ಹತ್ತೊಂಬತ್ತು ಜಿಲ್ಲೆಗಳಲ್ಲಿ ಲಾಕ್ಡೌನ್ ಗ್ರಹಣಕ್ಕೆ ಅರ್ಧ ಮುಕ್ತಿ
– ಮಧ್ಯಾಹ್ನ 2ರವರೆಗೂ ದಿನಸಿ ಮಾರಾಟ – 11 ಜಿಲ್ಲೆಗಳಿಗಿಲ್ಲ ಫ್ರೀಡಂ
ಕೊರೊನಾ ಎರಡನೇ ಅಲೆ ತೀವ್ರಗೊಂಡಿದ್ದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಅನಿವಾರ್ಯವಾಗಿ ಮೊದಲ ಬಾರಿಗೆ ಏಪ್ರಿಲ್ 27ರಂದು ಇಡೀ ರಾಜ್ಯವನ್ನು 14 ದಿನ ಲಾಕ್ಡೌನ್ ಮಾಡಲಾಗಿತ್ತು. ನಂತರ ಇದು ಹಲವು ಬಾರಿ ವಿಸ್ತರಣೆ ಆಗಿತ್ತು. ಆದ್ರೆ ಈಗ ರಾಜ್ಯದ ಬಹುತೇಕ ಕಡೆ ಕೊರೋನಾ ಪಾಸಿಟಿವಿಟಿ ಪ್ರಮಾಣ ಕುಸಿದಿರುವ ಹಿನ್ನೆಲೆಯಲ್ಲಿ ಜೂನ್ 14ರ ಇಂದಿನಿಂದ ಅನ್ಲಾಕ್ ಪ್ರಕ್ರಿಯೆ ಶುರು ಮಾಡೋದಾಗಿ ತಿಳಿಸಿತ್ತು.
ಇಂದಿನಿಂದ ಒಂದು ವಾರದ ಮಟ್ಟಿಗೆ ಸೋಂಕು ಪ್ರಮಾಣ ಕಡಿಮೆ ಇರುವ 19 ಜಿಲ್ಲೆಗಳಲ್ಲಿ ಮೊದಲ ಹಂತದ ಅನ್ಲಾಕ್ ಶುರುವಾಗಲಿದೆ. ನಿರೀಕ್ಷಿತ ಪ್ರಮಾಣದಲ್ಲಿ ಸೋಂಕು ಇಳಿಯದ 11 ಜಿಲ್ಲೆಗಳಲ್ಲಿ ಈಗಿರುವ ಲಾಕ್ಡೌನ್ ನಿಯಮಗಳನ್ನೇ ಮುಂದುವರಿಸಲು ಸರ್ಕಾರ ತೀರ್ಮಾನಿಸಿದೆ.
ಅನ್ಲಾಕ್ ರೂಲ್ಸ್:
ರಾಜ್ಯದ19 ಜಿಲ್ಲೆಗಳಲ್ಲಿ ಅನ್ಲಾಕ್ ಘೋಷಣೆ ಮಾಡಲಾಗಿದ್ದು, ಜೂನ್ 21ರವರೆಗೂ ಅರ್ಧ ದಿನ ಲಾಕ್ ರಿಲೀಫ್ ಸಿಗಲಿದೆ. ಹೀಗಾಗಿ ಅಗತ್ಯ ವಸ್ತುಗಳ ಖರೀದಿ ಸಮಯ ವಿಸ್ತರಣೆ ಮಾಡಲಾಗಿದೆ. ಅಗತ್ಯ ವಸ್ತು ಖರೀದಿಗೆ ಮಧ್ಯಾಹ್ನದವರೆಗೆ ಅವಕಾಶ ನೀಡಲಾಗಿದೆ. ಅಂದ್ರೆ ಬೆಳಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ಅನುಮತಿ ಕೊಡಲಾಗಿದೆ. ಈ ಮೊದಲು ಬೆಳಗ್ಗೆ 6ರಿಂದ 10ರವರೆಗೆ 4 ಗಂಟೆ ಮಾತ್ರ ಖರೀದಿಗೆ ಅನುಮತಿ ಇತ್ತು. ಈಗ ಮಧ್ಯಾಹ್ನದವರೆಗೂ ಅವಕಾಶ ನೀಡಿದ ಹಿನ್ನೆಲೆ 8 ಗಂಟೆಗಳ ಕಾಲ ಖರೀದಿಗೆ ಅವಕಾಶ ಕೊಟ್ಟಂತಾಗಿದೆ.
