ಮುಲ್ಕಿ(ವಿಶ್ವಕನ್ನಡಿಗ ನ್ಯೂಸ್): ಶುಕ್ರವಾರದ ಜುಮಾ ನಮಾಜ್ ಗೆ ಬರುವ ವೇಳೆ ಕಳೆದು ಸಿಕ್ಕಿದ ಎಂಟು ಫವನ್ ಚಿನ್ನದ ಸರವನ್ನು ಮುಲ್ಕಿ ಕೊಲ್ನಾಡಿನ ಪೂತ ಪ್ಯಾಮಿಲಿಯ ಉಮರುಲ್ ಫಾರೂಕ್ ಎಂಬವರು ನೇರವಾಗಿ ಮಸೀದಿಯ ಧರ್ಮಗುರು ಎಸ್ ಬಿ ದಾರಿಮಿಯವರಿಗೆ ತಂದು ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ನಂತರ ಜುಮಾ ಭಾಷಣದಲ್ಲಿ ದಾರಿಮಿಯವರು ನೈಜ ವಾರಿಸುದಾರರು ಇದ್ದರೆ ತಿಳಿಸ ಬೇಕಾಗಿ ಹೇಳಿದ್ದರು. ಅದು ಕಾಟಿಪಳ್ಳದ ಮಹಿಳೆಯೊಬ್ಬರದ್ದಾಗಿತ್ತು. ವಿಷಯ ತಿಳಿದು ದಾವಿಸಿಬಂದ ವಾರಸುದಾರರಿಗೆ ಸಾರ್ವಜನಿಕರ ಎದುರಲ್ಲಿ ಹಿಂತಿರುಗಿಸಲಾಯಿತು. ಫಾರೂಕುರವರ ಪ್ರಾಮಾಣಿಕತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಇದೇ ಸಂಧರ್ಭದಲ್ಲಿ ಮಾತನಾಡಿದ ಧರ್ಮಗುರು ಎಸ್ ಬಿ ದಾರಿಮಿ ಫಾರೂಕ್ ರ ಪ್ರಾಮಾಣಿಕತೆಯ ಈ ಮಾದರಿಯನ್ನು ಪ್ರತಿಯೊಬ್ಬರು ಅನುಕರಿಸ ಬೇಕಾಗಿದೆ. ಇಂತಹ ಪುಣ್ಯ ಕೆಲದಿಂದ ಬದುಕಲ್ಲಿ ಶಾಂತಿ ನೆಮ್ಮದಿ ದೊರಕುವುದಲ್ಲದೇ ಪರಲೋಕದಲ್ಲೂ ಇದಕ್ಕೆ ಬಹಳಷ್ಟು ಪ್ರತಿಫಲ ಸಿಗಲಿದೆ ಎಂದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.