(www.vknews.in) : ದಲಿತರ ನಂತರ ರಾಜ್ಯದ ಅತೀ ದೊಡ್ಡ ಸಮುದಾಯವಾದ ಮುಸ್ಲಿಮರಿಗೆ ಯಡಿಯೂರಪ್ಪ ಸರಕಾರದಲ್ಲಿ ಮಣೆ ಹಾಕದೇ ಇದ್ದದ್ದು ಆ ಸಮುದಾಯದೊಂದಿಗೆ ತೋರಿದ ಘೋರ ಅನ್ಯಾಯವಾಗಿತ್ತು. ಇದು ಸಾಮಾಜಿಕ ನ್ಯಾಯ ಪಾಲನೆಯ ನಿಟ್ಟಿನಲ್ಲಿ ಎಸಗಿದ ದ್ರೋಹವೂ ಆಗಿದೆ.
ಆದ್ದರಿಂದ ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ತನ್ನ ಸಚಿವ ಸಂಪುಟದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಕನಿಷ್ಟ ನಾಲ್ವರನ್ನಾದರೂ ಸಚಿವರನ್ನಾಗಿ ಮಾಡಿ ದಲಿತರಿಗಿಂತಲೂ ಶೋಚನೀಯ ಸ್ಥಿತಿಯಲ್ಲಿರುವ ಮುಸ್ಲಿಮರನ್ನು ದೇಶದ ಮುಖ್ಯವಾಹಿನಿಯಲ್ಲಿ ತೊಡಗಿಸಿ ಕೊಳ್ಳಲು ಅನುವು ಮಾಡಿ ಕೊಡಬೇಕಾಗಿದೆ ಎಂದು ಇಸ್ಲಾಮಿಕ್ ಧಾರ್ಮಿಕ ಪಂಡಿತ ಎಸ್ ಬಿ ದಾರಿಮಿ ಆಗ್ರಹಿಸಿದ್ದಾರೆ.
ರಾಜ್ಯ ಸ್ಥಾಪನೆಯಾಗಿ ನಂತರದಿಂದ ರಾಜ್ಯದ ಅಹಿಂದ ವರ್ಗದ ಮುಖ್ಯಮಂತ್ರಿಗಳು ಅತೀ ಕಡಿಮೆ ಅವಧಿಯಲ್ಲಿ ಆಡಳಿತ ನಡೆಸಿದ್ದು ಒಕ್ಕಲಿಗ ಮತ್ತು ಲಿಂಗಾಯಿತ ಜನಾಂಗಕ್ಕೆ ಮುಖ್ಯಮಂತ್ರಿ ಸ್ಥಾನ ಮೀಸಲಿಟ್ಟಂತಿದೆ. ಆದ್ದರಿಂದ ಸಂವಿದಾನದ ಆಶಯವನ್ನು ಪ್ರಾಯೋಗಿಕವಾಗಿ ಜಾರಿ ಗೊಳಿಸುವ ಸಲುವಾಗಿ ಎಲ್ಲಾ ಜಾತಿ ಜನಾಂಗದವರಿಗೆ ಅಧಿಕಾರದಲ್ಲಿ ಸಮಪಾಲು ನೀಡಲು ಪ್ರತೀ ರಾಜಕೀಯ ಪಕ್ಷಗಳು ಮುಂದೆ ಬರಬೇಕಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.