ಕೋಲಾರ ( ವಿಶ್ವ ಕನ್ನಡಿಗ ನ್ಯೂಸ್ ) : – ಕೋಲಾರ , ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕೋವಿಡ್ -೧೯ ಕ್ಕೆ ಸಿಲುಕಿ ಜೀವ ತತ್ತ ರೈತರು ಡಿಸಿಸಿ ಬ್ಯಾಂಕ್ ಮತ್ತು ಬ್ಯಾಂಕ್ ವ್ಯಾಪ್ತಿಯ ಸಹಕಾರ ಸಂಘಗಳಲ್ಲಿ ಬೆಳೆಸಾಲ ಮಾಡಿದ್ದರೆ ಅಂತಹ ಕುಟುಂಬಗಳಿಗೆ ಪರಿಹಾರ ಒದಗಿಸಲು ಅಪೆಕ್ಸ್ ಬ್ಯಾಂಕ್ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಅಪೆಕ್ಸ್ ಬ್ಯಾಂಕ್ ನಿರ್ದೇಶಕರೂ ಹಾಗೂ ಕೋಲಾರ , ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದ್ದಾರೆ .
ಶನಿವಾರ ಮೃತ ರೈತರ ಮಾಹಿತಿ ಸಂಗ್ರಹಿಸುವ ಸಂಬಂಧ ಕೋಲಾರ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಬ್ಯಾಂಕ್ ಅಧಿಕಾರಿಗಳ ಸಭೆ ನಡೆಸಿದ ಅವರು , ಅಫೆಕ್ಸ್ ಬ್ಯಾಂಕ್ ಮತ್ತು ಡಿಸಿಸಿ ಬ್ಯಾಂಕ್ ಸಹಯೋಗದಲ್ಲಿ ರೈತರಿಗೆ ಈ ನೆರವು ನೀಡಲು ನಿರ್ಧರಿಸಿದ್ದು , ಸಾಲ ಪಡೆದು ಮೃತರಾಗಿರುವ ರೈತರ ಮಾಹಿತಿ ಸಂಗ್ರಹಿಸಿ ಬ್ಯಾಂಕಿನ ಕೇಂದ್ರ ಕಚೇರಿಗೆ ಜು .೧ ರೊಳಗೆ ಸಲ್ಲಿಸಲು ಸೂಚಿಸಿದರು . ಏಪ್ರಿಲ್ -೨೦೨೦ ರಿಂದ ಜೂ .೨೦ ೨೧ ಕ್ಕೆ ಪರಿಗಣನೆ ೦೧-೦೪-೨೦೨೦ ರಿಂದ ೩೦-೦೬-೨೦೨೧ರ ಈ ಅವಧಿಯಲ್ಲಿ ಬ್ಯಾಂಕಿನಿಂದ ಬೆಳೆಸಾಲ ಪಡೆದಿದ್ದು , ಕೇವಿಡ್ನಿಂದ ಮೃತಪಟ್ಟ ರೈತನ ಕುಟುಂಬಕ್ಕೆ ಪರಿಹಾರ ಒದಗಿಸಲು ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದರು .
ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿನಿಂದ ಅಥವಾ ಬ್ಯಾಂಕಿನ ಆರ್ಥಿಕ ನೆರವಿನೊಂದಿಗೆ ಸೊಸೈಟಿಗಳಿಂದ ಬ್ಯಾಂಕ್ ನಿಗಧಿಪಡಿಸಿರುವ ಅವಧಿಯಲ್ಲಿ ಮತ್ತು ಕೃಷಿ ಭೂಮಿ ಪಹಣಿ ಆಡಮಾನವಿಟು ಬೆಳೆಸಾಲ ಪಡೆದಿರುವ ರೈತ ಕೂವಿಡ್ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಬಲಿಯಾಗಿದ್ದರೆ ಅಂತಹವರಿಗೆ ಮಾತ್ರ ಈ ಪರಿಹಾರದ ಪ್ರಯೋಜನ ಸಿಗಲಿದೆ ಎಂದು ತಿಳಿಸಿದರು . ಮೃತ ರೈತ ಕುಟುಂಬದಿಂದ ಪಡಿತರ ಚೀಟಿ , ಕೋವಿಡ್ನಿಂದ ಮೃತಪಟ್ಟ ದೃಢೀಕೃತ ಪ್ರಮಾಣ ಪತ್ರ , ಆಧಾರ್ ಕಾರ್ಡ್ , ಸಾಲ ಪಡೆದಿರುವ ದಾಖಲೆಗಳನ್ನು ಆಯಾ ವ್ಯಾಪ್ತಿಯ ಪ್ಯಾಕ್ಸ್ಗಳ ಕಾರ್ಯದರ್ಶಿಗಳೇ ಸಂಗ್ರಹಿಸಿ ಕೇಂದ್ರ ಕಚೇರಿಗೆ ಜು .೧ ರೊಳಗೆ ಸಲ್ಲಿಸಲು ಸೂಚಿಸಿದರು .
