ಅನೇಕಲ್ (ವಿಶ್ವ ಕನ್ನಡಿಗ ನ್ಯೂಸ್): ಜಿ.ಎಲ್. ಸ್ಫೂರ್ಟ್ಸ್ ಕಬ್ಬಡ್ದಿ ಸೇವಾ ಟ್ರಸ್ಟ್ ಹಾಗೂ ಬಾಲ್ಯದ ಗೆಳೆಯರ ವತಿಯಿಂದ ಶ್ರೀಮತಿ ಗುಣ ರವರ ಹುಟ್ಟುಹಬ್ಬದ ಅಂಗವಾಗಿ ಮಕ್ಕಳಿಗೆ ಆಹಾರದ ಕಿಟ್ ಗಳನ್ನು ವಿತರಣೆ ಮಾಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಆಹಾರ ಕಿಟ್ ಗಳ ವಿತರಣೆ ಮಾಡುವ ಮೂಲಕ ಚಾಲನೆ ನೀಡಿದ ಶ್ರೀಮತಿ ಗುಣ ರವರು ಮಾತನಾಡುತ್ತಾ “ಕರೋನಾ ಮಹಾಮಾರಿಯ ಈ ಸಂದಿಗ್ದ ಪರಿಸ್ಥಿಯಲ್ಲಿ ಕ್ರೀಡೆಯನ್ನೇ ತನ್ನ ಜೀವಾಳ ಮಾಡಿಕೊಂಡಿರುವ ನೂರಾರು ಮಕ್ಕಳಿಗೆ ನಾವು ಆಹಾರದ ಕಿಟ್ ವಿತರಣೆ ಮಾಡುವ ಕಾರ್ಯ ಮಾಡುತ್ತಿದ್ದೀವಿ, ಎಲ್ಲಾರು ನಿಮ್ಮ ನಿಮ್ಮ ಭಾಗದಲ್ಲಿ ಸಹಾಯ ಮಾಡುವ ಮೂಲಕ ಮಾನವೀಯ ಕಾರ್ಯ ಮಾಡಿ ಹಾಗೇ ಕರೋನಾದಿಂದ ಆಕ್ಸಿಜನ್ ಸಮಸೈ ಉಂಟಾಗಿರುವ ಈ ಪರಿಸ್ಥಿತಿಯಲ್ಲಿ ಪ್ರತಿಯೋಬ್ಬರು ಸಸಿಗಳನ್ನು ಬೆಳೆಸುವ ಮೂಲಕ ಪರಿಸರದ ಬಗ್ಗೆ ಕಾಳಜಿ ಇರಲಿ” ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಕಬ್ಬಡ್ಡಿ ಆಟಗಾರರಾದ (ಸಿಟಿ ಪೋಲಿಸ್) ಗೋಪಾಲ್ ರವರು ಮಾತನಾಡಿ “ಕ್ರೀಡಾ ಕ್ಷೇತ್ರದಲ್ಲಿ ಮಕ್ಕಳ ಪ್ರತಿಭೆಗೆ ಮನ್ನಣೆ ಪ್ರೋತ್ಸಾಹಿಸುವ ಅವರ ಕಷ್ಟದ ಸಂದರ್ಭದಲ್ಲಿ ಅವರಿಗೆ ನೆರವಾಗುವ ಕಾರ್ಯ ಮಾಡುತ್ತಿರುವುದು ಬಹಳ ಉತ್ತಮ ಕಾರ್ಯ” ಎಂದರು.
ಆಹಾರ ಕಿಟ್ ವಿತರಣೆ ಸಂದರ್ಭದಲ್ಲಿ ಮುಖಂಡ ಸುನೀಲ್,ವಿ. ಕುಮಾರಿ ಸುಮ, ನುಕುಲ್, ನವೀನ್, ಕಿರಣ್, ಮನೋಹರ್, ವಿಜಿ, ಆನಂದ್, ತೇಜಸ್, ರವಿ, ನವೀನ್ ಬಾಬು, ಇತರರು ಹಾಜರಿದ್ದರು.
ವರದಿ: ಲಕ್ಕೂರು.ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.