ಕೋಲಾರ (ವಿಶ್ವಕನ್ನಡಿಗ ನ್ಯೂಸ್):– ನಮ್ಮ ಗ್ರಾಮ, ನಮ್ಮ ಸ್ವಚ್ಛತೆ, ನಮ್ಮ ಕರ್ತವ್ಯ ಎಂದು ಅರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕೆ ಎಮ್ ನಾರಾಯಣಸ್ವಾಮಿ ಅವರು ಹೇಳಿದರು.
ತಾಲೂಕಿನ ಅರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಡಿಕಣ್ಣೂರು ಗ್ರಾಮದಲ್ಲಿ ಅರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಕಸದ ಬುಟ್ಟಿ ವಿತರಣೆ ಕಾರ್ಯಕ್ರಮ ವನ್ನು ಉದ್ದೇಶಿಸಿ ಅವರು ಮಾತನಾಡುತ್ತ. ಇತ್ತೀಚಿಗೆ ಮಕ್ಕಳು ತಿನ್ನುವ ತಿಂಡಿ ತಿನಿಸುಗಳು ಅನೇಕ ರೀತಿಯಲ್ಲಿ ನಾನಾ ರುಚಿಯಲ್ಲಿ ತಯಾರಾಗಿತ್ತಿವೆ. ಅವುಗಳನ್ನು ಪ್ಲಾಸ್ಟಿಕ್ ಕವರ್ ಗಳಲ್ಲಿ ವಿವಿಧ ರೀತಿಯಲ್ಲಿ ಪ್ಯಾಕಿಂಗ್ ಮಾಡಲಾಗುತ್ತಿದೆ.
ಮಕ್ಕಳು ತಿಂಡಿ ತಿನುಸುಗಳನ್ನು ತಿಂದು ಕವರ್ ಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಾರೆ. ಅವುಗಳು ಚರಂಡಿ ಹಾಗೂ ನೀರು ನಿಲ್ಲುವ ಹಳ್ಳದಲ್ಲಿ ಬಿದ್ದು ಚರಂಡಿಯಲ್ಲಿ ಹರಿದು ಹೋಗುವ ಕೊಳಚೆ ನೀರನ್ನು ತಡೆಯುತ್ತವೆ. ಕೊಳಚೆ ನೀರು ಒಂದೇ ಜಾಗದಲ್ಲಿ ನಿಲ್ಲುವುದರಿಂದ ಅಲ್ಲಿ ಸೊಳ್ಳೆಗಳು. ನೊಣಗಳು ಇನ್ನಿತರೇ ಕ್ರಿಮಿಕೀಟಗಳು ಉತ್ತತ್ತಿಯಾಗಿ ಅವುಗಳಿಂದ ಡೆಂಗ್ಯೂ , ಚಿಕನ್ ಗುನ್ಯಾ ಗಳಂತಹ ಅನೇಕ ಕಾಯಿಲೆಗಳು ಬರುತ್ತಿವೆ.
ನಮ್ಮ ಈ ವಯಸ್ಸಿಗೆ ಎಲ್ಲಾ ಮಾದರಿ ಕಾಯಿಲೆಗಳನ್ನು ನಾವು ನೋಡಿದ್ದೇವೆ. ಇತ್ತೀಚಿನ ದಿನದಲ್ಲಿ ಬಂದಂತಹ ಕೊರೋನಾ ಕಾಯಿಲೆಯಿಂದ ಸಾವಿರಾರು ಜನರು ಸತ್ತಿದ್ದಾರೆ. ಹಾಗಾಗಿ ಇನ್ನಾದರೂ ಈ ಕಾಯಿಲೆ ರೋಗ ಎನ್ನುವ ಆತಂಕದಿಂದ ದೂರವಿರೋಣ.
ನಮ್ಮ ಮುಂದಿನ ಪೀಳಿಗೆ ಮಕ್ಕಳನ್ನ ಉತ್ತಮ ಅರೋಗ್ಯದಿಂದ ರಕ್ಷಿಸೋಣ. ಹಾಗಾಗಿ ಈಗಲೇ ನಾವೆಲ್ಲ ಎಚ್ಚೆತ್ತುಕೊಂಡು ಇದು ನಮ್ಮ ಗ್ರಾಮ ನಮ್ಮ ಸ್ವಚ್ಛತೆ ನಾವೇ ರಕ್ಷಣೆ ಮಾಡಿಕೊಳ್ಳಬೇಕು.ಇದು ನಮ್ಮ ಕರ್ತವ್ಯ ಎಂಬ ಭಾವನೆಯಿಂದ ಗ್ರಾಮದ ಅಭಿವೃದ್ಧಿ ಕೆಲಸವನ್ನು ಮಾಡೋಣ. ಒಟ್ಟಿನಲ್ಲಿ ಸ್ವಚ್ಛ ಮುಕ್ತ ಗ್ರಾಮವನ್ನಾಗಿಸುವ ಉದ್ದೇಶ ನಮ್ಮದು ಆ ನಿಟ್ಟಿನಲ್ಲಿ ಗ್ರಾಮದ ಹಿರಿಯರು ಕಿರಿಯರು ಹೆಚ್ಚಾಗಿ ಮಹಿಳೆಯರು ಈ ಕಾರ್ಯಕ್ಕೆಸಹಕರಿಸಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಮಂಜುನಾಥ್ ,ಎಚ್ ಏನ್. ನಾರಾಯಣಸ್ವಾಮಿ , ಗ್ರಾಮ ಪಂಚಾಯಿತಿ ಸದಸ್ಯರುಗಳಾದ ರತ್ನಮ್ಮ ರಾಜಣ್ಣ , ಎ ನಾರಾಯಣಸ್ವಾಮಿ , ಮಂಜುಳ ನಾರಾಯಣಸ್ವಾಮಿ, ನಾಗರತ್ನಮ್ಮ ಗ್ರಾಮಸ್ಥರಾದ ಕಾಕಣ್ಣನವರ ರೆಡ್ಡಪ್ಪ , ಅಲ್ಲಾ ಬಕಾಷ್ , ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಶಿವಾನಂದ, ಕಾರ್ಯದರ್ಶಿ ನಾಗರಾಜ್ , ಗ್ರಾಮ ಪಂಚಾಯಿತಿ ಸಿಬ್ಬಂದಿ ನಾರಾಯಣಮೂರ್ತಿ ,ಸೇರಿದಂತೆ ಇತರರು ಇದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.