ಇತರೆ ರೈತರು ಸಾಲ ಪಾವತಿಗೆ ಸೂಚನೆ ಕೋವಿಡ್ನಿಂದಾಗಿ ಸಾಲ ಮರುಪಾವತಿ ೨ ತಿಂಗಳು ಸ್ಥಗಿತಗೊಂಡಿತ್ತು ಎಂದ ಅವರು , ಬಡ್ಡಿರಹಿತ ಸಾಲ ಪಡೆದಿರುವ ರೈತರು , ಮಹಿಳಾ ಸ್ವಸಹಾಯ ಸಂಘಗಳ ಪ್ರತಿನಿಧಿಗಳು ಸಾಲದ ಕಂತು ಮರುಪಾವತಿಸುವ ಮೂಲಕ ಬಡ್ಡಿಯ ಹೊರೆ ಬೀಳದಂತೆ ಎಚ್ಚರವಹಿಸಿ ಎಂದು ಕೋರಿದರು . ರೈತರು , ಮಹಿಳೆಯರು ಪಡೆದ ಸಾಲವನ್ನು ಸಮಯಕ್ಕೆ ಮರುಪಾವತಿಸಿ ಬ್ಯಾಂಕಿನ ಘನತೆ ಹೆಚ್ಚಿಸಿದ್ದೀರಿ , ಇದೀಗ ಕೋವಿಡ್ ಸಂಕಷ್ಟದ ನಂತರವೂ ನೀವು ಬದ್ದತೆಯಿಂದ ಸಾಲ ಮರುಪಾವತಿಸಿ , ಅವಧಿ ಮೀರಿದರ ಬಡ್ಡಿಯ ಹೊರೆ ಬಿದ್ದಿತು ಎಂದರು .
ಡಿಸಿಸಿ ಬ್ಯಾಂಕ್ ರೈತರು , ತಾಯಂದಿರ ಹಿತ ರಕ್ಷಣೆಗೆ ಬದ್ಧವಾಗಿದೆ , ನೀವೇ ಬೆಳೆಸಿರುವ ಬ್ಯಾಂಕನ್ನು ಉಳಿಸಿ ಬೆಳೆಸುವ ಹೊಣೆಯೂ ನಿಮ್ಮದೇ ಆಗಿದೆ , ಸಕಾಲಕ್ಕೆ ಸಾಲದ ಕಂತುಗಳನ್ನು ಮರುಪಾವತಿಸಿ ಎಂದು ಕಿವಿಮಾತು ಹೇಳಿದರು . ಅಪೆಕ್ಸ್ ಬ್ಯಾಂಕಿನ ನಿರ್ಧಾರಕ್ಕೆ ಸ್ವಾಗತ ಬ್ಯಾಂಕಿನ ನಿರ್ದೇಶಕರಾದ ನಾಗನಾಳ ಸೋಮಣ್ಣ , ಎಂ.ಎಲ್.ಅನಿಲ್ಕುಮಾರ್ , ಕೆ.ಎ.ದಯಾನಂದ್ ಮಾತನಾಡಿ , ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಆಫಸ್ಟ್ ಬ್ಯಾಂಕ್ ಉತ್ತಮಕೆ.ವಿ.ದಯಾನಂದ್ ಮಾತನಾಡಿ , ಕೋವಿಚ್ ಸಂಕಷ್ಟದ ಸಂದರ್ಭದಲ್ಲಿ ಅಫೆಕ್ಸ್ ಬ್ಯಾಂಕ್ ನಿರ್ಧಾರ ಮಾಡಿದೆ , ಮೃತ ರೈತ ಕುಟುಂಬಗಳಿಗೆ ನೆರವಾಗುವ ಮೂಲಕ ಅನ್ನದಾತನ ರಕ್ಷಣೆಗೆ ಮುಂದಾಗಿರುವುದು ಸ್ವಾಗತಾರ್ಹ ಎಂದರು .
ಇಡೀ ವಿಶ್ವವನ್ನೇ ಕೋವಿಡ್ ಕಾಡಿದೆ , ಅನ್ನದಾತ ಬೆಳೆದ ಬೆಳೆಗಳಿಗೂ ಬೆಲೆ ಇಲ್ಲದೇ ನೋವುಂಡಿದ್ದಾನೆ , ಕಷ್ಟಪಟ್ಟು ದುಡಿಯುವ ವ್ಯಕ್ತಿಯೇ ಮನೆಯಲ್ಲಿ ಕೋವಿಡ್ಗೆ ಬಲಿಯಾದರೆ ಆ ಕುಟುಂಬ ಸಂಕಷ್ಟಕ್ಕೆ ಸಿಲುಕುತ್ತದೆ , ಇಂತಹ ಸಂದರ್ಭದಲ್ಲಿ ಅನ್ನದಾತನ ನೆರವಿಗೆ ನಿಲ್ಲುವ ದಿಟ್ಟ ನಿರ್ಧಾರ ಕೈಗೊಂಡಿರುವುದು ಶ್ಲಾಘನೀಯ ಎಂದರು . ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕಿನ ಎಜಿಎಂ ಖಲೀಮುಲ್ಲಾ , ಬ್ಯಾಂಕಿನ ಅಧಿಕಾರಿಗಳಾದ ತಿಮ್ಮಯ್ಯ , ಶುಭಾ , ಮಮತಾ ಬಾಲಾಜಿ ಮತ್ತಿತರರಿದರು . ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ<img
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.