ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಮಕ್ಕಿಮನೆ ಕಲಾವೃಂದ ಮಂಗಳೂರು ವತಿಯಿಂದ ಅನ್ ಲೈನ್ ಮೂಲಕ ವಿಶ್ವ ಅಪ್ಪಂದಿರ ದಿನಾಚರಣೆಯನ್ನು ಭಾನುವಾರ ವಿಶೇಷವಾಗಿ ಆಚರಿಸಲಾಯಿತು.
ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್ ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು . ಕರ್ನಾಟಕ ಸರ್ಕಾರದ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮೂಡುಬಿದಿರೆ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ. ಎಸ್ ಯಡಪಡಿತ್ತಾಯ, ತುಳು ರಂಗಭೂಮಿ& ಚಲನಚಿತ್ರ ನಟ ಭೋಜಾರಾಜ್ ವಾಮಂಜೂರು, ಕರ್ನಾಟಕ ಪತ್ರಕರ್ತರ ಸಂಘದ ದ.ಕ ಜಿಲ್ಲಾ ಅಧ್ಯಕ್ಷ ಸುದೇಶ್ ಕುಮಾರ್ ಮಂಗಳೂರು, ಶ್ರೀ ರತ್ನಪ್ರತಿಷ್ಠಾನ ದ ಟ್ರಸ್ಟಿ ಮಾಧವ ಎಂ. ಎಸ್ ಶಿವಮೊಗ್ಗ ಉಪಸ್ಥಿತರಿದ್ದು ಶುಭ ಹಾರೈಸಿದರು. ಮಕ್ಕಿಮನೆ ಕಲಾವೃಂದದ ಸುದೇಶ್ ಜೈನ್ ಮಕ್ಕಿಮನೆ , ಮಾಳ ಹರ್ಷೇಂದ್ರ ಜೈನ್ ಬೆಂಗಳೂರು, ತೇಜಸ್ ಜೆ ಬಂಗೇರ ಮತ್ತಿತರರಿದ್ದರು.
ಡಾ. ಪ್ರಭಾತ್ ಬಲ್ನಾಡು ನಿರೂಪಿಸಿದರು, ಮಹಾವೀರ ಪ್ರಸಾದ್ ಹೊರನಾಡು ಪಾರ್ಥನೆ ಹಾಡಿದರು, ಸ್ಪೂರ್ತಿ ಜೈನ್ ಕುಣಿಗಲ್, ನಿರಂಜನ್ ಜೈನ್ ಕುದ್ಯಾಡಿ, ಜಿತ್ತಾ ಜಿತೇಂದ್ರ ಬೆಂಗಳೂರು, ವಜ್ರ ಕುಮಾರ್ ಬೆಂಗಳೂರು ಸಹಕರಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.