ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಮಾಲೂರು-ಹೊಸಕೋಟೆ ಮುಖ್ಯರಸ್ತೆ ಗುಂಡಿಗಳಿಂದ ಸಾವನ್ನು ಕೈ ಚಾಚಿ ಕರೆಯುವ ಮೂಲಕ ಮೃತ್ಯು ಕೂಪವಾಗಿದೆ ಎಂದು ಬೆಳಿಗ್ಗೆ VK news ಸುದ್ದಿಮಾಡುವ ಮೂಲಕ ಜನರ ದನಿಯಾಗಿ ನಿಂತಿತ್ತು ಈ ಸಮಸೈಗೆ ಲೋಕೋಪಯೋಗಿ ಇಲಾಖೆ ಹಾಗೂ ತಾಲ್ಲೂಕಿನ ಶಾಸಕರು ಸ್ಪಂದಿಸುವ ಮೂಲಕ ಸಹಕರಿಸಿದ್ದಾರೆ.
ಈ ಬಗ್ಗೆ ವಿಶ್ವಮಾನವ ಕುವೆಂಪು ಫೌಂಡೇಶನ್ (ರಿ.) ರಾಜ್ಯ ಸಂಚಾಲಕರು ಹಾಗೂ ಕನ್ನಡ ಹೋರಾಟಗಾರರಾದ ದೊಡ್ಡಕಲ್ಲಹಳ್ಳಿ ಮಂಜುನಾಥ್ ಮಾತನಾಡಿ “ಬೆಳಿಗ್ಗೆ ಹಳ್ಳ-ಕೊಳ್ಳಗಳಿಂದ ಕೂಡಿದ ರಸ್ತೆ ಬಗ್ಗೆ ಸುದ್ದಿಮಾಡಿ ಗಮನ ಸೇಳಿದಿದ್ದ VK news ನ ಮನವಿಗೆ ಸ್ಪಂದಿಸುವ ಮೂಲಕ ಗುಂಡಿಗಳನ್ನು ಮುಚ್ಚುವ ಕಾರ್ಯ ಮಾಡುತ್ತಿರುವ ಶಾಸಕರಿಗೆ, ಲೋಕೋಪಯೋಗಿ ಇಲಾಖೆಯವರಿಗೆ ಸಮಸ್ತ ಸಾರ್ವಜನಿಕರ ಪರವಾಗಿ ನಾವು ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಿದ್ದೆವೆ” ಎಂದರು.
ವರದಿ:ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.