ಅನ್ಲಾಕ್ ಆದ್ರೂ ಟಫ್ ರೂಲ್ಸ್ ಇರುತ್ತೆ ಹುಷಾರ್:
ಇನ್ನು ಅನ್ಲಾಕ್ ಮಾಡಲಾಗಿದೆ, ಇಂದಿನಿಂದ ಬಿಂದಾಸ್ ಆಗಿ ಓಡಾಡಬಹುದು, ಮನೆಯಲ್ಲಿ ಕೂತು ಬೋರಾಗಿದೆ ಒಂದ್ ರೌಂಡ್ ಹೊಡೆದು ಬರ್ತೀವಿ ಅಂತಾ ಹೊರಟ್ರೆ ಖಾಕಿ ನಿಮ್ಮನ್ನು ಅರ್ಧ ದಾರಿಯಲ್ಲೇ ಅಡ್ಡ ಹಾಕುತ್ತೆ. ನಿಮ್ಮ ಓಡಾಟಕ್ಕೆ ಸೂಕ್ತ ಕಾರಣ ಕೊಟ್ಟಿಲ್ಲಾಂದ್ರೆ ದಂಡ ಕಟ್ಟಬೇಕಾಗುತ್ತೆ ಹುಷಾರ್. ಇನ್ನು ಇಂಥಾ ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕೋ ನಿಟ್ಟಿನಲ್ಲಿ ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಹೀಗಾಗಿ ಸಂಜೆ ಸ್ನ್ಯಾಕ್ಸ್, ಔಟಿಂಗ್ ಅಂತಾ ಓಡಾಡುವಂತಿಲ್ಲ. ವೀಕೆಂಡ್ನಲ್ಲಿ ಶಾಪಿಂಗ್, ರೌಂಡ್ಸ್ ಅಂತಾ ಸುತ್ತಾಡುವಂತಿಲ್ಲ.
11 ಜಿಲ್ಲೆಗಳಿಗೆ ಸದ್ಯಕ್ಕಿಲ್ಲ ಲಾಕ್ಡೌನ್ನಿಂದ ರಿಲೀಫ್:
ಮತ್ತೊಂದೆಡೆ ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ರಾಜ್ಯದ 11 ಜಿಲ್ಲೆಗಳಲ್ಲಿ ಲಾಕ್ಡೌನ್ ಮುಂದುವರಿಯಲಿದೆ. ಇಂದಿನಿಂದ ಮತ್ತೆ ಒಂದು ವಾರ ಜೂನ್ 21ರವರೆಗೂ ಲಾಕ್ಡೌನ್ ಸಂಕಷ್ಟದಿಂದ ಮುಕ್ತಿ ಸಿಗಲ್ಲ. ಕೊರೊನಾ ಕಂಟ್ರೋಲ್ ಮಾಡೋ ನಿಟ್ಟಿನಲ್ಲಿ ಇಂದಿನಿಂದ ನಿಯಮಗಳು ಮತ್ತಷ್ಟು ಟಫ್ ಆಗಿರಲಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ 25.17ರಷ್ಟಿದೆ. ಈ ಕುರಿತು ಸಿಎಂ ಆತಂಕ ವ್ಯಕ್ತಪಡಿಸಿದ್ದು, ಚಿಕ್ಕಮಗಳೂರಲ್ಲಿ ಲಾಕ್ಡೌನ್ ಕಂಟಿನ್ಯೂ ಮಾಡಿ ಸಿಎಂ ಆದೇಶ ಹೊರಡಿಸಿದ್ದಾರೆ. ಇದರ ಜತೆಗೆ, ಶಿವಮೊಗ್ಗ, ದಾವಣಗೆರೆ, ಮೈಸೂರು, ಚಾಮರಾಜನಗರ, ಹಾಸನ, ದಕ್ಷಿಣ ಕನ್ನಡ, ಮಂಡ್ಯ, ಬೆಳಗಾವಿ, ಕೊಡಗು ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಜೂನ್ 21ರ ವರೆಗೂ ಲಾಕ್ಡೌನ್ ಕಂಟಿನ್ಯೂ ಆಗಲಿದೆ.
ಒಟ್ನಲ್ಲಿ ಕೊರೊನಾ ಹೆಮ್ಮಾರಿ ಆರ್ಭಟ ತಗ್ಗಿದ ಹಿನ್ನೆಲೆ ರಾಜ್ಯ ಮುಕ್ಕಾಲು ಭಾಗ ನಾಳೆ ಬೆಳಗ್ಗೆಯಿಂದ ಅನ್ಲಾಕ್ ಆಗಲಿದೆ. ಮೊದಲಿದ್ದ ನಿರ್ಬಂಧಗಳನ್ನು ಸಡಿಲಿಸಿರೋ ಸರ್ಕಾರ ಕೆಲ ಕ್ಷೇತ್ರಗಳಿಗೆ ಕಾರ್ಯ ನಿರ್ವಹಿಸಲು ಅನುಮತಿ ನೀಡಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.