೃತಜ್ಞತೆಯನ್ನು ಸಲ್ಲಿಸುತ್ತದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.