ಶಿವಮೊಗ್ಗ(ವಿಶ್ವಕನ್ನಡಿಗ ನ್ಯೂಸ್): ವಿದ್ಯಾರ್ಥಿಗಳ ನಂತರದ ಜೀವನದ ದಾರಿಗಳ ಕುರಿತು ಮಾಹಿತಿ ಒದಗಿಸುವ ಸಲುವಾಗಿ SSF ಶಿವಮೊಗ್ಗ ಜಿಲ್ಲಾ ಸಮಿತಿ ವತಿಯಿಂದ ಜೂನ್ 20 ರ ಭಾನುವಾರ ಮಧ್ಯಾಹ್ನ 03 ಗಂಟೆಗೆ ಕಾರ್ಯಗಾರ ತರಗತಿಯನ್ನು ಯೂಟ್ಯೂಬ್ ನಲ್ಲಿ ನಡೆಸಲಾಗುತ್ತಿದೆ.
SSF ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಉಮರುಲ್ ಫಾರೂಖ್ ಝುಹ್ರಿ ಯವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಮಂಗಳೂರಿನ ರಬ್ಬಾನಿ ಎಜು ಗ್ರೂಪ್ ಇದರ ಕಾರ್ಯದರ್ಶಿಯೂ ಹಾಗೂ ಸುಳ್ಯ ಜಿವಿಎಸ್ ಇದರ ಪ್ರಾಂಶುಪಾಲರಾದ MSM ಅಬ್ದುಲ್ ರಹೀಮ್ ಸರ್ ರವರು ಅತ್ಯುತ್ತಮ ತರಗತಿಯನ್ನು ವಿದ್ಯಾರ್ಥಿಗಳಿಗೆ ನೀಡಲಿದ್ದಾರೆ.
SSF ಕರ್ನಾಟಕ ರಾಜ್ಯ ನಾಯಕರಾದ ಸಯ್ಯಿದ್ ಖಾಲಿದ್ ರಿಪ್ಪನಪೇಟೆ ಯವರು ಉದ್ಘಾಟನೆ ಮಾಡಲಿದ್ದು SSF ಶಿವಮೊಗ್ಗ ಜಿಲ್ಲಾ ವಿಸ್ಡಂ ಕಾರ್ಯದರ್ಶಿ ಅಶ್ರಫ್ ಶಿವಮೊಗ್ಗ ಸ್ವಾಗತಿಸಿ ಹಾಗೂ SSF ಶಿವಮೊಗ್ಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾದಾತ್ ಶಿವಮೊಗ್ಗ ವಂದನಾರ್ಪಣೆ ಮಾಡಲಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.