ಕೋಲಾರ (ವಿಶ್ವ ಕನ್ನಡಿಗ ನ್ಯೂಸ್ ):– ಹಿಪ್ಪುನೇರಳೆಯನ್ನು ಕಾಡುತ್ತಿರುವ ರಸಹೀರುವ ಡ್ರಿಪ್ ಕೀಟಗಳ ಹಾವಳಿ ಕುರಿತು ರೇಷ್ಮೆ ಇಲಾಖೆ ಅಧಿಕಾರಿಗಳು ತಂತ್ರಜ್ಞರು ತಾಲ್ಲೂಕಿನ ಚೌಡದೇನಹಳ್ಳಿ , ದಿನ್ನಹೊಸಹಳ್ಳಿ ಗ್ರಾಮಗಳ ರೈತರ ತೋಟಗಳಿಗೆ ಭೇಟಿ ನೀಡಿ ಮುಂಜಾಗ್ರತಾ ಕ್ರಮ ಹಾಗೂ ತಾಂತ್ರಿಕ ಸಲಹೆಗಳನ್ನು ನೀಡಿದರು.
ತಲಘಟ್ಟಪುರದ ಕರ್ನಾಟಕ ರೇಷ್ಮೆ ಸಂಶೋಧನಾ ಸಂಸ್ಥೆಯ ಸಂಪನ್ಮೂಲ ಅಧಿಕಾರಿ ಬಿ.ಎಸ್ ಅಭಿಷೇಕ್ , ವೇಮಗಲ್ ವಿಸ್ತರಣಾಧಿಖಾರಿ ಎನ್.ಚಂದ್ರಶೇಖರಗೌಡ , ಹೊಳೂರು ವಿಸ್ತರಣಾಧಿಕಾರಿ ಎಂ.ಎಸ್.ಕಲ್ಯಾಣಸ್ವಾಮಿ , ವಕ್ಕಲೇರಿ ವಲಯಾಧಿಕಾರಿ ನಾರಾಯಣಸ್ವಾಮಿ ಮತ್ತು ವಾಸುದೇವ್ರಿದ್ದ ತಂಡ ಥಿಪ್ ಕೀಟಗಳ ತಡೆಗೆ ರೈತರಿಗೆ ಅರಿವು ಮೂಡಿಸಿತು. ಅಪ್ ಕೀಟದ ಮೊಟ್ಟೆಯೂ ಗೋಳಾಕಾರವಾಗಿದ್ದು , ಬಿಳಿಯ ಬಣ್ಣದಿಂದ ಕೂಡಿರುತ್ತದೆ , ಮರಿಗಳು , ಪ್ರೌಢ ಹುಳುಗಳು ಎಲೆಗಳ ಕೆಳಭಾಗದಲ್ಲಿದ್ದುಕೊಂಡು ಸೊಪ್ಪನ್ನು ಕೊರೆದು ರಸ ಹೀರುತ್ತವೆ ಎಂದು ತಜ್ಞರು ರೈತರಿಗೆ ವಿವರಿಸಿದರು.
ಈ ಕೀಟದ ಹಾವಳಿಯಂದ ಕುಡಿ , ಎಲೆಗಳು ಮೇಲುಕವಾಗಿ ಮುದುಡಿಕೊಂಡು ಸುಕ್ಕುಗಟ್ಟಿದಂತೆ ಕಾಣುತ್ತವೆ ಎಂದು ತಿಳಿಸಿ , ಇದರಿಂದ ಹುಳುಗಳಿಗೆ ಸೂಕ್ತ ರೀತಿಯಲ್ಲಿ ಸೊಪ್ಪು ಸಿಗುವುದಿಲ್ಲ ಎಂದು ಜೈವಿಕ ನಿಯಂತ್ರಕಗಳಾದ ಪರಭಕ್ಷಕ ಕೀಟಗಳನ್ನು , ಅಜೀಶಿಯಾಸ್ ಓವಾಲಿಸ್ಗಳನ್ನು ಹಿಪ್ಪುನೇರಳೆ ತೋಟಗಳಲ್ಲಿ ಬಿಡಬೇಕು ಎಂದರು.
ಜತೆಗೆ ಶೇ .3 ರ ಸಲ್ಪರ್ ಲೀಟರಿಗೆ ೩ ವಾಲಿ ಗ್ರಾಂನಂತೆ ಎಕರೆಗೆ ೪೫೦ ಗ್ರಾಂ ಸಲ್ಪರ್ ಪುಡಿಯನ್ನು ೧೫೦ ಕೋಟರ್ ನೀರಿನಲ್ಲಿ ಬೆರೆಸಿ ಗಿಡದ ಎಲ್ಲಾ ಭಾಗಗಳು ನೆನಯುವಂತೆ ಸಿಂಪಡಿಸಲು ಸಲಹೆ ನೀಡಿದರು. ಅಥವಾ ನಾಶಿನಾಶಕಗಳಾದ ರ್ಪಸಾಜಕಿಸ್ ಡ ಕೋಟೆಗಳನ್ನು ಸಿಂಪಡಿಸಿ , ತಡೆಗಟ್ಟಬಹುದು ಎಂದು ವಿವರಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.