ಮಾಡನ್ನೂರು: ಪವಿತ್ರ ಈದುಲ್ ಅಳ್ ಹಾ ಬಕ್ರೀದ್ ಆಚರಣೆ ಮೊಹಲ್ಲಾ ವ್ಯಾಪ್ತಿಯ ಎರಡು ಮಸೀದಿಗಳಲ್ಲಿ ಈದ್ ನಮಾಝ್
ಮಾಡನ್ನೂರು (www.vknews.com) : ಸಂಕಷ್ಟಗಳ ಸರಮಾಲೆ ಗಳಿಗೆ ತನ್ನನ್ನು ಒಡ್ಡಿಕೊಂಡು ಜಯಶಾಲಿಯಾಗಿ ಖಲೀಲುಲ್ಲಾ ಅದೇ ಅಲ್ಲಾಹನ ಅಪ್ತಮಿತ್ರ ಎಂದು ಕರೆಸಿಕೊಂಡ ತ್ಯಾಗೋಜ್ಜಲ ಬದುಕಿನ ಮಾದರಿ ನಾಯಕ ಹಝ್ರತ್ ಪ್ರವಾದಿ ಇಬ್ರಾಹಿಂ ನೆಬಿ (ಅ.) ಹಾಗೂ ಪುತ್ರ ಇಸ್ಮಾಯಿಲ್ ನೆಬಿ (ಅ.) ರ ಬದುಕಿಗೆ ಸಂಕಷ್ಟಗಳ ಮುಖಾಂತರ ಸಂಭ್ರಮವನ್ನು ಕಲ್ಪಿಸಿದ ಸ್ಮರಣೆಯೊಂದಿಗೆ ಬರುವ ಬಕ್ರೀದ್ ಹಬ್ಬವು ಸಂಕಷ್ಟಗಳೆಡೆಯಲ್ಲೂ ಸಕಾರಾತ್ಮಕ ಚಿಂತನೆಗಳ ಬದುಕಿಗೆ ಪ್ರೇರಣೆಯಾಗಲಿ ಎಂದು ಮಾಡನ್ನೂರ್ ಖತೀಬರಾದ ಸಿರಾಜುದ್ದೀನ್ ಫೈಝಿ ನುಡಿದರು.
ಅವರು ಮಾಡನ್ನೂರು ಕೇಂದ್ರ ಮಸೀದಿಯಲ್ಲಿ ಈದ್ ನಮಾಝ್ ಹಾಗೂ ಕುತುಬಾ ಪಾರಾಯಣದ ನೇತೃತ್ವವಹಿಸಿ ಈದ್ ಸಂದೇಶ ನೀಡಿದರು . ಕೋವಿಡ್ -19 ಸಂದಿಗ್ಧ ಪರಿಸ್ಥಿತಿಯಲ್ಲಿ ಈ ವರ್ಷದ ಈದ್ ಹಾದು ಹೋಗುತ್ತಿದ್ದು , ಪರಸ್ಪರ ಶರೀರಗಳು ದೂರವಿದ್ದರೂ ಮನಸ್ಸುಗಳನ್ನು ಹತ್ತಿರವಾಗಿರಿಸಿ, ಎಲ್ಲರಲ್ಲೂ ಮಾನವೀಯತೆಯನ್ನು ಕಂಡು ಪ್ರೀತಿ, ನಂಬಿಕೆ, ಸಹಕಾರಗಳನ್ನು ದೃಢವಾಗಿ ರಿಸಬೇಕೆಂದರು. ನಮಾಝಿನ ಬಳಿಕ ನಡೆದ ಮಖಾಂ ಝಿಯಾರತ್ತಿಗೆ ನೇತೃತ್ವ ಕೊಟ್ಟ ಖತೀಬರು ಕೋವಿಡ್ ಮುಕ್ತ ಜಗತ್ತಿಗಾಗಿ ವಿಶೇಷ ಪ್ರಾರ್ಥನೆ ನಡೆಸಿದರು.
ಹಿಂದಿನ ಸಂಪ್ರದಾಯದಂತೆ ಮಾಡನ್ನೂರು ಕೇಂದ್ರ ಮಸೀದಿಯಲ್ಲಿ ಮಾತ್ರ ಈದ್ ನಮಾಝ್ ನಡೆಯುತ್ತಿದ್ದು ಪ್ರಸ್ತುತ ಸನ್ನಿವೇಶದಲ್ಲಿ ಜನದಟ್ಟಣೆಯನ್ನು ನಿಯಂತ್ರಿಸಿ ಸಾಮಾಜಿಕ ಅಂತರವನ್ನು ಕಾಪಾಡಿ ನಮಾಝ್ ಮಾಡುವುದು ಅನಿವಾರ್ಯ ವಾದುದರಿಂದ ಮೊಹಲ್ಲಾ ವ್ಯಾಪ್ತಿಯ ಎರಡು ಮಸೀದಿಗಳಲ್ಲಿ ಈದ್ ನಮಾಝ್ ವ್ಯವಸ್ಥೆಗೊಳಿಸಲಾಗಿತ್ತು . ಕಾವು ಮಸೀದಿಯಲ್ಲಿ ಅಬ್ದುಲ್ ಶ್ಶಕೂರ್ ದಾರಿಮಿ ನೇತೃತ್ವದಲ್ಲಿ ಈದ್ ನಮಾಝ್ ನೆರವೇರಿತು. ಜಮಾತ್ ಅಧ್ಯಕ್ಷರಾದ ಕೆ,ಕೆ ಇಬ್ರಾಹೀಂ ಹಾಜಿ, ಜಮಾತ್ ಪ್ರಮುಖರೂ ನೂರುಲ್ ಹುದಾ ಅಕಾಡೆಮಿ ಅಧ್ಯಕ್ಷರೂ ಆದ ಬುಶ್ರಾ ಅಬ್ದುಲ್ ಅಝೀಝ್ ರವರು ಸರ್ವರಿಗೂ ಈದ್ ಶುಭಾಶಯ ಕೋರಿದರು.
ಸರಕಾರದ ನಡವಳಿಗಳ ಪ್ರಕಾರ ಸಾಮೂಹಿಕ ನಮಾಝಿಗೆ ಮಸೀದಿಗೆ ಬರಲು ಅಸಾಧ್ಯವಾದ ವರು ಮನೆಯಲ್ಲೇ ನಮಾಝ್ ನಿರ್ವಹಿಸಿದರು. ಸುರಕ್ಷಾ ನಿಯಮಗಳನ್ನು ಪಾಲಿಸಿ ಸುಸೂತ್ರವಾಗಿ ಈದ್ ನಮಾಝ್ ನೆರವೇರಲು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಸರ್ವರಿಗೂ ಜಮಾಅತ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಮುಸ್ಲಿಯಾರ್ ಕೃತಜ್ಞತೆ ಸಲ್ಲಿಸಿದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.